ಕೂಡಲಸಂಗಮದಲ್ಲಿ ರಾಹುಲ್ ಗಾಂಧಿ, ಬಸವಣ್ಣನವರ ಸತ್ಯದ ಮಾರ್ಗದ ವಿಶ್ಲೇಷಣೆ
ಬಾಗಲಕೋಟೆ ವಿಡಿಯೋಗಳಿಗೆ ಚಂದಾದಾರರಾಗಿ
ಕೂಡಲಸಂಗಮ: ಪ್ರಜಾಪ್ರಭುತ್ವ ಮತ್ತು ದೇಶದ ಸಂಸತ್ ರೂಪುಗೊಳ್ಳಲು ಬಸವಣ್ಣ ಮತ್ತು ಶರಣರ ಕಾಯಕದ ಫಲವಿದೆ. ವಚನವನ್ನು ಕತ್ತಲಲ್ಲಿ ಇದ್ದವರಿಗೆ ಬೆಳಕನ್ನು ನೀಡುತ್ತದೆ. ನಮ್ಮನ್ನೇ ನಾವು ಪ್ರಶ್ನೆ ಮಾಡಿಕೊಳ್ಳುವುದು ಸುಲಭದಲ್ಲ, ಬೇರೆಯವರನ್ನು ಪ್ರಶ್ನಿಸುವುದು ಸುಲಭ ಎಂದು ರಾಹುಲ್ ಗಾಂಧಿ ಹೇಳಿದರು.
ಬಸವ ಜಯಂತಿಯ ಪ್ರಯುಕ್ತ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಭಾನುವಾರ ಕೂಡಲಸಂಗಮಕ್ಕೆ ಭೇಟಿ ನೀಡಿದರು. ಎಂಟು ವರ್ಷ ವಯಸ್ಸಿನ ಬಸವಣ್ಣನಿಗೆ ಇಂಥ ಆಲೋಚನೆಗೆ ಹೇಗೆ ಬಂದವು ಎಂದು ಸ್ವಾಮೀಜಿ ಅವರಲ್ಲಿ ಕೇಳಿದೆ. 'ಬಸವಣ್ಣನವರ ಗೆಳೆಯರಿದ್ದರು, ಅವರ ಪರಿಸ್ಥಿತಿಯನ್ನು ಕಂಡ ಬಸವಣ್ಣವರಿಗೆ ಪ್ರಶ್ನೆಗಳು ಹುಟ್ಟಿದವು. ಸಮಾಜದ ಬಗ್ಗೆ, ಪ್ರಜಾಪ್ರಭುತ್ವದ ಬಗ್ಗೆ ತಮ್ಮನ್ನು ತಾವು ಪ್ರಶ್ನಿಸಿಕೊಂಡರು. ಮನಸ್ಸಿನಲ್ಲಿ ಮೂಡಿದ ಉತ್ತರಗಳನ್ನು ತಮ್ಮ ಜೀವನಪೂರ್ತಿ ಅದನ್ನು ಪಾಲನೆ ಮಾಡಿದರು' ಎಂದರು.
''ಬಹಳಷ್ಟು ಜನರು ನಿಜವನ್ನು ತಿಳಿದಿರುತ್ತಾರೆ. ಅದರ ಬಗ್ಗೆ ಗೊತ್ತಿರುತ್ತದೆ, ನಿಜದ ಬಗ್ಗೆ ಗೊತ್ತಿದ್ದರೂ ಸುಮ್ಮನಾಗುತ್ತಾರೆ. ಹೆದರಿಕೆಯಿಂದಾಗಿ ಅವರು ಸುಮ್ಮನಾಗುತ್ತಾರೆ. ಆದರೆ, ಬಸವಣ್ಣವರು ನಿಜವನ್ನು ಸಮಾಜದ ಮುಂದೆ ಇಟ್ಟರು. ಸಮಾಜದ ಮುಂದೆ ಸತ್ಯವನ್ನು ಹೇಳುವುದು ಕಷ್ಟವಾಗಿರುತ್ತದೆ. ಅವರ ಮೇಲೆ ಆಕ್ರಮಣ ಆಯ್ತು, ನಿಂದಿಸಲಾಯಿತು, ಬೆದರಿಸಲಾಯಿತು, ಆದರೆ ಅವರು ಸತ್ಯದ ಮಾರ್ಗದಿಂದ ಹೊರಬರಲಿಲ್ಲ. ಅದಕ್ಕಾಗಿ ನಾವು ಅವರ ಮುಂದೆ ಹೂವುಗಳನ್ನು ಇಡುತ್ತಿದ್ದೇವೆ'' ಎಂದು ರಾಹುಲ್ ಗಾಂಧಿ ಹೇಳಿದರು.
ಬಸವ ಜಯಂತಿಯ ಪ್ರಯುಕ್ತ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಭಾನುವಾರ ಕೂಡಲಸಂಗಮಕ್ಕೆ ಭೇಟಿ ನೀಡಿದರು. ಎಂಟು ವರ್ಷ ವಯಸ್ಸಿನ ಬಸವಣ್ಣನಿಗೆ ಇಂಥ ಆಲೋಚನೆಗೆ ಹೇಗೆ ಬಂದವು ಎಂದು ಸ್ವಾಮೀಜಿ ಅವರಲ್ಲಿ ಕೇಳಿದೆ. 'ಬಸವಣ್ಣನವರ ಗೆಳೆಯರಿದ್ದರು, ಅವರ ಪರಿಸ್ಥಿತಿಯನ್ನು ಕಂಡ ಬಸವಣ್ಣವರಿಗೆ ಪ್ರಶ್ನೆಗಳು ಹುಟ್ಟಿದವು. ಸಮಾಜದ ಬಗ್ಗೆ, ಪ್ರಜಾಪ್ರಭುತ್ವದ ಬಗ್ಗೆ ತಮ್ಮನ್ನು ತಾವು ಪ್ರಶ್ನಿಸಿಕೊಂಡರು. ಮನಸ್ಸಿನಲ್ಲಿ ಮೂಡಿದ ಉತ್ತರಗಳನ್ನು ತಮ್ಮ ಜೀವನಪೂರ್ತಿ ಅದನ್ನು ಪಾಲನೆ ಮಾಡಿದರು' ಎಂದರು.
''ಬಹಳಷ್ಟು ಜನರು ನಿಜವನ್ನು ತಿಳಿದಿರುತ್ತಾರೆ. ಅದರ ಬಗ್ಗೆ ಗೊತ್ತಿರುತ್ತದೆ, ನಿಜದ ಬಗ್ಗೆ ಗೊತ್ತಿದ್ದರೂ ಸುಮ್ಮನಾಗುತ್ತಾರೆ. ಹೆದರಿಕೆಯಿಂದಾಗಿ ಅವರು ಸುಮ್ಮನಾಗುತ್ತಾರೆ. ಆದರೆ, ಬಸವಣ್ಣವರು ನಿಜವನ್ನು ಸಮಾಜದ ಮುಂದೆ ಇಟ್ಟರು. ಸಮಾಜದ ಮುಂದೆ ಸತ್ಯವನ್ನು ಹೇಳುವುದು ಕಷ್ಟವಾಗಿರುತ್ತದೆ. ಅವರ ಮೇಲೆ ಆಕ್ರಮಣ ಆಯ್ತು, ನಿಂದಿಸಲಾಯಿತು, ಬೆದರಿಸಲಾಯಿತು, ಆದರೆ ಅವರು ಸತ್ಯದ ಮಾರ್ಗದಿಂದ ಹೊರಬರಲಿಲ್ಲ. ಅದಕ್ಕಾಗಿ ನಾವು ಅವರ ಮುಂದೆ ಹೂವುಗಳನ್ನು ಇಡುತ್ತಿದ್ದೇವೆ'' ಎಂದು ರಾಹುಲ್ ಗಾಂಧಿ ಹೇಳಿದರು.