Gadag: ರಾಮುಲು ಬಾದಾಮಿಯಲ್ಲಿ ಹೆಚ್ಚು ಓಡಾಡಿದ್ರೆ ಸಿದ್ದರಾಮಯ್ಯ ಎಲ್ಲಾ ಕಡೆ ಮಾಜಿ ಆಗ್ತಿದ್ದರು - ಪ್ರಹ್ಲಾದ್ ಜೋಶಿ
1003 views
ಬಾಗಲಕೋಟೆ ವಿಡಿಯೋಗಳಿಗೆ ಚಂದಾದಾರರಾಗಿಗದಗ: ನಾನು ನನ್ನ ಕುಟುಂಬದಿಂದ ಯಾರನ್ನು ರಾಜಕೀಯಕ್ಕೆ ತರುವುದಿಲ್ಲ, ನೀವು ಹೀಗೆ ಹೇಳುತ್ತೀರಾ ಕುಮಾರಸ್ವಾಮಿಯವರೇ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸವಾಲ್ ಹಾಕಿದರು. ದೇಶ, ರಾಜ್ಯದಲ್ಲಿ ಯಾರ ಗುಂಡಿ ಯಾರು ತೋಡಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಜೆಡಿಎಸ್ ಅಂದ್ರೆ ಕುಮಾರಸ್ವಾಮಿ ಕುಟುಂಬವೇ ಒಂದು ಪಕ್ಷನಾ? ದೇವೆಗೌಡರು, ಕುಮಾರಸ್ವಾಮಿ, ರೇವಣ್ಣ, ಪ್ರಜ್ವಲ್ ರೇವಣ್ಣ, ಸೂರಜ್, ನಿಖಿಲ್, ಭವಾನಿ ರೇವಣ್ಣ ಹಾಗೂ ಅನಿತಾ ಕುಮಾರಸ್ವಾಮಿ ಇವರಷ್ಟೇ ಒಂದು ಪಕ್ಷ ಅಂತ ಪ್ರಶ್ನಿಸಿದರು.
ಪಾರ್ಟಿ ಅಂದರೇನು ಇವರೇ ನಾ..? ಇದರಲ್ಲೇ ಭ್ರಷ್ಟಾಚಾರ ಇದೆ ಅನ್ನೊದು ಗೊತ್ತಾಗುತ್ತದೆ, ನಾನು ರಾಜಕೀಯಕ್ಕೆ ಬಂದು 25 ವರ್ಷವಾಯಿತು.
ನಾನು ಖಡಾಖಂಡಿತವಾಗಿ ಹೇಳುತ್ತೇನೆ. ಪ್ರಧಾನಿ ಮೋದಿಯವರ ಆದರ್ಶ ಪಾಲನೆ ಮಾಡುತ್ತೇನೆ, ನಾನು ನನ್ನ ಕುಟುಂಬದಿಂದ ಯಾರನ್ನು ರಾಜಕೀಯಕ್ಕೆ ತರುವುದಿಲ್ಲ. ನೀವು ಹೇಳಿತ್ತೀರಾ ಹೀಗೆ..? ಯಾಕೆ ಇದರಲ್ಲಿ ದುಡ್ಡು ಇದೆ. ಅಧಿಕಾರ ಇದೆ ಅಂತ ನಿಮ್ಮ ಕುಟುಂಬದವರನ್ನೇ ರಾಜಕೀಯಕ್ಕೆ ತರುತ್ತೀರಾ ಎಂದು ಪ್ರಶ್ನೆ ಮಾಡಿದರು.
ಕೇಂದ್ರ ಸಚಿವ ಅಮಿತ್ ಶಾ ದೇವೇಗೌಡರ ಉಗುರಿಗೆ ಸಮ ಇಲ್ಲ ಎಂಬ ಮಾತಿಗೆ ಉತ್ತರಿಸಿದ ಅವರು ಯಾರು ಉಗುರಿಗೆ ಯಾರು ಸಮ ಅನ್ನೋದನ್ನ ಜನರು ತೀರ್ಮಾನ ಮಾಡುತ್ತಾರೆ. 2019ರಲ್ಲಿ ಅಮಿತ್ ಶಾ ಅವರು ಪ್ರಧಾನಿ ನೇತೃತ್ವದಲ್ಲಿ ಸಂಘಟನಾತ್ಮಕ ಸಾರಥ್ಯವನ್ನ ವಹಿಸಿದ್ದರು. ಆವಾಗ 304 ಸೀಟ್ಗಳನ್ನ ಗಳಿಸಿದ್ದೇವೆ. ಯಾರ ಉಗುರಿಗೆ ಯಾರ ಸಮ ಇಲ್ಲ ಅನ್ನೊದನ್ನ ಜನ ತೀರ್ಮಾನಿಸುತ್ತಾರೆ.
ಗದಗದಲ್ಲಿ ಕಲಾವಿದನ ಕೈಹಿಡಿದ ಭೂತಾಯಿ; ಒಂದು ಕ್ವಿಂಟಲ್ ಮೆಣಸಿನಕಾಯಿಗೆ 70,199 ರೂ. ದಾಖಲೆ ಬೆಲೆ
ಸಿದ್ದರಾಮಯ್ಯನವರದ್ದು ಒಂದು ಡ್ರಾಮ ಬಾಜಿ ಕಂಪನಿ ಇದ್ದಂತೆ ಅವರಿಗೆ ಎಲ್ಲಿ ನಿಂತರು ಗೆಲುತ್ತೇನೆ ಎಂಬ ಸಾಮರ್ಥ್ಯ ಇಲ್ಲ ಎಂದು ಜೋಶಿ ವ್ಯಂಗ್ಯವಾಡಿದರು. ಸಿದ್ದರಾಮಯ್ಯ ಜನರ ಜೊತೆ ಸರಿಯಾಗಿ ಸಂಪರ್ಕ ಇಟ್ಟಿಕೊಂಡಿಲ್ಲ. ಐದು ವರ್ಷಗಳ ಪೂರ್ಣ ಮುಖ್ಯಮಂತ್ರಿಯಾಗಿ ಚಾಮುಂಡೇಶ್ವರಿಯಲ್ಲಿ ಯಾಕೆ ಸೋತರು, ಕ್ಷೇತ್ರದಲ್ಲಿ ಕೆಲಸ ಮಾಡಿಲ್ಲ, ಜನರ ಅಭಿಪ್ರಾಯ ಸರಿ ಇರಲಿಲ್ಲ. ಬಾದಾಮಿಯಲ್ಲಿ ಕೇವಲ 1600-1700 ಮತಗಳಿಂದ ಗೆಲವು ಸಾಧಿಸಿದ್ದಾರೆ. ರಾಮುಲು ಬಾದಾಮಿಗೆ ಹೆಚ್ಚು ಒಲವು ತೋರಿಸಿದ್ದರೆ ಆಗ ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿ, ಮಾಜಿ ವಿರೋಧ ಪಕ್ಷದ ನಾಯಕ, ಮಾಜಿ ಶಾಸಕರಾಗುತ್ತಿದ್ದರು ಎಂದು ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದರು.
ಪಾರ್ಟಿ ಅಂದರೇನು ಇವರೇ ನಾ..? ಇದರಲ್ಲೇ ಭ್ರಷ್ಟಾಚಾರ ಇದೆ ಅನ್ನೊದು ಗೊತ್ತಾಗುತ್ತದೆ, ನಾನು ರಾಜಕೀಯಕ್ಕೆ ಬಂದು 25 ವರ್ಷವಾಯಿತು.
ನಾನು ಖಡಾಖಂಡಿತವಾಗಿ ಹೇಳುತ್ತೇನೆ. ಪ್ರಧಾನಿ ಮೋದಿಯವರ ಆದರ್ಶ ಪಾಲನೆ ಮಾಡುತ್ತೇನೆ, ನಾನು ನನ್ನ ಕುಟುಂಬದಿಂದ ಯಾರನ್ನು ರಾಜಕೀಯಕ್ಕೆ ತರುವುದಿಲ್ಲ. ನೀವು ಹೇಳಿತ್ತೀರಾ ಹೀಗೆ..? ಯಾಕೆ ಇದರಲ್ಲಿ ದುಡ್ಡು ಇದೆ. ಅಧಿಕಾರ ಇದೆ ಅಂತ ನಿಮ್ಮ ಕುಟುಂಬದವರನ್ನೇ ರಾಜಕೀಯಕ್ಕೆ ತರುತ್ತೀರಾ ಎಂದು ಪ್ರಶ್ನೆ ಮಾಡಿದರು.
ಕೇಂದ್ರ ಸಚಿವ ಅಮಿತ್ ಶಾ ದೇವೇಗೌಡರ ಉಗುರಿಗೆ ಸಮ ಇಲ್ಲ ಎಂಬ ಮಾತಿಗೆ ಉತ್ತರಿಸಿದ ಅವರು ಯಾರು ಉಗುರಿಗೆ ಯಾರು ಸಮ ಅನ್ನೋದನ್ನ ಜನರು ತೀರ್ಮಾನ ಮಾಡುತ್ತಾರೆ. 2019ರಲ್ಲಿ ಅಮಿತ್ ಶಾ ಅವರು ಪ್ರಧಾನಿ ನೇತೃತ್ವದಲ್ಲಿ ಸಂಘಟನಾತ್ಮಕ ಸಾರಥ್ಯವನ್ನ ವಹಿಸಿದ್ದರು. ಆವಾಗ 304 ಸೀಟ್ಗಳನ್ನ ಗಳಿಸಿದ್ದೇವೆ. ಯಾರ ಉಗುರಿಗೆ ಯಾರ ಸಮ ಇಲ್ಲ ಅನ್ನೊದನ್ನ ಜನ ತೀರ್ಮಾನಿಸುತ್ತಾರೆ.
ಗದಗದಲ್ಲಿ ಕಲಾವಿದನ ಕೈಹಿಡಿದ ಭೂತಾಯಿ; ಒಂದು ಕ್ವಿಂಟಲ್ ಮೆಣಸಿನಕಾಯಿಗೆ 70,199 ರೂ. ದಾಖಲೆ ಬೆಲೆ
ಸಿದ್ದರಾಮಯ್ಯನವರದ್ದು ಒಂದು ಡ್ರಾಮ ಬಾಜಿ ಕಂಪನಿ ಇದ್ದಂತೆ ಅವರಿಗೆ ಎಲ್ಲಿ ನಿಂತರು ಗೆಲುತ್ತೇನೆ ಎಂಬ ಸಾಮರ್ಥ್ಯ ಇಲ್ಲ ಎಂದು ಜೋಶಿ ವ್ಯಂಗ್ಯವಾಡಿದರು. ಸಿದ್ದರಾಮಯ್ಯ ಜನರ ಜೊತೆ ಸರಿಯಾಗಿ ಸಂಪರ್ಕ ಇಟ್ಟಿಕೊಂಡಿಲ್ಲ. ಐದು ವರ್ಷಗಳ ಪೂರ್ಣ ಮುಖ್ಯಮಂತ್ರಿಯಾಗಿ ಚಾಮುಂಡೇಶ್ವರಿಯಲ್ಲಿ ಯಾಕೆ ಸೋತರು, ಕ್ಷೇತ್ರದಲ್ಲಿ ಕೆಲಸ ಮಾಡಿಲ್ಲ, ಜನರ ಅಭಿಪ್ರಾಯ ಸರಿ ಇರಲಿಲ್ಲ. ಬಾದಾಮಿಯಲ್ಲಿ ಕೇವಲ 1600-1700 ಮತಗಳಿಂದ ಗೆಲವು ಸಾಧಿಸಿದ್ದಾರೆ. ರಾಮುಲು ಬಾದಾಮಿಗೆ ಹೆಚ್ಚು ಒಲವು ತೋರಿಸಿದ್ದರೆ ಆಗ ಸಿದ್ದರಾಮಯ್ಯ ಮಾಜಿ ಮುಖ್ಯಮಂತ್ರಿ, ಮಾಜಿ ವಿರೋಧ ಪಕ್ಷದ ನಾಯಕ, ಮಾಜಿ ಶಾಸಕರಾಗುತ್ತಿದ್ದರು ಎಂದು ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದರು.