ಜಾತಿ, ಆರ್ಥಿಕ ಸ್ಥಿತಿಯನ್ನು ಬಿಟ್ಟು ಸರಕಾರಿ ಯೋಜನೆ ಕೊಡೋಕೆ ಆಗುತ್ತದೆಯೇ: ಶಿವಾನಂದ ಪಾಟೀಲ
1058 views
ಬಾಗಲಕೋಟೆ ವಿಡಿಯೋಗಳಿಗೆ ಚಂದಾದಾರರಾಗಿಬಾಗಲಕೋಟೆ: ಯಾವುದೇ ಸರ್ಕಾರಿ ಯೋಜನೆಗೆ ಮಾನದಂಡ ಇರುತ್ತದೆ. ಮಾನದಂಡ ಇಲ್ಲದೇ ಇರುವ ಯೋಜನೆಗಳು ದೇಶದಲ್ಲಿ ಇರಲ್ಲ ಎಂದು ಹೇಳುವ ಮೂಲಕ ಗ್ಯಾರಂಟಿ ಯೋಜನೆಗಳಿಗೆ ಮಾನದಂಡ ಮಾಡಲಾಗುತ್ತದೆ ಎಂದು ನೂತನ ಸಚಿವರಾದ ಶಿವಾನಂದ ಪಾಟೀಲ ತಿಳಿಸಿದ್ದಾರೆ. ಅವರು ಬಾಗಲಕೋಟೆ ನಗರದಲ್ಲಿ ಮಾತನಾಡುತ್ತಾ, ಜೂನ್ 1 ರಿಂದ ಗ್ಯಾರಂಟಿ ಯೋಜನೆಗಳ ಜಾರಿ ಮಾಡ್ತೀನಿ ಅಂತಾ ಸಿಎಂ ಹೇಳಿದ್ದಾರೆ. ಪ್ರಣಾಳಿಕೆಯ ಐದೂ ಗ್ಯಾರಂಟಿಗಳು ಒಮ್ಮೆಲೆ ಜಾರಿಗೆ ಬರುತ್ತವೆ ಎಂದರು.
ಯೋಜನೆಗಳಿಗೆನಾದ್ರೂ ಮಾನದಂಡಗಳು ಇವಿಯಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಯಾವುದೇ ಸರ್ಕಾರಿ ಯೋಜನೆ ತಗೋಂಡ್ರು ಮಾನದಂಡ ಇದೆ. ಮಾನದಂಡ ಇಲ್ಲದೇ ಇರುವ ಯೋಜನೆ ದೇಶದಲ್ಲಿ ಇದಿಯಾ ಎಂದು ಉತ್ತರಿಸಿದರು. ಎರಡು ಮಾತ್ರ ಪುಕ್ಕಟೆ ಕೊಡ್ತೀವಿ ಅವು ನೀರು ಮತ್ತು ಕರೆಂಟು ಎಂದರು.
ಯೋಜನೆಗಳಿಗೆನಾದ್ರೂ ಮಾನದಂಡಗಳು ಇವಿಯಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಯಾವುದೇ ಸರ್ಕಾರಿ ಯೋಜನೆ ತಗೋಂಡ್ರು ಮಾನದಂಡ ಇದೆ. ಮಾನದಂಡ ಇಲ್ಲದೇ ಇರುವ ಯೋಜನೆ ದೇಶದಲ್ಲಿ ಇದಿಯಾ ಎಂದು ಉತ್ತರಿಸಿದರು. ಎರಡು ಮಾತ್ರ ಪುಕ್ಕಟೆ ಕೊಡ್ತೀವಿ ಅವು ನೀರು ಮತ್ತು ಕರೆಂಟು ಎಂದರು.