ಬಾಗಲಕೋಟೆ ನಗರಸಭೆ ಆಯುಕ್ತರ ಕುರ್ಚಿಗಾಗಿ ಇಬ್ಬರು ಅಧಿಕಾರಿಗಳ ಹಗ್ಗಜಗ್ಗಾಟ
1132 views
ಬಾಗಲಕೋಟೆ ವಿಡಿಯೋಗಳಿಗೆ ಚಂದಾದಾರರಾಗಿಬಾಗಲಕೋಟೆ: ಡಿಎಚ್ಒ ಹುದ್ದೆಗಾಗಿ ಇತ್ತೀಚೆಗೆ ನಡೆದ ಕಾದಾಟದ ಬೆನ್ನಲ್ಲೇ, ಬಾಗಲಕೋಟೆ ನಗರಸಭೆ ಪೌರಾಯುಕ್ತ ಕುರ್ಚಿಗಾಗಿ ಮತ್ತೊಂದು ಕಿತ್ತಾಟ ನಡೆದಿದೆ. ಹಿಂದಿನ ಆಯುಕ್ತ ಹಾಗೂ ಸದ್ಯದ ಆಯುಕ್ತರ ಮಧ್ಯೆ ಕುರ್ಚಿ ಕಿತ್ತಾಟ ನಡೆದಿದ್ದು ಒಂದೇ ಚೇಂಬರ್ನಲ್ಲಿ ಇಬ್ಬರು ಆಯುಕ್ತರು ಕೆಲ ಕಾಲ ಕುಳಿತರು. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುತ್ತಲೇ ನಗರಸಭೆ ಹಿಂದಿನ ಆಯುಕ್ತರಾಗಿದ್ದ ಆರ್.ವಾಸಣ್ಣ ಅವರು ವರ್ಗಾವಣೆಗೊಂಡಿದ್ದರು. ಹೊಸದಾಗಿ ರಮೇಶ ಜಾಧವ ಆಯುಕ್ತರಾಗಿ ಆಗಮಿಸಿದ್ದರು.
ಆರ್.ವಾಸಣ್ಣ ವರ್ಗಾವಣೆ ಪ್ರಶ್ನಿಸಿ ಕೆಎಟಿ ಮೆಟ್ಟಿಲೇರಿದ್ದರು. ಮತ್ತೊಂದೆಡೆ ಸರಕಾರಿ ಆದೇಶದಂತೆ ರಮೇಶ ಜಾಧವ ನಗರಸಭೆ ಆಯುಕ್ತರ ಹುದ್ದೆಗೆ ನಿಯುಕ್ತಿಗೊಂಡಿದ್ದರು. ಆಗಸ್ಟ್ 12ರಂದು ಆರ್.ವಾಸನ್ ಅವರ ವರ್ಗಾವಣೆಯಾಗಿತ್ತು. ಇದಕ್ಕೆ ಕೆಎಟಿಯಿಂದ ತಡೆಯಾಜ್ಞೆ ತಂದ ಆರ್.ವಾಸಣ್ಣ ಮತ್ತೆ ಅಧಿಕಾರ ವಹಿಸಿಕೊಳ್ಳಲು ಸೋಮವಾರ ಬೆಳಗ್ಗೆ ಇಲ್ಲಿನ ನಗರಸಭೆಯ ತಮ್ಮ ಕಚೇರಿಗೆ ಆಗಮಿಸಿ ಪೌರಾಯುಕ್ತರ ಕುರ್ಚಿಯಲ್ಲಿ ಕುಳಿತುಕೊಂಡರು.
ಆ ವೇಳೆಗೆ ಆಗಮಿಸಿದ ಪೌರಾಯುಕ್ತ ರಮೇಶ ಜಾಧವ ತಮ್ಮ ಕುರ್ಚಿಯ ಮೇಲೆ ಕುಳಿತ ಆರ್.ವಾಸಣ್ಣ ಅವರ ಜತೆ ಕೆಲ ಕಾಲ ವಾಗ್ವಾದಕ್ಕಿಳಿದು ಕುರ್ಚಿ ಬಿಟ್ಟು ಕೊಡುವಂತೆ ವಾದಿಸಿದರು. ಆಗ ಕೆಎಟಿ ಆದೇಶ ತೋರಿಸಿ ನಾನೇ ಪೌರಾಯುಕ್ತ ಎಂದು ವಾಸಣ್ಣ ಜಾಧವ ಅವರಿಗೆ ತಿಳಿಸಿದರು. ಕೆಲ ಕಾಲ ಪೌರಾಯುಕ್ತರ ಚೇಂಬರ್ನಲ್ಲೇ ಇಬ್ಬರು ಕುಳಿತಿದ್ದರು. ಆದೇಶ ಪ್ರತಿ ನೋಡಿದ ರಮೇಶ ಜಾಧವ್ ಕೊಠಡಿಯಿಂದ ಹೊರ ಬಂದು ಸರಕಾರದ ನಿರ್ದೇಶನದಂತೆ ನಡೆದುಕೊಳ್ಳುತ್ತೇನೆ ಎಂದು ಹೇಳಿದರು.
ಆರ್.ವಾಸಣ್ಣ ವರ್ಗಾವಣೆ ಪ್ರಶ್ನಿಸಿ ಕೆಎಟಿ ಮೆಟ್ಟಿಲೇರಿದ್ದರು. ಮತ್ತೊಂದೆಡೆ ಸರಕಾರಿ ಆದೇಶದಂತೆ ರಮೇಶ ಜಾಧವ ನಗರಸಭೆ ಆಯುಕ್ತರ ಹುದ್ದೆಗೆ ನಿಯುಕ್ತಿಗೊಂಡಿದ್ದರು. ಆಗಸ್ಟ್ 12ರಂದು ಆರ್.ವಾಸನ್ ಅವರ ವರ್ಗಾವಣೆಯಾಗಿತ್ತು. ಇದಕ್ಕೆ ಕೆಎಟಿಯಿಂದ ತಡೆಯಾಜ್ಞೆ ತಂದ ಆರ್.ವಾಸಣ್ಣ ಮತ್ತೆ ಅಧಿಕಾರ ವಹಿಸಿಕೊಳ್ಳಲು ಸೋಮವಾರ ಬೆಳಗ್ಗೆ ಇಲ್ಲಿನ ನಗರಸಭೆಯ ತಮ್ಮ ಕಚೇರಿಗೆ ಆಗಮಿಸಿ ಪೌರಾಯುಕ್ತರ ಕುರ್ಚಿಯಲ್ಲಿ ಕುಳಿತುಕೊಂಡರು.
ಆ ವೇಳೆಗೆ ಆಗಮಿಸಿದ ಪೌರಾಯುಕ್ತ ರಮೇಶ ಜಾಧವ ತಮ್ಮ ಕುರ್ಚಿಯ ಮೇಲೆ ಕುಳಿತ ಆರ್.ವಾಸಣ್ಣ ಅವರ ಜತೆ ಕೆಲ ಕಾಲ ವಾಗ್ವಾದಕ್ಕಿಳಿದು ಕುರ್ಚಿ ಬಿಟ್ಟು ಕೊಡುವಂತೆ ವಾದಿಸಿದರು. ಆಗ ಕೆಎಟಿ ಆದೇಶ ತೋರಿಸಿ ನಾನೇ ಪೌರಾಯುಕ್ತ ಎಂದು ವಾಸಣ್ಣ ಜಾಧವ ಅವರಿಗೆ ತಿಳಿಸಿದರು. ಕೆಲ ಕಾಲ ಪೌರಾಯುಕ್ತರ ಚೇಂಬರ್ನಲ್ಲೇ ಇಬ್ಬರು ಕುಳಿತಿದ್ದರು. ಆದೇಶ ಪ್ರತಿ ನೋಡಿದ ರಮೇಶ ಜಾಧವ್ ಕೊಠಡಿಯಿಂದ ಹೊರ ಬಂದು ಸರಕಾರದ ನಿರ್ದೇಶನದಂತೆ ನಡೆದುಕೊಳ್ಳುತ್ತೇನೆ ಎಂದು ಹೇಳಿದರು.