ಕೊನೆ ಕ್ಷಣದಲ್ಲಿ ಲಕ್ಷ್ಮಣ್ ಸವದಿಗೆ ಸಚಿವ ಸ್ಥಾನ ಮಿಸ್ ಆಗಿದ್ದು ಹೇಗೆ?; ಅಸಲಿ ಕಾರಣ ಏನು?
1076 views
ಬೆಳಗಾವಿ ವಿಡಿಯೋಗಳಿಗೆ ಚಂದಾದಾರರಾಗಿಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾಗಿದೆ, ಎರಡನೇ ಹಂತದಲ್ಲಿ ಒಟ್ಟು 24 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆದರೆ, ಅಥಣಿ ಶಾಸಕ ಲಕ್ಷ್ಮಣ್ ಸವದಿಗೆ ಮಂತ್ರಿಗಿರಿ ತಪ್ಪಿರುವುದು ಅಚ್ಚರಿ ಮೂಡಿಸಿದೆ. ಕೊನೆ ಕ್ಷಣದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ ಭಾರೀ ಅಂತರದಿಂದ ಗೆದ್ದಿದ್ದ ಲಕ್ಷ್ಮಣ್ ಸವದಿಗೆ ಸಚಿವ ಸ್ಥಾನ ಫಿಕ್ಸ್ ಎಂದೇ ಹೇಳಲಾಗಿತ್ತು. ಆದರೆ, ಕೊನೆಯ ಹಂತದಲ್ಲಿ ಸಚಿವರ ಪಟ್ಟಿಯಿಂದ ಅವರ ಹೆಸರು ಮಿಸ್ ಆಗಿದೆ.
ಲಿಂಗಾಯತ ಸಮುದಾಯದ ಪ್ರಮುಖ ನಾಯಕರಾಗಿರುವ ಲಕ್ಷ್ಮಣ್ ಸವದಿಗೆ ಟಿಕೆಟ್ ಕೈತಪ್ಪಲು ಜಾತಿ ಕೂಡ ಕಾರಣ ಆಗಿದೆ. 24 ನೂತನ ಸಚಿವರ ಪೈಕಿ ಲಿಂಗಾಯತ ಸಮುದಾಯದ 8 ಮಂದಿಗೆ ಮಂತ್ರಿಗಿರಿ ನೀಡಿರುವ ಕಾರಣಕ್ಕೆ ಲಕ್ಷ್ಮಣ್ ಸವದಿ ಸಿದ್ದು ಟೀಂನಿಂದ ಹೊರಗುಳಿಯಬೇಕಾಗಿದೆ. ಅದರಲ್ಲೂ ಪಂಚಮಸಾಲಿ ಲಿಂಗಾಯತ ಸಮುದಾಯದ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಶಿವಾನಂದ ಪಾಟೀಲ್ಗೆ ಮಂತ್ರಿಗಿರಿ ದೊರೆತಿದೆ. ಈ ಕಾರಣದಿಂದ ಇದೇ ಸಮುದಾಯಕ್ಕೆ ಸೇರಿದ ಲಕ್ಷ್ಮಣ್ ಸವದಿಗೆ ಗೂಟದ ಕಾರು ಮಿಸ್ ಆಗಿದೆ.
ಲಿಂಗಾಯತ ಸಮುದಾಯದ ಪ್ರಮುಖ ನಾಯಕರಾಗಿರುವ ಲಕ್ಷ್ಮಣ್ ಸವದಿಗೆ ಟಿಕೆಟ್ ಕೈತಪ್ಪಲು ಜಾತಿ ಕೂಡ ಕಾರಣ ಆಗಿದೆ. 24 ನೂತನ ಸಚಿವರ ಪೈಕಿ ಲಿಂಗಾಯತ ಸಮುದಾಯದ 8 ಮಂದಿಗೆ ಮಂತ್ರಿಗಿರಿ ನೀಡಿರುವ ಕಾರಣಕ್ಕೆ ಲಕ್ಷ್ಮಣ್ ಸವದಿ ಸಿದ್ದು ಟೀಂನಿಂದ ಹೊರಗುಳಿಯಬೇಕಾಗಿದೆ. ಅದರಲ್ಲೂ ಪಂಚಮಸಾಲಿ ಲಿಂಗಾಯತ ಸಮುದಾಯದ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಶಿವಾನಂದ ಪಾಟೀಲ್ಗೆ ಮಂತ್ರಿಗಿರಿ ದೊರೆತಿದೆ. ಈ ಕಾರಣದಿಂದ ಇದೇ ಸಮುದಾಯಕ್ಕೆ ಸೇರಿದ ಲಕ್ಷ್ಮಣ್ ಸವದಿಗೆ ಗೂಟದ ಕಾರು ಮಿಸ್ ಆಗಿದೆ.