ಆದಾಯ ತೆರಿಗೆ ಪಾವತಿದಾರರಿಗೆ, ಸರ್ಕಾರಿ ನೌಕರರಿಗೆ ಗ್ಯಾರಂಟಿ ಯೋಜನೆ ಕೊಡಲು ಆಗಲ್ಲ: ಸತೀಶ್ ಜಾರಕಿಹೊಳಿ
1453 views
ಬೆಳಗಾವಿ ವಿಡಿಯೋಗಳಿಗೆ ಚಂದಾದಾರರಾಗಿಬೆಳಗಾವಿ : ವಿಧಾನಸಭೆ ಚುನಾವಣೆಯಲ್ಲಿ ಮನೆಮನೆಗೆ ಗ್ಯಾರಂಟಿ ಕಾರ್ಡ್ ಎಸೆದ ಹಾಗೆ ಎಲ್ಲರಿಗೂ ಗ್ಯಾರಂಟಿ ಯೋಜನೆ ಕೊಡಲು ಸಾಧ್ಯವಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಕಿತ್ತೂರು ತಾಲೂಕಿನ ಬೈಲೂರ ಗ್ರಾಮದ ನಿಷ್ಕಲ ಮಂಟಪದ ನಿಜಗುನಾನಂದ ಸ್ವಾಮೀಜಿ ನೇತೃತ್ವದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಿರ್ಗತಿಕರು, ಬಡವರು ಯಾರಿದ್ದಾರೆ ಅವರನ್ನು ಗುರುತಿಸಿ ಗ್ಯಾರಂಟಿ ಯೋಜನೆ ತಲುಪಿಸುತ್ತೇವೆ ಎಂದರು.
ಆದಾಯ ತೆರಿಗೆ ತುಂಬುವವರಿಗೆ, ಸರ್ಕಾರಿ ನೌಕರರಿಗೆ ಕೊಡಲು ಆಗುವುದಿಲ್ಲ. ಕೆಲವರು ನಮಗೆ ಗ್ಯಾರಂಟಿ ಬೇಡಾ ಅಂದಿದ್ದಾರೆ. ಅಂತವರಿಗೆ ಸರ್ಕಾರ ರೂಲ್ಸ್ ಮಾಡಬೇಕು. ಹೀಗಾಗಲೇ ಕ್ಯಾಬಿನೆಟ್ ಮೀಟಿಂಗ್ನಲ್ಲಿ ಫಲಾನುಭವಿಗಳು ಆಯ್ಕೆ ಹಾಗೂ ಮಾನದಂಡ ಅನ್ವಯಗಳ ಬಗ್ಗೆ 5 ಇಲಾಖೆಗಳಿಗೆ ಸೂಚನೆ ನೀಡಲಾಗಿದೆ.
ಆದಾಯ ತೆರಿಗೆ ತುಂಬುವವರಿಗೆ, ಸರ್ಕಾರಿ ನೌಕರರಿಗೆ ಕೊಡಲು ಆಗುವುದಿಲ್ಲ. ಕೆಲವರು ನಮಗೆ ಗ್ಯಾರಂಟಿ ಬೇಡಾ ಅಂದಿದ್ದಾರೆ. ಅಂತವರಿಗೆ ಸರ್ಕಾರ ರೂಲ್ಸ್ ಮಾಡಬೇಕು. ಹೀಗಾಗಲೇ ಕ್ಯಾಬಿನೆಟ್ ಮೀಟಿಂಗ್ನಲ್ಲಿ ಫಲಾನುಭವಿಗಳು ಆಯ್ಕೆ ಹಾಗೂ ಮಾನದಂಡ ಅನ್ವಯಗಳ ಬಗ್ಗೆ 5 ಇಲಾಖೆಗಳಿಗೆ ಸೂಚನೆ ನೀಡಲಾಗಿದೆ.