ಆಂಧ್ರ ಸರ್ಕಾರದ ಉಚಿತ ಹಾಲು ಕರ್ನಾಟಕದ ಕಾಳ ಸಂತೆಯಲ್ಲಿ ಮಾರಾಟ!
1004 views
ಬೆಂಗಳೂರು ಗ್ರಾಮಾಂತರ ವಿಡಿಯೋಗಳಿಗೆ ಚಂದಾದಾರರಾಗಿಬೆಂ.ಗ್ರಾಮಾಂತರ: ಆಂಧ್ರಪ್ರದೇಶದ ಗರ್ಭಿಣಿ, ಬಾಣಂತಿ ಮತ್ತು ಅಂಗನವಾಡಿ ಮಕ್ಕಳ ಕೈಸೇರಬೇಕಿದ್ದ 'ಸಂಪೂರ್ಣ ಪೋಷಣ್' ಹಾಲಿನ ಪ್ಯಾಕೆಟ್ಗಳು ರಾಜ್ಯದ ಬೆಂಗಳೂರು ಗ್ರಾಮಾಂತರ, ತುಮಕೂರು ಕಾಂಡಿಮೆಂಟ್ಸ್ಗಳಿಗೆ ಅಕ್ರಮವಾಗಿ ಮಾರಾಟಗೊಳ್ಳುತ್ತಿವೆ. ಆಂಧ್ರ ಸಿಎಂ ಜಗನ್ ಮುಖಚಿತ್ರವುಳ್ಳ ಪ್ಯಾಕೆಟ್ಗಳನ್ನು ರಾಜಾರೋಷವಾಗಿ ರಾಜ್ಯದಲ್ಲಿ ಮಾರಾಟ ಮಾಡಲಾಗುತ್ತಿದ್ದು, ಆಂಧ್ರದ ಸಾವಿರಾರು ಫಲಾನುಭವಿಗಳಿಗೆ ಯೋಜನೆ ಕೈತಪ್ಪುತ್ತಿದೆ.
ಕೋಲಾರ, ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಲ್ಲಿ ಸಿದ್ಧವಾಗುವ ಆಂಧ್ರ ಸರಕಾರದ ಈ ಪ್ಯಾಕೆಟ್ಗಳು ಮದನಪಲ್ಲಿಯ ಖಾಸಗಿ ಕಂಪನಿಯೊಂದರಿಂದ ಆಂಧ್ರ ಪ್ರದೇಶದಾದ್ಯಂತ ಅಂಗನವಾಡಿಗಳಿಗೆ ವಿತರಣೆಗೊಳ್ಳುತ್ತವೆ. ಈ ನಡುವೆ ಅಂಗನವಾಡಿಗಳಿಗೆ ಪೂರೈಕೆಯಾಗಬೇಕಿರುವ ಅರ್ಧಲೀಟರ್ ಪ್ರಮಾಣದ ಹಾಲಿನ ಪ್ಯಾಕೆಟ್ಗಳು ಕಳ್ಳದಾರಿಯಲ್ಲಿ ಗಡಿ ದಾಟಿ ರಾಜ್ಯದ ಜಿಲ್ಲೆಗಳಿಗೆ ತಲುಪುತ್ತಿದ್ದು, ಲೀಟರ್ಗೆ 25 ರಿಂದ 30ರೂ.ಗೆ ಅಕ್ರಮವಾಗಿ ಮಾರಾಟಗೊಳ್ಳುತ್ತಿವೆ. ಇದರಿಂದಾಗಿ ಹಾಲಿನ ಪ್ರಯೋಜನ ಪಡೆಯಬೇಕಿದ್ದ ಆಂಧ್ರಪ್ರದೇಶದ ಸಾವಿರಾರು ಫಲಾನುಭವಿಗಳಿಗೆ ಅನ್ಯಾಯವಾಗುತ್ತಿದ್ದು, ಸರಕಾರದ ಅನುದಾನವೂ ಕಳ್ಳರ ಪಾಲಾಗುತ್ತಿದೆ.
ಕೇವಲ ಹಾಲು ಮಾತ್ರವಲ್ಲದೆ ಆಂಧ್ರದ 'ಟೆಕ್ ಹೋಂ ನ್ಯೂಟ್ರೀಷನ್ ಕಿಟ್' ಹೆಸರಿನಡಿ ವಿತರಿಸುವ ಪದಾರ್ಥಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಆಂಧ್ರದಿಂದ ರವಾನೆಯಾದ ಸ್ಟಾಕ್ಗಳಲ್ಲಿ ಕಡಲೆಬೇಳೆ, ರಾಗಿ ಹಿಟ್ಟು, ಬೆಲ್ಲ, ಒಣಖರ್ಜೂರ ಸೇರಿದಂತೆ ನಾನಾ ಪೌಷ್ಟಿಕ ಪದಾರ್ಥಗಳನ್ನು ಕವರ್ ತೆಗೆದು ಕಡಿಮೆ ದರಕ್ಕೆ ಮಾರಾಟ ಮಾಡಲಾಗುತ್ತಿದೆ. ಹಾಲಿನ ಪ್ಯಾಕೆಟ್ಗಳನ್ನು ಬದಲಿಸಲಾಗದ ಹಿನ್ನೆಲೆ ಸರಕಾರದ ಲೇಪನದಲ್ಲೇ ರಾಜ್ಯದಲ್ಲಿ ಮಾರಾಟ ಮಾಡುವ ಜಾಲವೊಂದು ಸಕ್ರಿಯವಾಗಿದೆ.
ಈ ದಂಧೆಯಿಂದಾಗಿ ರಾಜ್ಯದ ನಂದಿನಿ ಉತ್ಪನ್ನಗಳ ಮೇಲೂ ಪರಿಣಾಮ ಬೀರುತ್ತಿದೆ. ನಂದಿನಿ ಹಾಲಿನ ದರಕ್ಕಿಂತ ಕಡಿಮೆ ಕಡಿಮೆ ದರದಲ್ಲಿ ಇವುಗಳು ಕಾಳ ಸಂತೆಯಲ್ಲಿ ಮಾರಾಟವಾಗುತ್ತಿದ್ದು, ಇದು ನೇರವಾಗಿ ನಂದಿನಿ ಉತ್ಪನ್ನಗಳ ಮೇಲೆ ಪರಿಣಾಮ ಬೀರುತ್ತಿದೆ.
ಕೋಲಾರ, ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಲ್ಲಿ ಸಿದ್ಧವಾಗುವ ಆಂಧ್ರ ಸರಕಾರದ ಈ ಪ್ಯಾಕೆಟ್ಗಳು ಮದನಪಲ್ಲಿಯ ಖಾಸಗಿ ಕಂಪನಿಯೊಂದರಿಂದ ಆಂಧ್ರ ಪ್ರದೇಶದಾದ್ಯಂತ ಅಂಗನವಾಡಿಗಳಿಗೆ ವಿತರಣೆಗೊಳ್ಳುತ್ತವೆ. ಈ ನಡುವೆ ಅಂಗನವಾಡಿಗಳಿಗೆ ಪೂರೈಕೆಯಾಗಬೇಕಿರುವ ಅರ್ಧಲೀಟರ್ ಪ್ರಮಾಣದ ಹಾಲಿನ ಪ್ಯಾಕೆಟ್ಗಳು ಕಳ್ಳದಾರಿಯಲ್ಲಿ ಗಡಿ ದಾಟಿ ರಾಜ್ಯದ ಜಿಲ್ಲೆಗಳಿಗೆ ತಲುಪುತ್ತಿದ್ದು, ಲೀಟರ್ಗೆ 25 ರಿಂದ 30ರೂ.ಗೆ ಅಕ್ರಮವಾಗಿ ಮಾರಾಟಗೊಳ್ಳುತ್ತಿವೆ. ಇದರಿಂದಾಗಿ ಹಾಲಿನ ಪ್ರಯೋಜನ ಪಡೆಯಬೇಕಿದ್ದ ಆಂಧ್ರಪ್ರದೇಶದ ಸಾವಿರಾರು ಫಲಾನುಭವಿಗಳಿಗೆ ಅನ್ಯಾಯವಾಗುತ್ತಿದ್ದು, ಸರಕಾರದ ಅನುದಾನವೂ ಕಳ್ಳರ ಪಾಲಾಗುತ್ತಿದೆ.
ಕೇವಲ ಹಾಲು ಮಾತ್ರವಲ್ಲದೆ ಆಂಧ್ರದ 'ಟೆಕ್ ಹೋಂ ನ್ಯೂಟ್ರೀಷನ್ ಕಿಟ್' ಹೆಸರಿನಡಿ ವಿತರಿಸುವ ಪದಾರ್ಥಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಆಂಧ್ರದಿಂದ ರವಾನೆಯಾದ ಸ್ಟಾಕ್ಗಳಲ್ಲಿ ಕಡಲೆಬೇಳೆ, ರಾಗಿ ಹಿಟ್ಟು, ಬೆಲ್ಲ, ಒಣಖರ್ಜೂರ ಸೇರಿದಂತೆ ನಾನಾ ಪೌಷ್ಟಿಕ ಪದಾರ್ಥಗಳನ್ನು ಕವರ್ ತೆಗೆದು ಕಡಿಮೆ ದರಕ್ಕೆ ಮಾರಾಟ ಮಾಡಲಾಗುತ್ತಿದೆ. ಹಾಲಿನ ಪ್ಯಾಕೆಟ್ಗಳನ್ನು ಬದಲಿಸಲಾಗದ ಹಿನ್ನೆಲೆ ಸರಕಾರದ ಲೇಪನದಲ್ಲೇ ರಾಜ್ಯದಲ್ಲಿ ಮಾರಾಟ ಮಾಡುವ ಜಾಲವೊಂದು ಸಕ್ರಿಯವಾಗಿದೆ.
ಈ ದಂಧೆಯಿಂದಾಗಿ ರಾಜ್ಯದ ನಂದಿನಿ ಉತ್ಪನ್ನಗಳ ಮೇಲೂ ಪರಿಣಾಮ ಬೀರುತ್ತಿದೆ. ನಂದಿನಿ ಹಾಲಿನ ದರಕ್ಕಿಂತ ಕಡಿಮೆ ಕಡಿಮೆ ದರದಲ್ಲಿ ಇವುಗಳು ಕಾಳ ಸಂತೆಯಲ್ಲಿ ಮಾರಾಟವಾಗುತ್ತಿದ್ದು, ಇದು ನೇರವಾಗಿ ನಂದಿನಿ ಉತ್ಪನ್ನಗಳ ಮೇಲೆ ಪರಿಣಾಮ ಬೀರುತ್ತಿದೆ.