Amit Shah: ಬಿಎಸ್ವೈ ಬದಲು ವಿಜಯೇಂದ್ರ ಕೈಯಿಂದ ಹೂಗುಚ್ಛ ಪಡೆದು ಬೆನ್ನುತಟ್ಟಿದ ಅಮಿತ್ ಶಾ!
1010 views
ಬೆಂಗಳೂರು ವಿಡಿಯೋಗಳಿಗೆ ಚಂದಾದಾರರಾಗಿಬೆಂಗಳೂರು: ರಾಜ್ಯ ಪ್ರವಾಸಕ್ಕೆ ಆಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ಆಹ್ವಾನದಂತೆ ಶುಕ್ರವಾರ ಬೆಳಗ್ಗೆ ಅವರ ನಿವಾಸಕ್ಕೆ ಉಪಹಾರಕ್ಕಾಗಿ ಆಗಮಿಸಿದ್ದಾರೆ. ಈ ವೇಳೆ ಬಿಎಸ್ವೈ ಬದಲಾಗಿ ವಿಜಯೇಂದ್ರ ಅವರ ಕೈಯಲ್ಲೇ ಹೂಗುಚ್ಛ ಪಡೆದುಕೊಂಡ ಪ್ರಸಂಗ ನಡೆಯಿತು.
ಬಿಎಸ್ವೈ ಸರ್ಕಾರಿ ನಿವಾಸ ಕಾವೇರಿಗೆ ಅಮಿತ್ ಶಾ ಆಗಮಿಸಿದ ಸಂದರ್ಭದಲ್ಲಿ ಅವರನ್ನು ಯಡಿಯೂರಪ್ಪ ಹಾಗೂ ವಿಜಯೇಂದ್ರ ಸ್ವಾಗತಿಸಲು ಮುಂದಾದರು. ಈ ವೇಳೆ ಅಮಿತ್ ಶಾ ಅವರಿಗೆ ಹೂಗುಚ್ಛ ನೀಡಲು ಯಡಿಯೂರಪ್ಪ ಅವರು ಮುಂದಾದಾಗ, ವಿಜಯೇಂದ್ರ ಕೈಯಿಂದಲೇ ಹೂಗುಚ್ಛವನ್ನು ಮೊದಲು ಕೊಡಿಸಿ ಎಂದರು.
Siddaramaiah: ಯಡಿಯೂರಪ್ಪರ ಸಮಾಧಾನಪಡಿಸಲು ಅಮಿತ್ ಶಾ ಭೇಟಿ: ಸಿದ್ದರಾಮಯ್ಯ
ಈ ವೇಳೆ ಯಡಿಯೂರಪ್ಪ ಕೆಲ ಕ್ಷಣ ತಬ್ಬಿಬ್ಬಾದರು. ನಂತರದಲ್ಲಿ ತಮ್ಮ ಕೈಯಲ್ಲಿದ್ದ ಹೂಗುಚ್ಛವನ್ನು ಪುತ್ರ ವಿಜಯೇಂದ್ರ ಕೈಗೆ ಕೊಟ್ಟರು. ನಂತರದಲ್ಲಿ ವಿಜಯೇಂದ್ರ ಕೈಯಲ್ಲಿ ಹೂಗುಚ್ಚವನ್ನು ಪಡೆದುಕೊಂಡ ಅಮಿತ್ ಶಾ ವಿಜಯೇಂದ್ರ ಅವರ ಬೆನ್ನು ತಟ್ಟಿದರು.
ಬಿಎಸ್ವೈ ಸರ್ಕಾರಿ ನಿವಾಸ ಕಾವೇರಿಗೆ ಅಮಿತ್ ಶಾ ಆಗಮಿಸಿದ ಸಂದರ್ಭದಲ್ಲಿ ಅವರನ್ನು ಯಡಿಯೂರಪ್ಪ ಹಾಗೂ ವಿಜಯೇಂದ್ರ ಸ್ವಾಗತಿಸಲು ಮುಂದಾದರು. ಈ ವೇಳೆ ಅಮಿತ್ ಶಾ ಅವರಿಗೆ ಹೂಗುಚ್ಛ ನೀಡಲು ಯಡಿಯೂರಪ್ಪ ಅವರು ಮುಂದಾದಾಗ, ವಿಜಯೇಂದ್ರ ಕೈಯಿಂದಲೇ ಹೂಗುಚ್ಛವನ್ನು ಮೊದಲು ಕೊಡಿಸಿ ಎಂದರು.
Siddaramaiah: ಯಡಿಯೂರಪ್ಪರ ಸಮಾಧಾನಪಡಿಸಲು ಅಮಿತ್ ಶಾ ಭೇಟಿ: ಸಿದ್ದರಾಮಯ್ಯ
ಈ ವೇಳೆ ಯಡಿಯೂರಪ್ಪ ಕೆಲ ಕ್ಷಣ ತಬ್ಬಿಬ್ಬಾದರು. ನಂತರದಲ್ಲಿ ತಮ್ಮ ಕೈಯಲ್ಲಿದ್ದ ಹೂಗುಚ್ಛವನ್ನು ಪುತ್ರ ವಿಜಯೇಂದ್ರ ಕೈಗೆ ಕೊಟ್ಟರು. ನಂತರದಲ್ಲಿ ವಿಜಯೇಂದ್ರ ಕೈಯಲ್ಲಿ ಹೂಗುಚ್ಚವನ್ನು ಪಡೆದುಕೊಂಡ ಅಮಿತ್ ಶಾ ವಿಜಯೇಂದ್ರ ಅವರ ಬೆನ್ನು ತಟ್ಟಿದರು.