ಪಾಕ್ ಪರ ಘೋಷಣೆ ಕೂಗುವವರಿಗೆ ಮೈ ಬ್ರದರ್ಸ್, ಮುತೈದೆ ಮಕ್ಕಳು ಅನ್ನಬೇಕಾ?; ಯತ್ನಾಳ್
1132 views
ಬೆಂಗಳೂರು ವಿಡಿಯೋಗಳಿಗೆ ಚಂದಾದಾರರಾಗಿಬೆಂಗಳೂರು: ದೇಶದ ಅನ್ನ ತಿಂದು ಪಾಕಿಸ್ತಾನದ ಪರ ಘೋಷಣೆ ಕೂಗುತ್ತಾರೆ ಎಂದು ಅವಾಚ್ಯ ಶಬ್ದದಿಂದ ಯತ್ನಾಳ್ ಬೈದಿದ್ದಾರೆ. ವಿಧಾನಸಭೆ ಕಲಾಪದಲ್ಲಿ ಆಕ್ಷೇಪಾರ್ಹ ಪದ ಬಳಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಯತ್ನಾಳ್ ಬಳಸಿದ ಪದಗಳಿಗೆ ಆಡಳಿತ ಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
ಚರ್ಚೆ ವಿಕೋಪಕ್ಕೆ ತಿರುಗುತ್ತಿದ್ದಂತೆಯೇ ಮಧ್ಯ ಪ್ರವೇಶಿಸಿದ ಸ್ಪೀಕರ್ ಯುಟಿ ಖಾದರ್, ‘ಯತ್ನಾಳ್ ಅವರು ನಿಮ್ಮನ್ನು (ಕಾಂಗ್ರೆಸ್ ನಾಯಕರನ್ನು) ಬೈಯ್ದಿಲ್ಲ. ಅವರು ಪಾಕಿಸ್ತಾನ ಪರ ಇರುವವರನ್ನು ಬೈದಿದ್ದಾರಷ್ಟೆ. ಪಾಕ್ ಪರ ಘೋಷಣೆ ಕೂಗುವವರಿಗೆ ನೀವು ಯಾವುದೇ ಪದ ಬಳಕೆ ಮಾಡಿದರೂ ನನ್ನ ಅನುಮತಿ ಇದೆ’ ಎಂದು ಹೇಳಿದರು. ಈ ವೇಳೆ, ಎಲ್ಲೋ ಒಂದು ಕಡೆ ನಿಮ್ಮಂತಹ ದೇಶಭಕ್ತರು ಇನ್ನೂ ಇದ್ದಾರೆ ಎಂದು ಯತ್ನಾಳ್ ಹೇಳಿದರು.
ಮತ್ತೆ ಮಾತು ಮುಂದುವರಿಸಿದ ಯತ್ನಾಳ್, ‘ಇನ್ನೇನು ಅವರನ್ನು (ಪಾಕ್ ಪರ ಘೋಷಣೆ ಕೂಗುವವರನ್ನು) ಮುತ್ತೈದೆ ಮಕ್ಕಳು, ಮೈ ಬ್ರದರ್ಸ್ ಎನ್ನಬೇಕಾ’ ಎಂದು ವ್ಯಂಗ್ಯವಾಡಿದರು. ನಂತರ ಪ್ರತಿಕ್ರಿಯಿಸಿದ ರಾಯರೆಡ್ಡಿ, ನಾನೂ ಬಾಯಿತಪ್ಪಿ ಮಾತನಾಡಿದೆ. ಆದರೆ, ಯತ್ನಾಳ್ ಬಳಸಿದ ಪದಗಳನ್ನು ಕಡತದಿಂದ ತೆಗೆದುಹಾಕಬೇಕು ಎಂದು ಆಗ್ರಹಿಸಿದರು. ಮತ್ತೊಂದೆಡೆ, ಎಂಬಿ ಪಾಟೀಲ್ ಹಾಗೂ ಯತ್ನಾಳ್ ನಡುವೆಯೂ ವಾಕ್ಸಮರ ನಡೆಯಿತು.
ಚರ್ಚೆ ವಿಕೋಪಕ್ಕೆ ತಿರುಗುತ್ತಿದ್ದಂತೆಯೇ ಮಧ್ಯ ಪ್ರವೇಶಿಸಿದ ಸ್ಪೀಕರ್ ಯುಟಿ ಖಾದರ್, ‘ಯತ್ನಾಳ್ ಅವರು ನಿಮ್ಮನ್ನು (ಕಾಂಗ್ರೆಸ್ ನಾಯಕರನ್ನು) ಬೈಯ್ದಿಲ್ಲ. ಅವರು ಪಾಕಿಸ್ತಾನ ಪರ ಇರುವವರನ್ನು ಬೈದಿದ್ದಾರಷ್ಟೆ. ಪಾಕ್ ಪರ ಘೋಷಣೆ ಕೂಗುವವರಿಗೆ ನೀವು ಯಾವುದೇ ಪದ ಬಳಕೆ ಮಾಡಿದರೂ ನನ್ನ ಅನುಮತಿ ಇದೆ’ ಎಂದು ಹೇಳಿದರು. ಈ ವೇಳೆ, ಎಲ್ಲೋ ಒಂದು ಕಡೆ ನಿಮ್ಮಂತಹ ದೇಶಭಕ್ತರು ಇನ್ನೂ ಇದ್ದಾರೆ ಎಂದು ಯತ್ನಾಳ್ ಹೇಳಿದರು.
ಮತ್ತೆ ಮಾತು ಮುಂದುವರಿಸಿದ ಯತ್ನಾಳ್, ‘ಇನ್ನೇನು ಅವರನ್ನು (ಪಾಕ್ ಪರ ಘೋಷಣೆ ಕೂಗುವವರನ್ನು) ಮುತ್ತೈದೆ ಮಕ್ಕಳು, ಮೈ ಬ್ರದರ್ಸ್ ಎನ್ನಬೇಕಾ’ ಎಂದು ವ್ಯಂಗ್ಯವಾಡಿದರು. ನಂತರ ಪ್ರತಿಕ್ರಿಯಿಸಿದ ರಾಯರೆಡ್ಡಿ, ನಾನೂ ಬಾಯಿತಪ್ಪಿ ಮಾತನಾಡಿದೆ. ಆದರೆ, ಯತ್ನಾಳ್ ಬಳಸಿದ ಪದಗಳನ್ನು ಕಡತದಿಂದ ತೆಗೆದುಹಾಕಬೇಕು ಎಂದು ಆಗ್ರಹಿಸಿದರು. ಮತ್ತೊಂದೆಡೆ, ಎಂಬಿ ಪಾಟೀಲ್ ಹಾಗೂ ಯತ್ನಾಳ್ ನಡುವೆಯೂ ವಾಕ್ಸಮರ ನಡೆಯಿತು.