ಅರ್ಧ ತಾಸಿನ ಮಳೆಗೂ ಹೈರಾಣಾಗುತ್ತಿದೆ ಬೆಂಗಳೂರು
1072 views
ಬೆಂಗಳೂರು ವಿಡಿಯೋಗಳಿಗೆ ಚಂದಾದಾರರಾಗಿಬೆಂಗಳೂರು: ರಾಜಧಾನಿಯಲ್ಲಿ ರಾಜಕಾಲುವೆಗಳ ಒತ್ತುವರಿ ತೆರವಿಗೆ ಮತ್ತೆ ಬುಲ್ಡೋಜರ್ ಕಾರ್ಯಾಚರಣೆ ಆರಂಭಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಸದ್ಯದಲ್ಲೇ ಜೆಸಿಬಿಗಳು ಘರ್ಜಿಸಲಿವೆ. ಈ ನಡುವೆ ಮಳೆಯಿಂದಾಗಿ ರಸ್ತೆಗಳು ಕೆರೆಯಂತಾಗುತ್ತಿದ್ದು, ವಾಹನ ಸಂಚಾರಕ್ಕೆ ತೊಡಕಾಗಿದೆ. ಕೆಲವು ಮನೆಗಳೂ ನೀರು ನೂಗಿರುವುದು ವರದಿಯಾಗಿದೆ.
ಸಿಲಿಕಾನ್ ಸಿಟಿಯಲ್ಲಿ ಕೆಲ ದಿನಗಳಿಂದ ಅಬ್ಬರಿಸುತ್ತಿರುವ ಮಳೆಯು ಸೃಷ್ಟಿಸಿರುವ ಅವಾಂತರಗಳಿಂದ ಎಚ್ಚೆತ್ತಿರುವ ಸರಕಾರ, ರಾಜಕಾಲುವೆ ಒತ್ತುವರಿದಾರರ ಮೈ ಚಳಿ ಬಿಡಿಸಲು ಮುಂದಾಗಿದೆ. ರಣ ಮಳೆಗೆ ನಗರದಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದ್ದು, ಜನರ ಬದುಕು ಮೂರಾಬಟ್ಟೆಯಾಗಿದೆ. ರಕ್ಕಸ ಮಳೆಯು ಈಗಾಗಲೇ 2 ಜೀವಗಳನ್ನು ಬಲಿ ಪಡೆದಿದ್ದು, ರಾಜಕಾಲುವೆಗಳ ಅಕ್ಕಪಕ್ಕದ ಬಡಾವಣೆಗಳು ನಡುಗಡ್ಡೆಯಂತಾಗಿವೆ. ಮಂಗಳವಾರ ರಾತ್ರಿಯೂ ಮಳೆಯು ಆರ್ಭಟಿಸಿದ್ದು, ಜನರು ಕಷ್ಟಕ್ಕೆ ಸಿಲುಕಿದರು.
ಸಿಲಿಕಾನ್ ಸಿಟಿಯಲ್ಲಿ ಕೆಲ ದಿನಗಳಿಂದ ಅಬ್ಬರಿಸುತ್ತಿರುವ ಮಳೆಯು ಸೃಷ್ಟಿಸಿರುವ ಅವಾಂತರಗಳಿಂದ ಎಚ್ಚೆತ್ತಿರುವ ಸರಕಾರ, ರಾಜಕಾಲುವೆ ಒತ್ತುವರಿದಾರರ ಮೈ ಚಳಿ ಬಿಡಿಸಲು ಮುಂದಾಗಿದೆ. ರಣ ಮಳೆಗೆ ನಗರದಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದ್ದು, ಜನರ ಬದುಕು ಮೂರಾಬಟ್ಟೆಯಾಗಿದೆ. ರಕ್ಕಸ ಮಳೆಯು ಈಗಾಗಲೇ 2 ಜೀವಗಳನ್ನು ಬಲಿ ಪಡೆದಿದ್ದು, ರಾಜಕಾಲುವೆಗಳ ಅಕ್ಕಪಕ್ಕದ ಬಡಾವಣೆಗಳು ನಡುಗಡ್ಡೆಯಂತಾಗಿವೆ. ಮಂಗಳವಾರ ರಾತ್ರಿಯೂ ಮಳೆಯು ಆರ್ಭಟಿಸಿದ್ದು, ಜನರು ಕಷ್ಟಕ್ಕೆ ಸಿಲುಕಿದರು.