ಸಿದ್ದರಾಮಯ್ಯ ಒಬ್ಬ ದಲಿತ ನಾಯಕನನ್ನು ಕೂಡ ಬಿಡ್ಲಿಲ್ಲ: ಛಲವಾದಿ ನಾರಾಯಣಸ್ವಾಮಿ ಕಿಡಿ
ಬೆಂಗಳೂರು ವಿಡಿಯೋಗಳಿಗೆ ಚಂದಾದಾರರಾಗಿ
ಬೆಂಗಳೂರು: ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿ ಸ್ವಂತಿಕೆ ಬಳಸಿದ್ರೆ ಕೂಡಲೇ ಕ್ರಮ ಆಗ್ತಿತ್ತು. ಗುಂಡೂರಾವ್ ಆಗಿರಲಿ ಯಾರೇ ಆಗಿರಲಿ ಕ್ರಮ ಆಗಿತ್ತು. ಶರದ್ ಪವಾರ್, ಮಮತಾ ಬ್ಯಾನರ್ಜಿ ಎಲ್ಲರೂ ಸ್ವಂತಿಕೆ ಉಪಯೋಗಿಸಿ ಪಕ್ಷ ಬಿಡಬೇಕಾಯಿತು. ಈಗ ಸಿದ್ದರಾಮಯ್ಯ ಸ್ವಂತಿಕೆ ಬಳಸುತ್ತಿದ್ದಾರೆ. ಈಗ ಸಿದ್ದರಾಮಯ್ಯಗೆ ಕಾಂಗ್ರೆಸ್ ಸಣ್ಣದಾಗಿ ಕಾಣಿಸುತ್ತಿದೆ. ಕಾಂಗ್ರೆಸ್ಗೆ ಸಿದ್ದರಾಮಯ್ಯ ದೊಡ್ಡದಾಗಿ ಕಾಣ್ತಿದ್ದಾರೆ ಎಂದು ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ನಮ್ಮ ಕಡೆ ಒಂದು ಗಾದೆ ಇದೆ. ಅನ್ನ ಹಳಸಿತ್ತು, ನಾಯಿ ಹಸಿದಿತ್ತು. ಅಧಿಕಾರಕ್ಕೆ ಬರಲು ಹಳಸಿದ ಅನ್ನ ತಿನ್ನಲು ಕಾಂಗ್ರೆಸ್ ಮುಂದಾಗಿದೆ. ದಲಿತರನ್ನು ಕಾಂಗ್ರೆಸ್ ಓಟ್ ಬ್ಯಾಂಕ್ ಮಾಡಿಕೊಂಡಿತ್ತು. ಸಿದ್ದರಾಮಯ್ಯ ಒಬ್ಬ ದಲಿತ ನಾಯಕನನ್ನು ಬಿಡಲಿಲ್ಲ. ಪರಮೇಶ್ವರ್ ಅವರನ್ನ ಸೋಲಿಸಿದ್ರು. ಮಲ್ಲಿಕಾರ್ಜುನ ಖರ್ಗೆ ಅವರ ಎಲ್ಲಾ ಅಧಿಕಾರ ಕಿತ್ತುಕೊಂಡು ಓಡಿಸಿದ್ರು. ಕೆಎಚ್ ಮುನಿಯಪ್ಪ ಪರಿಸ್ಥಿತಿ ಎಲ್ಲಿಗೆ ಬಂದಿದೆ ನೀವೇ ನೋಡಿ ಎಂದರು.
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ನಮ್ಮ ಕಡೆ ಒಂದು ಗಾದೆ ಇದೆ. ಅನ್ನ ಹಳಸಿತ್ತು, ನಾಯಿ ಹಸಿದಿತ್ತು. ಅಧಿಕಾರಕ್ಕೆ ಬರಲು ಹಳಸಿದ ಅನ್ನ ತಿನ್ನಲು ಕಾಂಗ್ರೆಸ್ ಮುಂದಾಗಿದೆ. ದಲಿತರನ್ನು ಕಾಂಗ್ರೆಸ್ ಓಟ್ ಬ್ಯಾಂಕ್ ಮಾಡಿಕೊಂಡಿತ್ತು. ಸಿದ್ದರಾಮಯ್ಯ ಒಬ್ಬ ದಲಿತ ನಾಯಕನನ್ನು ಬಿಡಲಿಲ್ಲ. ಪರಮೇಶ್ವರ್ ಅವರನ್ನ ಸೋಲಿಸಿದ್ರು. ಮಲ್ಲಿಕಾರ್ಜುನ ಖರ್ಗೆ ಅವರ ಎಲ್ಲಾ ಅಧಿಕಾರ ಕಿತ್ತುಕೊಂಡು ಓಡಿಸಿದ್ರು. ಕೆಎಚ್ ಮುನಿಯಪ್ಪ ಪರಿಸ್ಥಿತಿ ಎಲ್ಲಿಗೆ ಬಂದಿದೆ ನೀವೇ ನೋಡಿ ಎಂದರು.