ಡಿಕೆಶಿಗೆ ತಾಕತ್, ಧಮ್ ಇದ್ರೆ ಅಜ್ಜಯ್ಯನ ಮುಂದೆ ಆಣೆ ಮಾಡಲಿ ; ಅಶ್ವತ್ಥ್ ನಾರಾಯಣ್ ಸವಾಲ್
1107 views
ಬೆಂಗಳೂರು ವಿಡಿಯೋಗಳಿಗೆ ಚಂದಾದಾರರಾಗಿಬೆಂಗಳೂರು: ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಕಮಿಷನ್ ಕಾಳಗ ತಾರಕಕ್ಕೇರಿದೆ. ಡಿಕೆ ಶಿವಕುಮಾರ್ ವಿರುದ್ಧ ಬಿಜೆಪಿ ನಾಯಕ ಅಶ್ವತ್ಥ್ ನಾರಾಯಣ್ ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ಡಿಕೆ ಶಿವಕುಮಾರ್ ಕಮಿಷನ್ ಆರೋಪ ಸಾಬೀತು ಮಾಡಿದ್ರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ, ನೀನು ರಾಜಕೀಯ ನಿವೃತ್ತಿ ಆದರೂ ಆಗು, ಕಾಂಗ್ರೆಸ್ ಅನ್ನು ನಿರ್ನಾಮ ಆದರೂ ಮಾಡು ಎಂದು ತಿರುಗೇಟು ಕೊಟ್ಟಿದ್ದಾರೆ.
ಅಲ್ಲದೇ ಡಿಕೆಶಿ ಮೇಲೆ ಕಮಿಷನ್ ಆರೋಪ ಕೇಳಿ ಬಂದಿದೆ, ಮೊದಲ ಕಮಿಷನ್ ಕೇಸ್ ತನಿಖೆ ಮಾಡಿಸುವಂತೆ ಸವಾಲ್ ಹಾಕಿದ್ದಾರೆ. ಜೊತೆಗೆ ಡಿಕೆಶಿಗೆ ತಾಕತ್ ಧಮ್ ಇದ್ರೆ ಅಜ್ಜಯ್ಯನ ಮುಂದೆ ಆಣೆ ಮಾಡಲಿ, ಡಿಕೆಶಿ ಎಲ್ಲದಕ್ಕೂ ಅಜ್ಜಯ್ಯನ ಬಳಿ ಹೋಗ್ತಾರೆ, ಈಗ ಹೋಗಪ್ಪ ಅಜ್ಜಯ್ಯನ ಬಳಿ ಹೋಗಿ ಆಣೆ ಮಾಡಪ್ಪ ಎಂದು ಲೇವಡಿ ಮಾಡಿದ್ದಾರೆ.
ಲೋಕಸಭೆ ಚುನಾವಣೆ ಸಲುವಾಗಿ ಎಟಿಎಂ ಸರ್ಕಾರ ಆಗಿದೆ, ಕಾಂಗ್ರೆಸ್ನಲ್ಲಿ ಸಿಎಂ, ಸೂಪರ್ ಸಿಎಂ, ಶ್ಯಾಡೋ ಸಿಎಂ ಇದ್ದಾರೆ, ಕಾಂಗ್ರೆಸ್ ಸರ್ಕಾರ ಎಟಿಎಂ ಸರ್ಕಾರ ಎಂದು ಕಿಡಿಕಾರಿದ್ದಾರೆ. ಕಾಂಗ್ರೆಸ್ನಲ್ಲಿ ವೈಎಸ್ಟಿ, ಜಿಎಸ್ಟಿ ಇದೆ, ಸುರ್ಜೇವಾಲಾ ಬರ್ತಾರೆ, ಟಾರ್ಗೆಟ್ ಕೊಡ್ತಾರೆ, ಕಲೆಕ್ಷನ್ ಮಾಡ್ತಾರೆ, ಕಾಂಗ್ರೆಸ್ನವರು ಹವಾಲಾ ಮಾಡ್ತಾರೆ ಎಂಬ ಆರೋಪ ಇದೆ, ಡಿಕೆಶಿ ಟ್ರ್ಯಾಕ್ ರೆಕಾರ್ಡ್ ಎಲ್ಲರಿಗೂ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದರು ಜೊತೆಗೆ ಕಮಿಷನ್ ವಿಚಾರವಾಗಿ ಸೋಮವಾರ ರಾಜ್ಯಪಾಲರ ಭೇಟಿ ಮಾಡುತ್ತೇವೆ ಎಂದು ಹೇಳಿದರು.
ಅಲ್ಲದೇ ಡಿಕೆಶಿ ಮೇಲೆ ಕಮಿಷನ್ ಆರೋಪ ಕೇಳಿ ಬಂದಿದೆ, ಮೊದಲ ಕಮಿಷನ್ ಕೇಸ್ ತನಿಖೆ ಮಾಡಿಸುವಂತೆ ಸವಾಲ್ ಹಾಕಿದ್ದಾರೆ. ಜೊತೆಗೆ ಡಿಕೆಶಿಗೆ ತಾಕತ್ ಧಮ್ ಇದ್ರೆ ಅಜ್ಜಯ್ಯನ ಮುಂದೆ ಆಣೆ ಮಾಡಲಿ, ಡಿಕೆಶಿ ಎಲ್ಲದಕ್ಕೂ ಅಜ್ಜಯ್ಯನ ಬಳಿ ಹೋಗ್ತಾರೆ, ಈಗ ಹೋಗಪ್ಪ ಅಜ್ಜಯ್ಯನ ಬಳಿ ಹೋಗಿ ಆಣೆ ಮಾಡಪ್ಪ ಎಂದು ಲೇವಡಿ ಮಾಡಿದ್ದಾರೆ.
ಲೋಕಸಭೆ ಚುನಾವಣೆ ಸಲುವಾಗಿ ಎಟಿಎಂ ಸರ್ಕಾರ ಆಗಿದೆ, ಕಾಂಗ್ರೆಸ್ನಲ್ಲಿ ಸಿಎಂ, ಸೂಪರ್ ಸಿಎಂ, ಶ್ಯಾಡೋ ಸಿಎಂ ಇದ್ದಾರೆ, ಕಾಂಗ್ರೆಸ್ ಸರ್ಕಾರ ಎಟಿಎಂ ಸರ್ಕಾರ ಎಂದು ಕಿಡಿಕಾರಿದ್ದಾರೆ. ಕಾಂಗ್ರೆಸ್ನಲ್ಲಿ ವೈಎಸ್ಟಿ, ಜಿಎಸ್ಟಿ ಇದೆ, ಸುರ್ಜೇವಾಲಾ ಬರ್ತಾರೆ, ಟಾರ್ಗೆಟ್ ಕೊಡ್ತಾರೆ, ಕಲೆಕ್ಷನ್ ಮಾಡ್ತಾರೆ, ಕಾಂಗ್ರೆಸ್ನವರು ಹವಾಲಾ ಮಾಡ್ತಾರೆ ಎಂಬ ಆರೋಪ ಇದೆ, ಡಿಕೆಶಿ ಟ್ರ್ಯಾಕ್ ರೆಕಾರ್ಡ್ ಎಲ್ಲರಿಗೂ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದರು ಜೊತೆಗೆ ಕಮಿಷನ್ ವಿಚಾರವಾಗಿ ಸೋಮವಾರ ರಾಜ್ಯಪಾಲರ ಭೇಟಿ ಮಾಡುತ್ತೇವೆ ಎಂದು ಹೇಳಿದರು.