Ugadi 2024 :ಯುಗಾದಿ ಹಬ್ಬಕ್ಕೆ ತರಕಾರಿ, ಹೂವು, ಹಣ್ಣು ದರ ದುಬಾರಿ, ಏನೇ ಆದರೂ ಹಬ್ಬ ಮಾಡಲೇಬೇಕು ಅಂದ್ರು ಜನ.
1039 views
ಬೆಂಗಳೂರು ವಿಡಿಯೋಗಳಿಗೆ ಚಂದಾದಾರರಾಗಿಯುಗಾದಿ ಹಬ್ಬ ಬಂತೆಂದರೆ ಸಾಕು ಎಲ್ಲರ ಮನೆಯಲ್ಲೂ ಸಂಭ್ರಮ ಸಡಗರ . ಹೊಸ ವರ್ಷದ ಹಬ್ಬವನ್ನು ಆಚರಿಸೋಕೆ ಎಲ್ಲರೂ ಕೂಡ ಸಜ್ಜಾಗಿದ್ದಾರೆ. ಆದರೆ ಕರ್ನಾಟಕದಲ್ಲಿ ಈ ಬಾರಿ ಭೀಕರ ಬರಗಾಲ ಎದುರಾಗಿದೆ. ಕುಡಿಯಲು ನೀರಿಲ್ಲ, ಜಾನುವಾರುಗಳಿಗೆ ಮೇವಿಲ್ಲ, ಬೆಳೆ ಬೆಳೆಯಲು ನೀರಿಲ್ಲ, ರೈತ ಆಕಾಶದತ್ತ ಕೈಚಾಚಿ ಕೂರುವ ಪರಿಸ್ಥಿತಿ ಎದುರಾಗಿದೆ. ಅದರ ಜೊತೆಗೆ ರಣಬಿಸಿಲು ಕೂಡ ಜನರನ್ನು ಹೊರಗೆ ಬರಲು ಬಿಡುತ್ತಿಲ್ಲ. ಹಿಂದೆಂದೂ ಕಂಡಿರದಂತಹ ಗರಿಷ್ಠಮಟ್ಟದಲ್ಲಿ ಬಿಸಿಲತಾಪ ದಾಖಲು ಆಗುತ್ತಿದೆ. ಬೆಂಗಳೂರಿನಲ್ಲಿ ಬಿಸಿಲಿಗೆ ಜನರು ಕಂಗೆಟ್ಟಿದ್ದಾರೆ. ಇನ್ನೂ ಯುಗಾದಿ ಹಬ್ಬಕ್ಕೆ ದುಬಾರಿ ದರದ ಜೊತೆಗೆ ಬಿಸಿಲಿನ ಹೊಡೆತಕ್ಕೆ ಹೊರಗೆ ಬಾರದ ಪರಿಸ್ಥಿತಿಯಲ್ಲಿ ಜನರಿದ್ದಾರೆ. ದುಬಾರಿ ದರಕ್ಕೆ ಬೇಸತ್ತ ಗ್ರಾಹಕರು ಅತ್ಯಂತ ಬೇಸರದಿಂದ ಯುಗಾದಿ ಹಬ್ಬಕ್ಕೆ ಸಾಮಾಗ್ರಿಗಳನ್ನ ಖರೀದಿ ಮಾಡುತ್ತಿದ್ದಾರೆ. ಇತ್ತ ಬಿಸಿಲಿನ ತಾಪಕ್ಕೆ ಜನರೇ ಬಾರದೆ ತರಕಾರಿ, ಹಣ್ಣು, ಹೂವು ಒಣಗುವ ಆತಂಕದಲ್ಲಿ ವ್ಯಾಪಾಸ್ಥರು ಇದ್ದಾರೆ. ಒಟ್ಟಿನಲ್ಲಿ ಯುಗಾದಿ ಹಬ್ಬ ಕೆಲವರಿಗೆ ಸಿಹಿಯಾದರೆ ಇನ್ನೂ ಕೆಲವರಿಗೆ ಕಹಿಯಾಗಿ ಪರಿಣಮಿಸಿದೆ.