ಭಜನೆ ಮಾಡಿಕೊಂಡೇ ಇರಬೇಕು ನೀವು, ಜನ ಆಶೀರ್ವಾದ ಮಾಡಲ್ಲ; ಬಿಜೆಪಿಗೆ ಸಿದ್ದು ಟಕ್ಕರ್!
1123 views
ಬೆಂಗಳೂರು ವಿಡಿಯೋಗಳಿಗೆ ಚಂದಾದಾರರಾಗಿಬೆಂಗಳೂರು: ಸಿಎಂ ಸಿದ್ದರಾಮಯ್ಯ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡುವ ಸಂದರ್ಭದಲ್ಲಿ ಧರಣಿ ನಡೆಸಿದ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಕನ್ನಡ ದಿನ ಪತ್ರಿಕೆಯಲ್ಲಿ ಪ್ರಕಟವಾದ ಬಜೆಟ್ ಸುದ್ದಿ ಬಗ್ಗೆ ಸಿದ್ದರಾಮಯ್ಯ ವಿವರಿಸಿದರು, ಎಲ್ಲ ಪತ್ರಿಕೆಗಳು ಕೂಡ ಬಜೆಟ್ ಬಗ್ಗೆ ಪಾಸಿಟಿವ್ ಸುದ್ದಿ ಮಾಡಿದ್ದಾವೆ ಎಂದು ಬಿಜೆಪಿಗೆ ಮನವರಿಕೆ ಮಾಡಿದರು. ಸಿದ್ದರಾಮಯ್ಯ ಬಜೆಟ್ ಬಗ್ಗೆ ಭಾಷಣ ಮಾಡುವಾಗ ಬಿಜೆಪಿ ನಾಯಕರು ಅಡ್ಡಿ ಪಡಿಸಿದರು, ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸದನದಲ್ಲಿ ಮೋದಿ, ಮೋದಿ, ಜೈ ಶ್ರೀರಾಮ್ ಎಂದು ಬಿಜೆಪಿ ನಾಯಕರು ಕೂಗಿದರೆ, ಸಿದ್ದರಾಮಯ್ಯ ಅವರು ಜೈ ಸೀತಾರಾಮ ಎಂದು ಘೋಷಣೆ ಕೂಗಿ ಬಿಜೆಪಿಗೆ ಟಕ್ಕರ್ ಕೊಟ್ಟರು. ಇನ್ನೂ ಬಿಜೆಪಿಯವರು ಸತ್ತೊಯ್ತು, ಸತ್ತೊಯ್ತು ಕಾಂಗ್ರೆಸ್ ಸತ್ತೊಯ್ತು ಎಂದು ಧಿಕ್ಕಾರ ಕೂಗಿದ್ದಾರೆ. ಪತ್ರಿಕೆ, ಟಿವಿ ಮಾಧ್ಯಮದವರು ನಮ್ಮ ಬಜೆಟ್ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿವೆ, ಬಿಜೆಪಿಯವರು ಮಾಡಿದ ಆಪಾದನೆಯಲ್ಲಿ ಸತ್ಯಾಂಶ ಇಲ್ಲ ಎಂದು ಕುಟುಕಿದರು. ಸುಳ್ಳೇ ಸುಳ್ಳು ಸಿದ್ದರಾಮಯ್ಯ ಬಜೆಟ್ ಸುಳ್ಳು ಎಂದು ಘೋಷಣೆ ಕೂಗಿದ್ದಾರೆ.
ಸದನದಲ್ಲಿ ಮೋದಿ, ಮೋದಿ, ಜೈ ಶ್ರೀರಾಮ್ ಎಂದು ಬಿಜೆಪಿ ನಾಯಕರು ಕೂಗಿದರೆ, ಸಿದ್ದರಾಮಯ್ಯ ಅವರು ಜೈ ಸೀತಾರಾಮ ಎಂದು ಘೋಷಣೆ ಕೂಗಿ ಬಿಜೆಪಿಗೆ ಟಕ್ಕರ್ ಕೊಟ್ಟರು. ಇನ್ನೂ ಬಿಜೆಪಿಯವರು ಸತ್ತೊಯ್ತು, ಸತ್ತೊಯ್ತು ಕಾಂಗ್ರೆಸ್ ಸತ್ತೊಯ್ತು ಎಂದು ಧಿಕ್ಕಾರ ಕೂಗಿದ್ದಾರೆ. ಪತ್ರಿಕೆ, ಟಿವಿ ಮಾಧ್ಯಮದವರು ನಮ್ಮ ಬಜೆಟ್ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿವೆ, ಬಿಜೆಪಿಯವರು ಮಾಡಿದ ಆಪಾದನೆಯಲ್ಲಿ ಸತ್ಯಾಂಶ ಇಲ್ಲ ಎಂದು ಕುಟುಕಿದರು. ಸುಳ್ಳೇ ಸುಳ್ಳು ಸಿದ್ದರಾಮಯ್ಯ ಬಜೆಟ್ ಸುಳ್ಳು ಎಂದು ಘೋಷಣೆ ಕೂಗಿದ್ದಾರೆ.