ರಾಮನಗರದಲ್ಲಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ನಿಂದಲೇ ನಿಖಿಲ್ ಸೋತಿದ್ದು; ಕುಮಾರಸ್ವಾಮಿ
1048 views
ಬೆಂಗಳೂರು ವಿಡಿಯೋಗಳಿಗೆ ಚಂದಾದಾರರಾಗಿಬೆಂಗಳೂರು: ಕಾಂಗ್ರೆಸ್ ಭರವಸೆ ನೀಡಿದ್ದ ಗ್ಯಾರಂಟಿ ಕಾರ್ಡ್ನಿಂದ ರಾಮನಗರದಲ್ಲಿ ನಿಖಿಲ್ ಸೋತಿದ್ದು ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದರು. ಬೆಂಗಳೂರಿನ ಜೆಪಿ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, 42 ಕ್ಷೇತ್ರದಲ್ಲಿ 60 ಸಾವಿರ ಕಾರ್ಡ್ ಹಂಚಿಕೆ ಮಾಡಿದ್ದಾರೆ. ಗ್ಯಾರಂಟಿ ಕಾರ್ಡ್ ಜೊತೆ, ಐದು ಸಾವಿರ ರೂಪಾಯಿ ಗಿಫ್ಟ್ ಕಾರ್ಡ್ ಕೂಡಾ ಕೊಟ್ಟಿದ್ದಾರೆ. ರಾಮನಗರ, ಪಿರಿಯಾಪಟ್ಟಣ, ಆರ್.ಆರ್.ನಗರ, ಕುಣಿಗಲ್ ಸೇರಿದಂತೆ ಹಲವು ಕಡೆ ಹಂಚಿಕೆ ಮಾಡಿದ್ದಾರೆ ಎಂದು ಆರೋಪಿಸಿದರು.
ಪಾರದರ್ಶಕವಾದ ಚುನಾವಣೆ ನಡೆಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಆದರೆ ಈಗ ಯಾವ ರೀತಿ ಚುನಾವಣೆ ನಡೆಸಿದ್ದಾರೆ. ಸಿದ್ದರಾಮಯ್ಯ, ಡಿಕೆಶಿ ಅವರೇ ನೀವು ಎಷ್ಟು ಶೇಕಡಾವಾರು ಫಿಕ್ಸ್ ಮಾಡ್ತೀರಾ? ಇದಕ್ಕೆ ಉತ್ತರ ನೀಡುತ್ತೀರಾ? ಎಂದು ಪ್ರಶ್ನಿಸಿದರು
ಪಾರದರ್ಶಕವಾದ ಚುನಾವಣೆ ನಡೆಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಆದರೆ ಈಗ ಯಾವ ರೀತಿ ಚುನಾವಣೆ ನಡೆಸಿದ್ದಾರೆ. ಸಿದ್ದರಾಮಯ್ಯ, ಡಿಕೆಶಿ ಅವರೇ ನೀವು ಎಷ್ಟು ಶೇಕಡಾವಾರು ಫಿಕ್ಸ್ ಮಾಡ್ತೀರಾ? ಇದಕ್ಕೆ ಉತ್ತರ ನೀಡುತ್ತೀರಾ? ಎಂದು ಪ್ರಶ್ನಿಸಿದರು