2022 - 23ರಲ್ಲಿ ವ್ಯಾಸಂಗ ಮಾಡಿ ಉತೀರ್ಣರಾದ ಪದವೀಧರರಿಗೆ ನಿರುದ್ಯೋಗಿ ಭತ್ಯೆ; ಷರತ್ತು ಅನ್ವಯ!
ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ಪಕ್ಷ ನೀಡಿದ್ದ 5 ಗ್ಯಾರಂಟಿ ಯೋಜನೆಗಳನ್ನೂ ಜಾರಿ ಮಾಡಿ ಆದೇಶ ಹೊರಡಿಸಿದೆ. ಐದನೇ ಗ್ಯಾರಂಟಿಯಾದ 'ಯುವ ನಿಧಿ' ಯೋಜನೆಯನ್ನ ಸಿದ್ದು ಸರ್ಕಾರ ಜಾರಿ ಮಾಡಿದೆ.
ಮೊದಲ ನಾಲ್ಕು ಯೋಜನೆಗಳನ್ನ ಸರಕಾರ ಆರಂಭದಲ್ಲಿ ಜಾರಿ ಮಾಡಲಿದೆ. ಆದ್ರೆ, ನಿರುದ್ಯೋಗ ಭತ್ಯೆ ಕೊಡುವ ಯುವ ನಿಧಿ ಯೋಜನೆ ಸ್ವಲ್ಪ ವಿಳಂಬ ಆಗಬಹುದು ಎನ್ನಲಾಗಿತ್ತು. ಆದ್ರೆ ಈ ನಿರೀಕ್ಷೆಗಳನ್ನು ಸುಳ್ಳು ಮಾಡಿರುವ ಸಿಎಂ ಸಿದ್ದರಾಮಯ್ಯ ಸರ್ಕಾರ, ತನ್ನ ಐದನೇ ಗ್ಯಾರಂಟಿ ಘೋಷಣೆಯಾದ 'ಯುವ ನಿಧಿ' ಯೋಜನೆಯನ್ನೂ ಕೂಡಾ ಜಾರಿ ಮಾಡಿದೆ.
ಯುವಕರಲ್ಲಿ ಭಾರೀ ಕುತೂಹಲ ಕೆರಳಿಸಿದ್ದ ಈ ಯೋಜನೆ ಅಡಿ 2022 - 23 ರಲ್ಲಿ ವ್ಯಾಸಂಗ ಮಾಡಿ ಉತೀರ್ಣರಾದ ಪದವೀಧರರಿಗೆ ಮುಂದಿನ 24 ತಿಂಗಳವರೆಗೆ ಪ್ರತಿ ತಿಂಗಳೂ ನಿರುದ್ಯೋಗ ಭತ್ಯೆ ಸಿಗಲಿದೆ. ನಿರುದ್ಯೋಗಿ ಪದವೀಧರರಿಗೆ ಪ್ರತಿ ತಿಂಗಳೂ 3,000 ಸಾವಿರ ರೂಪಾಯಿ ಹಾಗೂ ಡಿಪ್ಲೊಮಾ ಮಾಡಿ ನಿರುದ್ಯೋಗಿ ಆಗಿರುವವರಿಗೆ ಪ್ರತಿ ತಿಂಗಳೂ 1,500 ರೂ. ಭತ್ಯೆ ಸಿಗಲಿದೆ. ಒಂದು ವೇಳೆ ಯೋಜನೆಯ ನಡುವಲ್ಲೇ ನಿರುದ್ಯೋಗಿ ಫಲಾನುಭವಿಗೆ ಕೆಲಸ ಸಿಕ್ಕಿದರೆ ಅವರಿಗೆ ಈ ಯೋಜನೆ ಅನ್ವಯ ಆಗಲ್ಲ
2022 - 23ರಲ್ಲಿ ವ್ಯಾಸಂಗ ಮಾಡಿ ಉತ್ತೀರ್ಣರಾದ ಪದವೀಧರರು ಹಾಗೂ ಡಿಪ್ಲೊಮಾ ವ್ಯಾಸಂಗ ಮಾಡಿದವರು ಈ ಯೋಜನೆಯ ಅನ್ವಯ ಫಲಾನುಭವಿ ಆಗಲಿದ್ದಾರೆ. ಅರ್ಹ ಫಲಾನುಭವಿಗಳು ಯೋಜನೆಯ ಲಾಭ ಪಡೆಯಬೇಕೆಂದರೆ ಮೊದಲು ಅರ್ಜಿಯನ್ನು ಸಲ್ಲಿಕೆ ಮಾಡಬೇಕಿದೆ. ಅರ್ಹ ಫಲಾನುಭವಿಗಳು ಮುಂದಿನ ಆರು ತಿಂಗಳ ಒಳಗಾಗಿ ಅರ್ಜಿ ಹಾಕಲು ಅವಕಾಶ ಇದೆ. ಈ ಯೋಜನೆ ಮಂಗಳ ಮುಖಿಯರಿಗೂ ಕೂಡಾ ಅನ್ವಯ ಆಗಲಿದೆ. ತೃತೀಯ ಲಿಂಗಿಗಳೂ ಕೂಡಾ ಯೋಜನೆ ಲಾಭ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ.
bengaluruTimesXP KannadaUpdated: 2 Jun 2023, 6:27 pm - cities
- bengaluru
- Congress Guarantee Yuva Nidhi Scheme Announced By Cm Siddaramaiah