ಕಾಂಗ್ರೆಸ್ಗೆ ಒಳ್ಳೆಯ ಹೆಸರು ಬರುತ್ತೆ ಎಂದು ಕೇಂದ್ರ ಸರ್ಕಾರ ಅಕ್ಕಿ ಕೊಡ್ತಿಲ್ಲ ; ಡಿಕೆ ಶಿವಕುಮಾರ್
ಬೆಂಗಳೂರು ವಿಡಿಯೋಗಳಿಗೆ ಚಂದಾದಾರರಾಗಿ
ಬೆಂಗಳೂರು : ನಾವು ಕೊಟ್ಟ ಮಾತಿನಂತೆ ಐದು ಗ್ಯಾರಂಟಿಗಳನ್ನು ಈಡೇರಿಸುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು. ನುಡಿದಂತೆ ನಡೆಯುತ್ತೇವೆ, ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಲಾಗಿದೆ ಎಂದು ಹೇಳಿದರು.
ಬೆಂಗಳೂರಲ್ಲಿ ಮಾತನಾಡಿದ ಅವರು, ಬೇರೆ ಪಕ್ಷದವರು ಕೂಡ ನಮಗೆ ಸಲಹೆಗಳನ್ನು ನೀಡಿದ್ದಾರೆ. ಹಣ ಬೇಡ 10 ಕೆಜಿ ಅಕ್ಕಿ ಕೊಡಿ ಎಂದು ಬಿಜೆಪಿ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರ ಡಬಲ್ ಸ್ಟಾಂಡರ್ಡ್ ಗೊತ್ತಾಗುತ್ತಿದೆ. ಬಿಜೆಪಿಯವರ ಹೋರಾಟವನ್ನು ನಾವು ತಡೆಯಲ್ಲ, ಹೋರಾಟ ಮಾಡಲಿ ಬಹಳ ಸಂತೋಷ ಎಂದು ಹೇಳಿದರು. ಬಿಜೆಪಿಯವರು ಬಡವರ ಅನ್ನದಲ್ಲೂ ರಾಜಕಾರಣ ಮಾಡ್ತಿದೆ. ಕಾಂಗ್ರೆಸ್ಗೆ ಒಳ್ಳೆಯ ಹೆಸರು ಬರುತ್ತೆ ಎಂದು ಕೇಂದ್ರ ಸರ್ಕಾರ ಅಕ್ಕಿ ಕೊಡ್ತಿಲ್ಲ ಎಂದು ಗಂಭೀರ ಆರೋಪ ಮಾಡಿದ್ರು.
ಎಫ್ಸಿಐಯಲ್ಲಿ ಅಕ್ಕಿ ಕೊಳೆಯುತ್ತಿದೆ, ಆದ್ರೂ ನಮಗೆ ಅಕ್ಕಿ ಕೊಡ್ತಿಲ್ಲ, ಬಡವರ ಹಸಿವಿನ್ಲಲೂ ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂದು ಕಿಡಿಕಾರಿದರು. ನಮ್ಮ ಬೆಲೆಗೆ ಹೊಂದುವಂತಿದ್ದರೆ ನಮ್ಮ ರೈತರಿಂದಲೇ ಅಕ್ಕಿ ಖರೀದಿ ಮಾಡ್ತೇವೆ ಎಂದು ಹೇಳಿದರು. ಸಚಿವ ಮುನಿಯಪ್ಪ ಹಾಗೂ ಸಿಎಂ ಸಿದ್ದರಾಮಯ್ಯ ಅವರು ಎಲ್ಲ ಪ್ರಯತ್ನ ಮಾಡ್ತಿದ್ದಾರೆ. ಬಿಜೆಪಿಯವರು ಕೊಟ್ಟಂಥ ಸಲಹೆಯನ್ನು ಸ್ವೀಕರಿಸಿ, ಅಕ್ಕಿ ಬದಲು ಹಣ ಕೊಡಲು ನಿರ್ಧಾರ ಮಾಡಿದ್ದೇವೆ ಎಂದರು.
ಬೆಂಗಳೂರಲ್ಲಿ ಮಾತನಾಡಿದ ಅವರು, ಬೇರೆ ಪಕ್ಷದವರು ಕೂಡ ನಮಗೆ ಸಲಹೆಗಳನ್ನು ನೀಡಿದ್ದಾರೆ. ಹಣ ಬೇಡ 10 ಕೆಜಿ ಅಕ್ಕಿ ಕೊಡಿ ಎಂದು ಬಿಜೆಪಿ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರ ಡಬಲ್ ಸ್ಟಾಂಡರ್ಡ್ ಗೊತ್ತಾಗುತ್ತಿದೆ. ಬಿಜೆಪಿಯವರ ಹೋರಾಟವನ್ನು ನಾವು ತಡೆಯಲ್ಲ, ಹೋರಾಟ ಮಾಡಲಿ ಬಹಳ ಸಂತೋಷ ಎಂದು ಹೇಳಿದರು. ಬಿಜೆಪಿಯವರು ಬಡವರ ಅನ್ನದಲ್ಲೂ ರಾಜಕಾರಣ ಮಾಡ್ತಿದೆ. ಕಾಂಗ್ರೆಸ್ಗೆ ಒಳ್ಳೆಯ ಹೆಸರು ಬರುತ್ತೆ ಎಂದು ಕೇಂದ್ರ ಸರ್ಕಾರ ಅಕ್ಕಿ ಕೊಡ್ತಿಲ್ಲ ಎಂದು ಗಂಭೀರ ಆರೋಪ ಮಾಡಿದ್ರು.
ಎಫ್ಸಿಐಯಲ್ಲಿ ಅಕ್ಕಿ ಕೊಳೆಯುತ್ತಿದೆ, ಆದ್ರೂ ನಮಗೆ ಅಕ್ಕಿ ಕೊಡ್ತಿಲ್ಲ, ಬಡವರ ಹಸಿವಿನ್ಲಲೂ ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂದು ಕಿಡಿಕಾರಿದರು. ನಮ್ಮ ಬೆಲೆಗೆ ಹೊಂದುವಂತಿದ್ದರೆ ನಮ್ಮ ರೈತರಿಂದಲೇ ಅಕ್ಕಿ ಖರೀದಿ ಮಾಡ್ತೇವೆ ಎಂದು ಹೇಳಿದರು. ಸಚಿವ ಮುನಿಯಪ್ಪ ಹಾಗೂ ಸಿಎಂ ಸಿದ್ದರಾಮಯ್ಯ ಅವರು ಎಲ್ಲ ಪ್ರಯತ್ನ ಮಾಡ್ತಿದ್ದಾರೆ. ಬಿಜೆಪಿಯವರು ಕೊಟ್ಟಂಥ ಸಲಹೆಯನ್ನು ಸ್ವೀಕರಿಸಿ, ಅಕ್ಕಿ ಬದಲು ಹಣ ಕೊಡಲು ನಿರ್ಧಾರ ಮಾಡಿದ್ದೇವೆ ಎಂದರು.