ನಾನು ರಾಜ್ಯಾಧ್ಯಕ್ಷ ; ನನಗೆ ಒಂದು ಮಾತು ಹೇಳದೆ ದಿಲ್ಲಿಗೆ ಹೋದ್ರು ; ಸಿಎಂ ಇಬ್ರಾಹಿಂ
2185 views
ಬೆಂಗಳೂರು ವಿಡಿಯೋಗಳಿಗೆ ಚಂದಾದಾರರಾಗಿಬೆಂಗಳೂರು: ನನಗೆ ತಿಳಿಸದೆ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಅವರು ದೆಹಲಿಗೆ ತೆರಳಿ ಬಿಜೆಪಿ ನಾಯಕರ ಜೊತೆಗೆ ಮೈತ್ರಿ ನಿರ್ಧಾರ ಮಾಡಿದ್ದು ನನಗೆ ಬೇಸರ ಉಂಟು ಮಾಡಿದೆ. ಕರ್ನಾಟಕದಲ್ಲಿ ಕಾಂಗ್ರೆಸ್, ಬಿಜೆಪಿ ಹೊರತಾಗಿ 3 ನೇ ಶಕ್ತಿ ಬಹಳ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಅಕ್ಟೋಬರ್ 16 ರಂದು ಗಟ್ಟಿ ನಿರ್ಧಾರ ತೆಗೆದುಕೊಳ್ಳಲಿದ್ದೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ತಿಳಿಸಿದರು.
ಶನಿವಾರ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು,ನನಗೆ 16 ರ ವರೆಗೆ ಅವಕಾಶ ಬೇಕು. ಎಲ್ಲರ ಅಭಿಪ್ರಾಯ ಪಡೆದು ನಾನು ಮಾಧ್ಯಮದ ಮುಂದೆ ಬರ್ತೀನಿ ಎಂದು ತಿಳಿಸಿದರು. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯ ಬಗ್ಗೆ ಎಚ್ಡಿ ಕುಮಾರಸ್ವಾಮಿ ಈಗಾಗಲೇ ನಿಮ್ಮ ಬಳಿ ಮಾತಾಡಿದ್ದಾರೆ. ಹಾಗಾಗಿ ಇದುವರೆಗೂ ನಾನು ಕುಮಾರಸ್ವಾಮಿ ಬಳಿ ಮಾತಾಡಿಲ್ಲ. ಕುಮಾರಸ್ವಾಮಿ ನನ್ನ ಸಹೋದರ ಸಮಾನ, ದೇವೇಗೌಡರು ನನ್ನ ತಂದೆ ಸಮಾನ. ನನಗೆ ನೋವಾಗಿದೆ, ದೆಹಲಿಗೆ ಹೋಗಿದ್ರೂ ಹೇಳಿಲ್ಲ. ಏನು ಚರ್ಚೆ ಮಾಡಿದ್ರಿ ಅಂತನೂ ಹೇಳಲಿಲ್ಲ ಎಂದರು.
16 ರಂದು ನಾನು ಜನರ ಬಳಿ ಅಭಿಪ್ರಾಯ ಪಡೆದು ಬರ್ತೀನಿ. ಪಕ್ಷದಲ್ಲಿ ಮೊದಲಿನಿಂದಲೂ ಈ ಬಗ್ಗೆ ಚರ್ಚೆ ಆಗಿಲ್ಲ.16 ರಂದು ಸಮಾನ ಮನಸ್ಕರು ಸಭೆ ಕರೆದಿದ್ದೇನೆ. ಈ ಬಾರಿ 20 ಪರ್ಸೆಂಟ್ ವೋಟ್ ಜೆಡಿಎಸ್ ಗೆ ಸಿಕ್ಕಿದೆ. ಮುಸ್ಲಿಂ ಮತ ಹಾಕಿದ್ರು ಅಂತ ಕುಮಾರಸ್ವಾಮಿ ಹೇಳಿದ್ರು. ಆದರೆ ಬಿಜೆಪಿ ಸೋಲಿಸಲು ಮತ ಹಾಕಿದ್ರು ಅಂದ್ರು, ಒಟ್ಟಾರೆ ಮತ ಹಾಕಿದ್ದಾರಲ್ವಾ? ಎಂದು ಪ್ರಶ್ನಿಸಿದರು.
ಯಾವುದೇ ನಿರ್ಧಾರ ಆಗಬೇಕು ಅಂದರೆ ಪಕ್ಷದಲ್ಲಿ ಚರ್ಚೆ ಆಗಬೇಕಲ್ವಾ? ಇವತ್ತಿನ ವರೆಗೂ ನನ್ನ ಸಹಿ ಇಲ್ಲದೆ ಯಾವ ಪೇಪರ್ ಹೊರ ಬಂದಿದೆ? ಕೋರ್ ಕಮಿಟಿ ಪ್ರವಾಸ ಆದ ನಂತರ ಮುಂದಿನ ತೀರ್ಮಾನ ಅಂದ್ರು. ಆದರೆ ಮೊದಲೇ ಹೋಗಿ ಬಿಜೆಪಿ ನಾಯಕರನ್ನು ಭೇಟಿ ಆಗಿ ಬಂದ್ರು ಎಂದು ಅಸಮಾಧಾನ ವ್ಯಕ್ತಪಡಿಸಿದರು. ನನ್ನ ಜೊತೆ ಕಾಂಗ್ರೆಸ್ ನವರೂ ಸಂಪರ್ಕದಲ್ಲಿ ಇದ್ದಾರೆ. ಏನೇ ಮಾಡಬೇಕು ಅಂದ್ರು ನಾನು ದೇವೇಗೌಡರ ಬಳಿ ಮಾತಾಡಿಯೇ ಹೋಗೋದು. ದೆಹಲಿಯ ಬೇರೆ ಕಾಂಗ್ರೆಸ್ ನಾಯಕರು ಮಾತಾಡಿದ್ದಾರೆ. ಶರತ್ ಪವಾರ್ ಮಾತಾಡಿದ್ದಾರೆ, ಆಪ್ ಅವರೂ ಮಾತಾಡಿದ್ದಾರೆ. ನಾನು ಜನತಾದಳ ಸೇರಲು ದೇವೇಗೌಡರೇ ಕಾರಣ. ಈ ನಿಟ್ಟಿನಲ್ಲಿ ಕುಮಾರಸ್ವಾಮಿ ಹಾಗೂ ದೇವೇಗೌಡರು ಜೊತೆ ಮಾತಾಡಿಯೇ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದರು.
ಶನಿವಾರ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು,ನನಗೆ 16 ರ ವರೆಗೆ ಅವಕಾಶ ಬೇಕು. ಎಲ್ಲರ ಅಭಿಪ್ರಾಯ ಪಡೆದು ನಾನು ಮಾಧ್ಯಮದ ಮುಂದೆ ಬರ್ತೀನಿ ಎಂದು ತಿಳಿಸಿದರು. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯ ಬಗ್ಗೆ ಎಚ್ಡಿ ಕುಮಾರಸ್ವಾಮಿ ಈಗಾಗಲೇ ನಿಮ್ಮ ಬಳಿ ಮಾತಾಡಿದ್ದಾರೆ. ಹಾಗಾಗಿ ಇದುವರೆಗೂ ನಾನು ಕುಮಾರಸ್ವಾಮಿ ಬಳಿ ಮಾತಾಡಿಲ್ಲ. ಕುಮಾರಸ್ವಾಮಿ ನನ್ನ ಸಹೋದರ ಸಮಾನ, ದೇವೇಗೌಡರು ನನ್ನ ತಂದೆ ಸಮಾನ. ನನಗೆ ನೋವಾಗಿದೆ, ದೆಹಲಿಗೆ ಹೋಗಿದ್ರೂ ಹೇಳಿಲ್ಲ. ಏನು ಚರ್ಚೆ ಮಾಡಿದ್ರಿ ಅಂತನೂ ಹೇಳಲಿಲ್ಲ ಎಂದರು.
16 ರಂದು ನಾನು ಜನರ ಬಳಿ ಅಭಿಪ್ರಾಯ ಪಡೆದು ಬರ್ತೀನಿ. ಪಕ್ಷದಲ್ಲಿ ಮೊದಲಿನಿಂದಲೂ ಈ ಬಗ್ಗೆ ಚರ್ಚೆ ಆಗಿಲ್ಲ.16 ರಂದು ಸಮಾನ ಮನಸ್ಕರು ಸಭೆ ಕರೆದಿದ್ದೇನೆ. ಈ ಬಾರಿ 20 ಪರ್ಸೆಂಟ್ ವೋಟ್ ಜೆಡಿಎಸ್ ಗೆ ಸಿಕ್ಕಿದೆ. ಮುಸ್ಲಿಂ ಮತ ಹಾಕಿದ್ರು ಅಂತ ಕುಮಾರಸ್ವಾಮಿ ಹೇಳಿದ್ರು. ಆದರೆ ಬಿಜೆಪಿ ಸೋಲಿಸಲು ಮತ ಹಾಕಿದ್ರು ಅಂದ್ರು, ಒಟ್ಟಾರೆ ಮತ ಹಾಕಿದ್ದಾರಲ್ವಾ? ಎಂದು ಪ್ರಶ್ನಿಸಿದರು.
ಯಾವುದೇ ನಿರ್ಧಾರ ಆಗಬೇಕು ಅಂದರೆ ಪಕ್ಷದಲ್ಲಿ ಚರ್ಚೆ ಆಗಬೇಕಲ್ವಾ? ಇವತ್ತಿನ ವರೆಗೂ ನನ್ನ ಸಹಿ ಇಲ್ಲದೆ ಯಾವ ಪೇಪರ್ ಹೊರ ಬಂದಿದೆ? ಕೋರ್ ಕಮಿಟಿ ಪ್ರವಾಸ ಆದ ನಂತರ ಮುಂದಿನ ತೀರ್ಮಾನ ಅಂದ್ರು. ಆದರೆ ಮೊದಲೇ ಹೋಗಿ ಬಿಜೆಪಿ ನಾಯಕರನ್ನು ಭೇಟಿ ಆಗಿ ಬಂದ್ರು ಎಂದು ಅಸಮಾಧಾನ ವ್ಯಕ್ತಪಡಿಸಿದರು. ನನ್ನ ಜೊತೆ ಕಾಂಗ್ರೆಸ್ ನವರೂ ಸಂಪರ್ಕದಲ್ಲಿ ಇದ್ದಾರೆ. ಏನೇ ಮಾಡಬೇಕು ಅಂದ್ರು ನಾನು ದೇವೇಗೌಡರ ಬಳಿ ಮಾತಾಡಿಯೇ ಹೋಗೋದು. ದೆಹಲಿಯ ಬೇರೆ ಕಾಂಗ್ರೆಸ್ ನಾಯಕರು ಮಾತಾಡಿದ್ದಾರೆ. ಶರತ್ ಪವಾರ್ ಮಾತಾಡಿದ್ದಾರೆ, ಆಪ್ ಅವರೂ ಮಾತಾಡಿದ್ದಾರೆ. ನಾನು ಜನತಾದಳ ಸೇರಲು ದೇವೇಗೌಡರೇ ಕಾರಣ. ಈ ನಿಟ್ಟಿನಲ್ಲಿ ಕುಮಾರಸ್ವಾಮಿ ಹಾಗೂ ದೇವೇಗೌಡರು ಜೊತೆ ಮಾತಾಡಿಯೇ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದರು.