'ನನಗೆ ಅಧಿಕಾರದ ಆಸೆ ಇಲ್ಲ ಗೌಡ್ರೇ, ನಿಮ್ಮ ಸರಕಾರಕ್ಕಾಗಿ ನನ್ನ ಮಗ ಬಲಿಯಾದ' -ಸಿಎಂ ಇಬ್ರಾಹಿಂ
1509 views
ಬೆಂಗಳೂರು ವಿಡಿಯೋಗಳಿಗೆ ಚಂದಾದಾರರಾಗಿಬೆಂಗಳೂರು: ಎಚ್ಡಿ ದೇವೇಗೌಡರ ವಿರುದ್ಧ ಸಿಎಂ ಇಬ್ರಾಹಿಂ ಕಿಡಿ ಕಾರಿದ್ದಾರೆ. ''ಅವರಿಗೆ ನನ್ನನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆಯುವ ಅಧಿಕಾರ ಇಲ್ಲ. ನನಗೆ ನೊಟೀಸ್ ಕೊಡಬೇಕು. ಕಾರ್ಯಕಾರಿ ಸಮಿತಿಯ 2/3 ನೇ ಸದಸ್ಯರ ಅನುಮತಿ ಪಡೆದು ನೋಟೀಸ್ ಕೊಡಬೇಕು'' ಎಂದರು.
''ಎಚ್ ಡಿ ಕುಮಾರಸ್ವಾಮಿ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡುವ ಮೂಲಕ ಎಚ್ ಡಿ ದೇವೇಗೌಡರ ಪುತ್ರ ವ್ಯಾಮೋಹ ಸಾಬೀತಾಗಿದೆ ಈ ನಿರ್ಧಾರದ ಬಗ್ಗೆ ನಾನು ಚುನಾವಣಾ ಆಯೋಗದಲ್ಲಿ ನಿರ್ಧಾರ ಪ್ರಶ್ನೆ ಮಾಡ್ತೇನೆ. ಇವತ್ತಿನವರೆಗೂ ದೇವೇಗೌಡರನ್ನು ನಾನು ನನ್ನ ತಂದೆ ಸಮಾನ ಅನ್ಕೊಂಡಿದ್ದೆ. ನನ್ನ ಪರಿಷತ್ ಸ್ಥಾನ ಬಿಟ್ಟು ನಿಮ್ಮ ಬಳಿ ಬಂದೆ. ಕಾಲಾಯೇ ತಸ್ಮೈ ನಮ: ವಿನಾಶ ಕಾಲೇ ವಿಪರೀತ ಬುದ್ಧಿ. ಮಹಾಭಾರತದಲ್ಲಿ ಆದ ಹಾಗೆ ಜೆಡಿಎಸ್ ಗೂ ಆಗುತ್ತೆ'' ಎಂದರು.
''ಇವತ್ತಿನ ಸಭೆಗೆ ನನಗೆ ಆಹ್ವಾನ ಇರಲಿಲ್ಲ. ಸಭೆ ಬಗ್ಗೆ ನನಗೆ ಗೊತ್ತು ಇಲ್ಲ. ನನಗೆ ಬೀದಿಗೆ ಎಳೆಯಬೇಡಿ. ಬೇರೆಯವರನ್ನು ಅಧ್ಯಕ್ಷ ಮಾಡಲು ನಿಮಗೆ ಅಧಿಕಾರ ಏನಿದೆ? ಕಂಡೋರ ಮಕ್ಕಳು ಸಿಕ್ಕಿದ್ದೀವಿ ಅಂತ ಹೀಗೆಲ್ಲ ಮಾಡೋದು ಸರಿಯಲ್ಲ ಗೌಡ್ರೇ, ಇದು ನಿಮಗೆ ಸರಿಯಲ್ಲ'' ಎಂದರು.
ಗೌಡರಿಗೆ ಸ್ವಲ್ಪವಾದರೂ ಪ್ರಜ್ಞೆ ಬೇಡವಾ? ನಾನು ಒಬ್ಬ ಹಿರಿಯ ಪರಿಷತ್ ಸದಸ್ಯ ಸ್ಥಾನ ಬಿಟ್ಟು ಬಂದಿದ್ದೀನಿ. ನನ್ನ ಜತೆ ಮಾತಾಡಬೇಕು ಅಂತ ಅನಿಸಲಿಲ್ವಾ? ಚನ್ನಪಟ್ಟಣದಲ್ಲಿ ನಾನು ಹೋಗದಿರುತ್ತಿದ್ದರೆ ಕುಮಾರಸ್ವಾಮಿ ಗೆಲ್ತಿರಲಿಲ್ಲ ಎಂದರು. ರಾತ್ರಿ ಹಗಲು ಓಡಾಡಿ ಅವರ ಮಗನನ್ನು ಗೆಲ್ಲಿಸಿದ್ದೇನೆ. ನನಗೆ ಅವರು ಒಳ್ಳೆಯ ಬಹುಮಾನ ಕೊಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
''ಎಚ್ ಡಿ ಕುಮಾರಸ್ವಾಮಿ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡುವ ಮೂಲಕ ಎಚ್ ಡಿ ದೇವೇಗೌಡರ ಪುತ್ರ ವ್ಯಾಮೋಹ ಸಾಬೀತಾಗಿದೆ ಈ ನಿರ್ಧಾರದ ಬಗ್ಗೆ ನಾನು ಚುನಾವಣಾ ಆಯೋಗದಲ್ಲಿ ನಿರ್ಧಾರ ಪ್ರಶ್ನೆ ಮಾಡ್ತೇನೆ. ಇವತ್ತಿನವರೆಗೂ ದೇವೇಗೌಡರನ್ನು ನಾನು ನನ್ನ ತಂದೆ ಸಮಾನ ಅನ್ಕೊಂಡಿದ್ದೆ. ನನ್ನ ಪರಿಷತ್ ಸ್ಥಾನ ಬಿಟ್ಟು ನಿಮ್ಮ ಬಳಿ ಬಂದೆ. ಕಾಲಾಯೇ ತಸ್ಮೈ ನಮ: ವಿನಾಶ ಕಾಲೇ ವಿಪರೀತ ಬುದ್ಧಿ. ಮಹಾಭಾರತದಲ್ಲಿ ಆದ ಹಾಗೆ ಜೆಡಿಎಸ್ ಗೂ ಆಗುತ್ತೆ'' ಎಂದರು.
''ಇವತ್ತಿನ ಸಭೆಗೆ ನನಗೆ ಆಹ್ವಾನ ಇರಲಿಲ್ಲ. ಸಭೆ ಬಗ್ಗೆ ನನಗೆ ಗೊತ್ತು ಇಲ್ಲ. ನನಗೆ ಬೀದಿಗೆ ಎಳೆಯಬೇಡಿ. ಬೇರೆಯವರನ್ನು ಅಧ್ಯಕ್ಷ ಮಾಡಲು ನಿಮಗೆ ಅಧಿಕಾರ ಏನಿದೆ? ಕಂಡೋರ ಮಕ್ಕಳು ಸಿಕ್ಕಿದ್ದೀವಿ ಅಂತ ಹೀಗೆಲ್ಲ ಮಾಡೋದು ಸರಿಯಲ್ಲ ಗೌಡ್ರೇ, ಇದು ನಿಮಗೆ ಸರಿಯಲ್ಲ'' ಎಂದರು.
ಗೌಡರಿಗೆ ಸ್ವಲ್ಪವಾದರೂ ಪ್ರಜ್ಞೆ ಬೇಡವಾ? ನಾನು ಒಬ್ಬ ಹಿರಿಯ ಪರಿಷತ್ ಸದಸ್ಯ ಸ್ಥಾನ ಬಿಟ್ಟು ಬಂದಿದ್ದೀನಿ. ನನ್ನ ಜತೆ ಮಾತಾಡಬೇಕು ಅಂತ ಅನಿಸಲಿಲ್ವಾ? ಚನ್ನಪಟ್ಟಣದಲ್ಲಿ ನಾನು ಹೋಗದಿರುತ್ತಿದ್ದರೆ ಕುಮಾರಸ್ವಾಮಿ ಗೆಲ್ತಿರಲಿಲ್ಲ ಎಂದರು. ರಾತ್ರಿ ಹಗಲು ಓಡಾಡಿ ಅವರ ಮಗನನ್ನು ಗೆಲ್ಲಿಸಿದ್ದೇನೆ. ನನಗೆ ಅವರು ಒಳ್ಳೆಯ ಬಹುಮಾನ ಕೊಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.