ಬೆಂಗಳೂರಿನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ ಭಾನುವಾರ ಮಧ್ಯಾಹ್ನದ ಮಳೆ
ಬೆಂಗಳೂರು ವಿಡಿಯೋಗಳಿಗೆ ಚಂದಾದಾರರಾಗಿ
ಬೆಂಗಳೂರು: ಬೆಂಗಳೂರಿನಲ್ಲಿ ಭಾನುವಾರ ಮಧ್ಯಾಹ್ನ ಭಾರಿ ಮಳೆ ಸುರಿಯಿತು. ಮಧ್ಯಾಹ್ನ ಸುಮಾರು 3:30ರ ಹೊತ್ತಿಗೆ ತೀವ್ರ ಮೋಡಗಟ್ಟಿದ ವಾತಾವರಣ ಸೃಷ್ಟಿಯಾಗಿ ಗುಡುಗು, ಗಾಳಿಯ ಆರ್ಭಟ ಸಹಿತ ಆಲಿಕಲ್ಲಿ ಮಳೆಯಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯಕ್ಕೂ ಅಡಚಣೆಯಾಗಿದೆ.
ರಭಸವಾಗಿ ಬೀಸಿದ ಗಾಳಿಗೆ ಮರಗಿಡಗಳ ರೆಂಬೆಕೊಂಬೆಗಳು ಮುರಿದು ಬಿದ್ದರೆ, ಕೆಲವು ಕಡೆ ಇಡೀ ಮರವೇ ರಸ್ತೆಗೆ ಉರುಳಿ ಬೀಳುವ ಮೂಲಕ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಇದರೊಂದಿಗೆ ದಬದಬನೆ ಬಿದ್ದ ಆಲಿಕಲ್ಲುಗಳು ವಾಹನ ಸವಾರರಲ್ಲಿ ಗಾಬರಿ ಮೂಡಿಸಿತು. ಮುಂಬದಿಯ ಗಾಜಿಗೆ ರಭಸವಾಗಿ ಆಲಿಕಲ್ಲು ಅಪ್ಪಳಿಸಿದವು.
ಸುಮಾರು ಒಂದು ತಾಸು ಸುರಿದ ಮಳೆ ಅನಂತರ ತಣ್ಣನೆಯ ವಾತಾವರಣ ಸೃಷ್ಟಿಸಿತು. ವಿಜಯನಗರ, ಚಿಕ್ಕಪೇಟೆ ಮುಖ್ಯರಸ್ತೆ ಹಾಗೂ ಫನ್ ವರ್ಡ್ ಬಸ್ ನಿಲ್ದಾಣದ ಸಮೀಪ ಮರಗಳು ರಸ್ತೆಗೆ ಉರುಳಿರುವುದು ವರದಿಯಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ ಭಾಗ, ಕೋಲಾರ, ಚಿಕ್ಕಬಳ್ಳಾಪುರ, ಕೊಡಗು, ಮಂಡ್ಯ, ಮೈಸೂರು ಹಾಗೂ ಚಿತ್ರದುರ್ಗದಲ್ಲಿ ಗಡುಗು ಸಹಿತ ಮಳೆಯಾಗಿದೆ.
ರಭಸವಾಗಿ ಬೀಸಿದ ಗಾಳಿಗೆ ಮರಗಿಡಗಳ ರೆಂಬೆಕೊಂಬೆಗಳು ಮುರಿದು ಬಿದ್ದರೆ, ಕೆಲವು ಕಡೆ ಇಡೀ ಮರವೇ ರಸ್ತೆಗೆ ಉರುಳಿ ಬೀಳುವ ಮೂಲಕ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು. ಇದರೊಂದಿಗೆ ದಬದಬನೆ ಬಿದ್ದ ಆಲಿಕಲ್ಲುಗಳು ವಾಹನ ಸವಾರರಲ್ಲಿ ಗಾಬರಿ ಮೂಡಿಸಿತು. ಮುಂಬದಿಯ ಗಾಜಿಗೆ ರಭಸವಾಗಿ ಆಲಿಕಲ್ಲು ಅಪ್ಪಳಿಸಿದವು.
ಸುಮಾರು ಒಂದು ತಾಸು ಸುರಿದ ಮಳೆ ಅನಂತರ ತಣ್ಣನೆಯ ವಾತಾವರಣ ಸೃಷ್ಟಿಸಿತು. ವಿಜಯನಗರ, ಚಿಕ್ಕಪೇಟೆ ಮುಖ್ಯರಸ್ತೆ ಹಾಗೂ ಫನ್ ವರ್ಡ್ ಬಸ್ ನಿಲ್ದಾಣದ ಸಮೀಪ ಮರಗಳು ರಸ್ತೆಗೆ ಉರುಳಿರುವುದು ವರದಿಯಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ ಭಾಗ, ಕೋಲಾರ, ಚಿಕ್ಕಬಳ್ಳಾಪುರ, ಕೊಡಗು, ಮಂಡ್ಯ, ಮೈಸೂರು ಹಾಗೂ ಚಿತ್ರದುರ್ಗದಲ್ಲಿ ಗಡುಗು ಸಹಿತ ಮಳೆಯಾಗಿದೆ.