ಜಾತಿ ಗಣತಿ ವರದಿ ಸಲ್ಲಿಕೆ: ಸಿದ್ದರಾಮಯ್ಯಗೆ ವರದಿ ಹಸ್ತಾಂತರ ಮಾಡಿದ ಜಯಪ್ರಕಾಶ್ ಹೆಗ್ಡೆ
1103 views
ಬೆಂಗಳೂರು ವಿಡಿಯೋಗಳಿಗೆ ಚಂದಾದಾರರಾಗಿಬೆಂಗಳೂರು: ಭಾರೀ ಕುತೂಹಲ ಹಾಗೂ ಚರ್ಚೆಗೆ ಗ್ರಾಸವಾಗಿದ್ದ ಜಾತಿ ಗಣತಿ ವರದಿ ಸಲ್ಲಿಕೆಯಾಯಿತು. ಶಾಶ್ವತ ಹಿಂದುಳಿದ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್ ಹೆಗ್ಡೆ ಅವರು ವರದಿಯನ್ನು ಅಧಿಕೃತವಾಗಿ ಸಿಎಂ ಸಿದ್ದರಾಮಯ್ಯಗೆ ಹಸ್ತಾಂತರ ಮಾಡಿದರು.
ಮಧ್ಯಾಹ್ನ ವಿಧಾನಸೌಧದಕ್ಕೆ ಎರಡು ಬಾಕ್ಸ್ ವರದಿ ಪ್ರತಿಗಳ ಜೊತೆಗೆ ಆಗಮಿಸಿದ ಅವರು, ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿಗೆ ಆಗಮಿಸಿ ವರದಿಯನ್ನು ಸಲ್ಲಿಕೆ ಮಾಡಿದರು. ಜಾತಿ ಗಣತಿ ವರದಿ ಸಲ್ಲಿಕೆ ಹಿನ್ನಲೆಯಲ್ಲಿ ಕಾಂಗ್ರೆಸ್ ಶಾಸಕ ಪುಟ್ಟರಂಗ ಶೆಟ್ಟಿ ಮಾತನಾಡಿ, ಹಿಂದೆ ಎಚ್ ಡಿ ಕುಮಾರಸ್ವಾಮಿಯವರು ವರದಿ ಸ್ವಿಕರಿಸಿರಲಿಲ್ಲ. ಇದೀಗ ಜಯಪ್ರಕಾಶ್ ಹೆಗ್ಡೆ ವರದಿ ಸಲ್ಲಿಕೆ ಮಾಡಿದ್ದಾರೆ. ಈಗಲಾದ್ರೂ ಸರ್ಕಾರ ವರದಿ ಸ್ವೀಕರಿಸಲಿ ಹಾಗೂ ಒಬಿಸಿ ಸಮುದಾಯಗಳಿಗೆ ನ್ಯಾಯ ಕೊಡಲಿ ಎಂದರು.
ಸಚಿವ ಶಿವರಾಜ್ ತಂಗಡಗಿ ಮಾತನಾಡಿ, ಇದು ಜಾತಿಗಣತಿ ವರದಿ ಅಲ್ಲ ಬದಲಾಗಿ ಸಾಮಾಜಿಕ ಮತ್ತು ಶೈಕ್ಷಣಿಕ ಹಾಗೂ ಆರ್ಥಿಕ ವರದಿ. ಈ ವರದಿ ಗೆ ಯಾರದ್ದು ವಿರೋಧ ಇಲ್ಲ. ಈಗ ವರದಿ ಸ್ವೀಕಾರ ಮಾಡ್ತೀವಿ. ಅದ್ರಲ್ಲಿ ಏನ್ ಮಾಹಿತಿ ಇದೆ ಗೊತ್ತಿಲ್ಲ ಎಂದರು.
ವರದಿಯನ್ನು ಯಾರು ನೋಡಿಲ್ಲ ಈಗ ಸಲ್ಲಿಕೆಯಾಗ್ತಿದೆ ಹೀಗಾಗಿ ಅಸಮಾಧಾನ ಪ್ರಶ್ನೆ ಇಲ್ಲ. ವರದಿಯನ್ನ ಯಾರು ಓದಿದ್ದಾರೆ..? ಯಾರು ಒದಿಲ್ಲ ಹಾಗಾಗಿ ಪ್ರಶ್ನೆಯೇ ಇಲ್ಲ ಎಂದರು.
ಮಧ್ಯಾಹ್ನ ವಿಧಾನಸೌಧದಕ್ಕೆ ಎರಡು ಬಾಕ್ಸ್ ವರದಿ ಪ್ರತಿಗಳ ಜೊತೆಗೆ ಆಗಮಿಸಿದ ಅವರು, ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಚೇರಿಗೆ ಆಗಮಿಸಿ ವರದಿಯನ್ನು ಸಲ್ಲಿಕೆ ಮಾಡಿದರು. ಜಾತಿ ಗಣತಿ ವರದಿ ಸಲ್ಲಿಕೆ ಹಿನ್ನಲೆಯಲ್ಲಿ ಕಾಂಗ್ರೆಸ್ ಶಾಸಕ ಪುಟ್ಟರಂಗ ಶೆಟ್ಟಿ ಮಾತನಾಡಿ, ಹಿಂದೆ ಎಚ್ ಡಿ ಕುಮಾರಸ್ವಾಮಿಯವರು ವರದಿ ಸ್ವಿಕರಿಸಿರಲಿಲ್ಲ. ಇದೀಗ ಜಯಪ್ರಕಾಶ್ ಹೆಗ್ಡೆ ವರದಿ ಸಲ್ಲಿಕೆ ಮಾಡಿದ್ದಾರೆ. ಈಗಲಾದ್ರೂ ಸರ್ಕಾರ ವರದಿ ಸ್ವೀಕರಿಸಲಿ ಹಾಗೂ ಒಬಿಸಿ ಸಮುದಾಯಗಳಿಗೆ ನ್ಯಾಯ ಕೊಡಲಿ ಎಂದರು.
ಸಚಿವ ಶಿವರಾಜ್ ತಂಗಡಗಿ ಮಾತನಾಡಿ, ಇದು ಜಾತಿಗಣತಿ ವರದಿ ಅಲ್ಲ ಬದಲಾಗಿ ಸಾಮಾಜಿಕ ಮತ್ತು ಶೈಕ್ಷಣಿಕ ಹಾಗೂ ಆರ್ಥಿಕ ವರದಿ. ಈ ವರದಿ ಗೆ ಯಾರದ್ದು ವಿರೋಧ ಇಲ್ಲ. ಈಗ ವರದಿ ಸ್ವೀಕಾರ ಮಾಡ್ತೀವಿ. ಅದ್ರಲ್ಲಿ ಏನ್ ಮಾಹಿತಿ ಇದೆ ಗೊತ್ತಿಲ್ಲ ಎಂದರು.
ವರದಿಯನ್ನು ಯಾರು ನೋಡಿಲ್ಲ ಈಗ ಸಲ್ಲಿಕೆಯಾಗ್ತಿದೆ ಹೀಗಾಗಿ ಅಸಮಾಧಾನ ಪ್ರಶ್ನೆ ಇಲ್ಲ. ವರದಿಯನ್ನ ಯಾರು ಓದಿದ್ದಾರೆ..? ಯಾರು ಒದಿಲ್ಲ ಹಾಗಾಗಿ ಪ್ರಶ್ನೆಯೇ ಇಲ್ಲ ಎಂದರು.