ಜೆಡಿಎಸ್ ಪಕ್ಷದ ಭವಿಷ್ಯ ಮುಖ್ಯ, ದೇವೇಗೌಡರ ತೀರ್ಪಿಗೆ ನಾವೆಲ್ಲರೂ ಬದ್ಧ ; ಜಿಟಿ ದೇವೇಗೌಡ
1131 views
ಬೆಂಗಳೂರು ವಿಡಿಯೋಗಳಿಗೆ ಚಂದಾದಾರರಾಗಿಬೆಂಗಳೂರು: ಜೆಡಿಎಸ್ ಪಕ್ಷದ ಭವಿಷ್ಯದ ಬಗ್ಗೆ ಎಚ್ಡಿ ದೇವೇಗೌಡರ ತೀರ್ಪಿಗೆ ನಾವೆಲ್ಲ ಬದ್ಧ, ಎಲ್ಲ ಶಾಸಕರು ಒಮ್ಮತದ ತೀರ್ಮಾನ ಕೈಗೊಂಡಿದ್ದೇವೆ ಎಂದು ಶಾಸಕ ಜಿಟಿ ದೇವೇಗೌಡ ಹೇಳಿದರು.
ಜೆಡಿಎಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವೇಗೌಡರು ಮತ್ತೊಮ್ಮೆ ಸಿಡಿದೆದ್ದು ಎಲ್ಲಾ ಶಾಸಕರ ಜೊತೆ ಸಭೆ ಮಾಡಿ ಅಭಿಪ್ರಾಯ ಪಡೆದುಕೊಂಡಿದ್ದಾರೆ. ಶಾಸಕಾಂಗ ಸಭೆ ಕೂಡಾ ನಡೆದಿದೆ. ಎಲ್ಲರೂ ಅವರವರ ಅಭಿಪ್ರಾಯವನ್ನು ಬಿಚ್ಚು ಮನಸ್ಸಿನಿಂದ ಮಾತನಾಡಿದ್ದಾರೆ ಎಂದರು.
ಹಾಗಿದ್ದರೂ ಪಕ್ಷದ ಭವಿಷ್ಯದ ಬಗ್ಗೆ ದೇವೇಗೌಡರ ತೀರ್ಮಾನವನ್ನು ನಾವು ಒಪ್ಪುವ ನಿಟ್ಟಿನಲ್ಲಿ ಏಕ ಮನಸ್ಸಿನಿಂದ ಒಪ್ಪುವ ತೀರ್ಮಾನ ಶಾಸಕರು ಮಾಡಿದ್ದಾರೆ ಎಂದರು. 2023ರ ಚುನಾವಣೆಯ ಬಳಿಕ ಏನು ನಡೆಯುತ್ತಿದೆ ಎಂದು ಜನರು ಗಮನಿಸುತ್ತಿದ್ದಾರೆ. ಕಾಂಗ್ರೆಸ್ ರಾಜ್ಯದಲ್ಲಿ ಪ್ರಥಮ ಬಾರಿಗೆ ಅಧಿಕ ಸ್ಥಾನ ಪಡೆದು ಸುಭದ್ರ ಸರ್ಕಾರ ತಂದಿದ್ದೇವೆ ಹಾಗೂ ಮಾತುಕೊಟ್ಟಂತೆ ನಡೆಯುತ್ತೇವೆ ಎನ್ನುತ್ತಾರೆ.
ಆದರೆ ಯಾವ ರೀತಿಯಲ್ಲಿ ನಡೆಯುತ್ತಿದೆ ಎಂಬುದನ್ನು ಮಾಧ್ಯಮಗಳು ತೋರಿಸುತ್ತಿವೆ. ಸದನದಲ್ಲಿ ನಾನು ಐದು ಗ್ಯಾರಂಟಿಗಳ ಬಗ್ಗೆ ಮಾತನಾಡಿದ್ದೆ. ಆದರೆ ಅದು ತಪ್ಪಾಗಿ ಅರ್ಥೈಸಲಾಗಿದೆ. ಸದನದಲ್ಲಿ ರೈತರ ಪರವಾಗಿ ಯಾವುದೇ ಕಾರ್ಯಕ್ರಮ ಮಾಡಿಲ್ಲ ಎಂದಿದ್ದೆ ಎಂದು ತಿಳಿಸಿದರು.
ಕಾಂಗ್ರೆಸ್ ಜೊತೆಗಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಿದ್ದರಾಮಯ್ಯ ಅವರನ್ನು ಡಿಸಿಎಂ ಮಾಡಲಾಗಿತ್ತು. ಅಬಕಾರಿ ಖಾತೆಯನ್ನು ನೀಡಲಾಗಿತ್ತು. ಆದರೆ ಸಿಎಂ ಮಾಡಿಲ್ಲ ಎಂಬ ಕಾರಣಕ್ಕಾಗಿ ಸಿದ್ದರಾಮಯ್ಯ ಅಹಮ್ಮದ್ ಪಟೇಲ್ ಜೊತೆ ಸಂಪರ್ಕ ಮಾಡಿದರು.
ಯಾವುದೇ ಕಾರಣಕ್ಕಾಗಿಯೂ ಬಿಜೆಪಿ ಜೊತೆಗೆ ಕೈಜೋಡಸಬಾರದು ಎಂಬ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಒತ್ತಡದ ಮೇರೆಗೆ ಅನಿವಾರ್ಯವಾಗಿ ಮೈತ್ರಿ ಸರ್ಕಾರ ರಚನೆ ಮಾಡಿದ್ದೆವು. ಐದು ವರ್ಷ ಗೆದ್ದ ಕಾಂಗ್ರೆಸ್ ಮತ್ತೆ ಏಕೆ ರಾಜ್ಯದಲ್ಲಿ ಈ ಹಿಂದೆ ಗೆದ್ದಿರಲಿಲ್ಲ. ಕಾಂಗ್ರೆಸ್ ಗೆ ರಾಜ್ಯದಲ್ಲಿ ಭದ್ರಕೋಟೆ ಇಲ್ಲ. ಲೋಕಸಭೆಯಲ್ಲಿ ಕಾಂಗ್ರೆಸ್ ಗೆ ತಳವೇ ಇಲ್ಲ. ಕಾಂಗ್ರೆಸ್ ಇರುವುದು ನಾಲ್ಕು ರಾಜ್ಯದಲ್ಲಿ ಅಷ್ಟೇ, ದೇಶದಲ್ಲಿ 50 ಸ್ಥಾನ ಅಷ್ಟೇ ಇದೆ. ಇಂತಹ ಸಂದರ್ಭದಲ್ಲಿ ಜೆಡಿಎಸ್ ಬಗ್ಗೆ ಯೋಚನೆ ಮಾಡುವ ಅಗತ್ಯ ಇಲ್ಲ ಎಂದು ತಿರುಗೇಟು ನೀಡಿದರು.
ಜೆಡಿಎಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವೇಗೌಡರು ಮತ್ತೊಮ್ಮೆ ಸಿಡಿದೆದ್ದು ಎಲ್ಲಾ ಶಾಸಕರ ಜೊತೆ ಸಭೆ ಮಾಡಿ ಅಭಿಪ್ರಾಯ ಪಡೆದುಕೊಂಡಿದ್ದಾರೆ. ಶಾಸಕಾಂಗ ಸಭೆ ಕೂಡಾ ನಡೆದಿದೆ. ಎಲ್ಲರೂ ಅವರವರ ಅಭಿಪ್ರಾಯವನ್ನು ಬಿಚ್ಚು ಮನಸ್ಸಿನಿಂದ ಮಾತನಾಡಿದ್ದಾರೆ ಎಂದರು.
ಹಾಗಿದ್ದರೂ ಪಕ್ಷದ ಭವಿಷ್ಯದ ಬಗ್ಗೆ ದೇವೇಗೌಡರ ತೀರ್ಮಾನವನ್ನು ನಾವು ಒಪ್ಪುವ ನಿಟ್ಟಿನಲ್ಲಿ ಏಕ ಮನಸ್ಸಿನಿಂದ ಒಪ್ಪುವ ತೀರ್ಮಾನ ಶಾಸಕರು ಮಾಡಿದ್ದಾರೆ ಎಂದರು. 2023ರ ಚುನಾವಣೆಯ ಬಳಿಕ ಏನು ನಡೆಯುತ್ತಿದೆ ಎಂದು ಜನರು ಗಮನಿಸುತ್ತಿದ್ದಾರೆ. ಕಾಂಗ್ರೆಸ್ ರಾಜ್ಯದಲ್ಲಿ ಪ್ರಥಮ ಬಾರಿಗೆ ಅಧಿಕ ಸ್ಥಾನ ಪಡೆದು ಸುಭದ್ರ ಸರ್ಕಾರ ತಂದಿದ್ದೇವೆ ಹಾಗೂ ಮಾತುಕೊಟ್ಟಂತೆ ನಡೆಯುತ್ತೇವೆ ಎನ್ನುತ್ತಾರೆ.
ಆದರೆ ಯಾವ ರೀತಿಯಲ್ಲಿ ನಡೆಯುತ್ತಿದೆ ಎಂಬುದನ್ನು ಮಾಧ್ಯಮಗಳು ತೋರಿಸುತ್ತಿವೆ. ಸದನದಲ್ಲಿ ನಾನು ಐದು ಗ್ಯಾರಂಟಿಗಳ ಬಗ್ಗೆ ಮಾತನಾಡಿದ್ದೆ. ಆದರೆ ಅದು ತಪ್ಪಾಗಿ ಅರ್ಥೈಸಲಾಗಿದೆ. ಸದನದಲ್ಲಿ ರೈತರ ಪರವಾಗಿ ಯಾವುದೇ ಕಾರ್ಯಕ್ರಮ ಮಾಡಿಲ್ಲ ಎಂದಿದ್ದೆ ಎಂದು ತಿಳಿಸಿದರು.
ಕಾಂಗ್ರೆಸ್ ಜೊತೆಗಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಿದ್ದರಾಮಯ್ಯ ಅವರನ್ನು ಡಿಸಿಎಂ ಮಾಡಲಾಗಿತ್ತು. ಅಬಕಾರಿ ಖಾತೆಯನ್ನು ನೀಡಲಾಗಿತ್ತು. ಆದರೆ ಸಿಎಂ ಮಾಡಿಲ್ಲ ಎಂಬ ಕಾರಣಕ್ಕಾಗಿ ಸಿದ್ದರಾಮಯ್ಯ ಅಹಮ್ಮದ್ ಪಟೇಲ್ ಜೊತೆ ಸಂಪರ್ಕ ಮಾಡಿದರು.
ಯಾವುದೇ ಕಾರಣಕ್ಕಾಗಿಯೂ ಬಿಜೆಪಿ ಜೊತೆಗೆ ಕೈಜೋಡಸಬಾರದು ಎಂಬ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಒತ್ತಡದ ಮೇರೆಗೆ ಅನಿವಾರ್ಯವಾಗಿ ಮೈತ್ರಿ ಸರ್ಕಾರ ರಚನೆ ಮಾಡಿದ್ದೆವು. ಐದು ವರ್ಷ ಗೆದ್ದ ಕಾಂಗ್ರೆಸ್ ಮತ್ತೆ ಏಕೆ ರಾಜ್ಯದಲ್ಲಿ ಈ ಹಿಂದೆ ಗೆದ್ದಿರಲಿಲ್ಲ. ಕಾಂಗ್ರೆಸ್ ಗೆ ರಾಜ್ಯದಲ್ಲಿ ಭದ್ರಕೋಟೆ ಇಲ್ಲ. ಲೋಕಸಭೆಯಲ್ಲಿ ಕಾಂಗ್ರೆಸ್ ಗೆ ತಳವೇ ಇಲ್ಲ. ಕಾಂಗ್ರೆಸ್ ಇರುವುದು ನಾಲ್ಕು ರಾಜ್ಯದಲ್ಲಿ ಅಷ್ಟೇ, ದೇಶದಲ್ಲಿ 50 ಸ್ಥಾನ ಅಷ್ಟೇ ಇದೆ. ಇಂತಹ ಸಂದರ್ಭದಲ್ಲಿ ಜೆಡಿಎಸ್ ಬಗ್ಗೆ ಯೋಚನೆ ಮಾಡುವ ಅಗತ್ಯ ಇಲ್ಲ ಎಂದು ತಿರುಗೇಟು ನೀಡಿದರು.