ನೋಂದಣಿ ಮತ್ತು ಮುದ್ರಾಂಕ ಇಲಾಖೆ ಕಾರ್ಯ ಸರಳೀಕರಿಸಲು ಕಾವೇರಿ 2.0 ತಂತ್ರಾಂಶ
ಬೆಂಗಳೂರು: ನೋಂದಣಿ ಮತ್ತು ಮುದ್ರಾಂಕ ಇಲಾಖೆ ಸರಳೀಕೃತ ಮಾಡುವ ನಿಟ್ಟಿನಲ್ಲಿ ಕಾವೇರಿ 2.0 ತಂತ್ರಾಂಶ ಯಶಸ್ವಿಯಾಗಿ ಅನುಷ್ಠಾನವಾಗಿದೆ. ಶನಿವಾರದೊಳಗಾಗಿ 256 ಉಪ ನೋಂದಣಿ ಕಚೇರಿಯಲ್ಲಿ ಅನುಷ್ಠಾನ ಮಾಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಕಾವೇರಿ 2 ದಾಖಲೆಗಳನ್ನು ಆನ್ ಲೈನ್ ನಲ್ಲಿ ಸಬ್ಮಿಟ್ ಮಾಡಬಹುದು. ಉಪನೋಂದಣಾಧಿಕಾರಿ ಆನ್ಲೈನ್ ನಲ್ಲೇ ದಾಖಲಾತಿ ಪರಿಶೀಲನೆ ಮಾಡುತ್ತಾರೆ. ನೋಂದಣಿ ಮಾಡುವವರು ತಮಗೆ ಬೇಕಾದ ಸಮಯದಲ್ಲಿ ಅಪಾಯಿಟ್ಮೆಂಟ್ ಪಡೆದುಕೊಳ್ಳಲು ಅವಕಾಶ ಇದೆ. ಹತ್ತರಿಂದ ಹದಿನೈದು ನಿಮಿಷನಲ್ಲಿ ನೋಂದಣಿ ಕಾರ್ಯ ಮುಗಿಸಲು ಅವಕಾಶ ಇದೆ ಎಂದು ವಿವರಿಸಿದರು.
ಆನ್ ಲೈನ್ ನೋಂದಣಿಯಿಂದ ರಾಜ್ಯದಲ್ಲಿ ಎಷ್ಟು ನೋಂದಣಿ ನಡೆಯಿತು ಎಂಬ ಮಾಹಿತಿ ಸರ್ಕಾರಕ್ಕೆ ಪ್ರತಿದಿನ ತಿಳಿಯಲಿದೆ. ಇದರಿಂದ ತಪ್ಪುಗಳು ಕಡಿಮೆಯಾಗುತ್ತದೆ. ಭ್ರಷ್ಟಾಚಾರಕ್ಕೂ ಕಡಿವಾಣ ಬೀಳಲಿದೆ. ನೋಂದಣಿ ಕೇಂದ್ರಗಳಲ್ಲಿ ಅವ್ಯವಸ್ಥಿತವಾದ ಪರಿಸ್ಥಿತಿ ಇದೆ. ಜನರು ಕಾಯಬೇಕಾದ ಪರಿಸ್ಥಿತಿ ಇದೆ. ಜನರು ಅವರ ಆಸ್ತಿ ಮಾರಾಟಕ್ಕೂ ಪಡವಾರದ ಯಾತನೆ ಪಡುವಂತಹಾ ಸ್ಥಿತಿ ಇದೆ. ಮೊದಲು ಕಾವೇರಿ ಒನ್ ಆಪ್ ಮೂಲಕ ನೋಂದಣಿ ನಡೆಯುತ್ತಿತ್ತು. ಬಳಿಕ ಸರಳೀಕರಣ ಮಾಡಿ ಕಾವೇರಿ 2 ಆಪ್ ಮಾಡಲಾಗಿದೆ. ಆದರೆ ಇದರಿಂದ ಆದ ತೊಂದರೆಗಳ ಬಗ್ಗೆಯೂ ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ನಡೆದಿವೆ ಎಂದರು.
ಏಪ್ರಿಲ್ ತಿಂಗಳಿಂದ ಕಾವೇರಿ 2 ಸರಳೀಕೃತ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದೆ. ಒಟ್ಟು 256 ಉಪ ನೋಂದಣಿ ಕಚೇರಿ ಇವೆ. 251 ಉಪ ನೋಂದಣಿ ಕಚೇರಿಯಲ್ಲಿ ಇಂದು ಸಂಜೆ ಅನುಷ್ಠಾನ ಮಾಡಲಿದ್ದೇವೆ. ಶನಿವಾರದೊಳಗೆ 251 ಕೇಂದ್ರಗಳಲ್ಲಿ ಅನುಷ್ಠಾನ ಮಾಡಲಿದ್ದೇವೆ ಎಂದು ತಿಳಿಸಿದರು.
bengaluruTimesXP KannadaUpdated: 19 Jun 2023, 8:52 pm - cities
- bengaluru
- Kaveri 2 Software Will Be Implemented In Sub Registrar Office Minister Krishna Byre Gowda