ಬೆಂಗಳೂರು ಯುವಕ-ಯುವತಿಯರೇ... ಮತ ಹಕ್ಕು ಚಲಾಯಿಸೋಕೆ ಯಾಕಿಷ್ಟು ಉದಾಸೀನ?
ಬೆಂಗಳೂರು ವಿಡಿಯೋಗಳಿಗೆ ಚಂದಾದಾರರಾಗಿ
ಲೋಕಸಭೆ ಚುನಾವಣೆ ಎಂಬುದು ಒಂದು ಉತ್ಸವವಿದ್ದಂತೆ. ಈ ಸಂಭ್ರಮದಲ್ಲಿ ಪ್ರತಿಯೊಬ್ಬ ಅರ್ಹ ಮತದಾರ ಪಾಲ್ಗೊಳ್ಳಬೇಕು. ತಮಗೆ ಬೇಕಾದ ಸಂಸದ, ಸರಕಾರವನ್ನು ಆಯ್ಕೆ ಮಾಡಲು ಇದಕ್ಕಿಂತ ಉತ್ತಮ ಅವಕಾಶ ಬೇಕೆ? ಆದರೆ, ಬೆಂಗಳೂರಿನ ನಾಗರಿಕರಲ್ಲಿ ಈ ಉತ್ಸವದಲ್ಲಿ ಭಾಗವಹಿಸಲು ಅಸಡ್ಡೆಯೇಕೆ? ಅದರಲ್ಲಿಯೂ ಯುವಕ-ಯುವತಿಯರು, ಹೊರಗಿನಿಂದ ಬಂದು ನೆಲೆಸಿರುವವರು, ಸಾಫ್ಟ್ ವೇರ್ ಉದ್ಯೋಗಿಗಳು ಉದಾಸೀನತೆ ತೋರಿಸುತ್ತಿರುವುದು ನಿಜಕ್ಕೂ ದುರಂತ. ದಯವಿಟ್ಟು ಬಂದು ಮತದಾನ ಮಾಡಿ, ನಿಮ್ಮ ಕರ್ತವ್ಯ ನಿಭಾಯಿಸಿ... ಅಂತ ಪ್ರತಿಬಾರಿ ಚುನಾವಣೆ ಬಂದಾಗ ಗೋಗರೆಯುವ ಸಂದರ್ಭ ಏಕೆ ಬರಬೇಕು?
ಲೋಕಸಭೆಗೆ ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ನಡೆಯುತ್ತಿರುವಾಗ ಈ ಸನ್ನಿವೇಶ ವಿಭಿನ್ನವಾಗಿರಲಿಲ್ಲ. ಬೆಂಗಳೂರಿನಲ್ಲಿ ಶುಕ್ರವಾರ ಬೆಳಗಿನಿಂದಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೂ, ಹಲವಾರು ಮತಗಟ್ಟೆಗಳಲ್ಲಿ ಮಧ್ಯ ವಯಸ್ಕರು, ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಲು ಬರುತ್ತಿದ್ದರು. ಯುವಕ-ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರದಿರುವುದು ಬೇಸರದ ಸಂಗತಿ.
ಯುವಜನರಿಗಿಂತಲೂ ಹಿರಿಯ ನಾಗರಿಕರೇ ಹೆಚ್ಚಿನ ಉತ್ಸಾಹದಲ್ಲಿ ಮತದಾನ ಮಾಡಿದ್ದು ಕಂಡು ಬಂತು. ಬೆಂಗಳೂರಿನ ನಿವಾಸಿ, 94 ವರ್ಷದ ಏರ್ ಮಾರ್ಷಲ್ ಪಿವಿ ಅಯ್ಯರ್ ಅವರು ಮತದಾನ ಆರಂಭವಾದ ಒಂದು ಗಂಟೆಯಲ್ಲಿಯೇ ಮತ ಚಲಾಯಿಸಿದ್ದಾರೆ. ಇಂಥ ಹಿರಿಯರೇ ಉತ್ಸಾಹದಿಂದ ಮತ ಚಲಾವಣೆ ಮಾಡುತ್ತಿರುವಾಗ, ನಿಮಗೆ ಮತ ಚಲಾಯಿಸದಿರಲು ಕಾರಣವೇನು? ಎಂಬ ಪೋಸ್ಟ್ ಮೂಲಕ ಕಿರಿಯ ನಾಗರಿಕರಿಗೆ ಚುನಾವಣಾ ಆಯೋಗ ಟ್ವಿಟ್ಟರ್ ನಲ್ಲಿ ಪ್ರಶ್ನಿಸಿದೆ.
ಮಾಜಿ ಪ್ರಧಾನಿ, 90 ವರ್ಷದ ಹಿರಿಯ ಮುತ್ಸದ್ದಿ ಹರದನಹಳ್ಳಿ ದೊಡ್ಡೇಗೌಡ ದೇವೇಗೌಡ ಅವರು ಕೂಡ, ನಡೆಯಲಾಗದಿದ್ದರೂ ಸಹಾಯಕರ ಸಹಾಯದಿಂದ ಬಂದು ಹೊಳೆನರಸೀಪುರದಲ್ಲಿ ಮತ ಚಲಾಯಿಸಿದ್ದಾರೆ. ಇನ್ಫೋಸಿಸ್ ಸಂಸ್ಥಾಪಕ 77 ವರ್ಷದ ಹಿರಿಯ ಎನ್ಆರ್ ನಾರಾಯಣಮೂರ್ತಿ ಅವರು ಕೂಡ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿಬಂದು ವೋಟನ್ನು ಹಾಕಿದ್ದಾರೆ.
ಲೋಕಸಭೆಗೆ ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ನಡೆಯುತ್ತಿರುವಾಗ ಈ ಸನ್ನಿವೇಶ ವಿಭಿನ್ನವಾಗಿರಲಿಲ್ಲ. ಬೆಂಗಳೂರಿನಲ್ಲಿ ಶುಕ್ರವಾರ ಬೆಳಗಿನಿಂದಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೂ, ಹಲವಾರು ಮತಗಟ್ಟೆಗಳಲ್ಲಿ ಮಧ್ಯ ವಯಸ್ಕರು, ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಲು ಬರುತ್ತಿದ್ದರು. ಯುವಕ-ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರದಿರುವುದು ಬೇಸರದ ಸಂಗತಿ.
ಯುವಜನರಿಗಿಂತಲೂ ಹಿರಿಯ ನಾಗರಿಕರೇ ಹೆಚ್ಚಿನ ಉತ್ಸಾಹದಲ್ಲಿ ಮತದಾನ ಮಾಡಿದ್ದು ಕಂಡು ಬಂತು. ಬೆಂಗಳೂರಿನ ನಿವಾಸಿ, 94 ವರ್ಷದ ಏರ್ ಮಾರ್ಷಲ್ ಪಿವಿ ಅಯ್ಯರ್ ಅವರು ಮತದಾನ ಆರಂಭವಾದ ಒಂದು ಗಂಟೆಯಲ್ಲಿಯೇ ಮತ ಚಲಾಯಿಸಿದ್ದಾರೆ. ಇಂಥ ಹಿರಿಯರೇ ಉತ್ಸಾಹದಿಂದ ಮತ ಚಲಾವಣೆ ಮಾಡುತ್ತಿರುವಾಗ, ನಿಮಗೆ ಮತ ಚಲಾಯಿಸದಿರಲು ಕಾರಣವೇನು? ಎಂಬ ಪೋಸ್ಟ್ ಮೂಲಕ ಕಿರಿಯ ನಾಗರಿಕರಿಗೆ ಚುನಾವಣಾ ಆಯೋಗ ಟ್ವಿಟ್ಟರ್ ನಲ್ಲಿ ಪ್ರಶ್ನಿಸಿದೆ.
ಮಾಜಿ ಪ್ರಧಾನಿ, 90 ವರ್ಷದ ಹಿರಿಯ ಮುತ್ಸದ್ದಿ ಹರದನಹಳ್ಳಿ ದೊಡ್ಡೇಗೌಡ ದೇವೇಗೌಡ ಅವರು ಕೂಡ, ನಡೆಯಲಾಗದಿದ್ದರೂ ಸಹಾಯಕರ ಸಹಾಯದಿಂದ ಬಂದು ಹೊಳೆನರಸೀಪುರದಲ್ಲಿ ಮತ ಚಲಾಯಿಸಿದ್ದಾರೆ. ಇನ್ಫೋಸಿಸ್ ಸಂಸ್ಥಾಪಕ 77 ವರ್ಷದ ಹಿರಿಯ ಎನ್ಆರ್ ನಾರಾಯಣಮೂರ್ತಿ ಅವರು ಕೂಡ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿಬಂದು ವೋಟನ್ನು ಹಾಕಿದ್ದಾರೆ.