ನಾಲ್ಕೈದು ನಿಂಬೆ ಹಣ್ಣು ಮಂತ್ರ ಮಾಡಿ, ಸರ್ಕಾರ ಬೀಳಿಸೋಣ; ರೇವಣ್ಣ ಕಾಲೆಳೆದ ಅಶೋಕ್
1065 views
ಬೆಂಗಳೂರು ವಿಡಿಯೋಗಳಿಗೆ ಚಂದಾದಾರರಾಗಿಬೆಂಗಳೂರು: ಎರಡು ನಿಂಬೆ ಹಣ್ಣಿನಿಂದ ಸರ್ಕಾರ ಪತನ ಮಾಡಲು ಆಗಲ್ಲ, ನಾಲ್ಕೈದು ನಿಂಬೆ ಹಣ್ಣು ಮಂತ್ರ ಮಾಡಿ, ಸರ್ಕಾರ ಬೀಳಿಸೋಣ! ಹೌದು ಹೀಗಂತ ಮಾಜಿ ಸಚಿವ ಎಚ್ಡಿ ರೇವಣ್ಣ ಕಾಲೆಳೆದಿದ್ದು ವಿರೋಧ ಪಕ್ಷದ ನಾಯಕ ಆರ್. ಅಶೋಕ್. ವಿಧಾನಸಭೆಯಲ್ಲಿ ಭೋಜನ ವಿರಾಮದ ಬಳಿಕ ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಮಾತನಾಡುವ ಸಂದರ್ಭದಲ್ಲಿ ರೇವಣ್ಣ ಕಾಳೆಲೆದರು.
ಸರ್ಕಾರ ಪತನವಾದರೆ ನಿಮಗೆ ಲೋಕೋಪಯೋಗಿ ಫಿಕ್ಸ್ ಎಂದೂ ಅಶೋಕ್ ವ್ಯಂಗ್ಯವಾಗಿ ರೇವಣ್ಣಗೆ ಆಫರ್ ನೀಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ರೇವಣ್ಣ, ಅದರ ಅದರ ಅವಶ್ಯಕತೆ ನಮಗಿಲ್ಲ ಎಂದರು.
ಇನ್ನು ಸದನದಲ್ಲಿ ಸಚಿವರ ಗೈರಿಗೆ ಬಿಜೆಪಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ, ಸದನ ಮುಂದೂಡುವಂತೆ ಸ್ಪೀಕರ್ ಗೆ ಆಗ್ರಹಿಸಿದರು. ಸದನದಲ್ಲಿ ಸಚಿವರ ಗೈರಿಗೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹಾಗೂ ಬಿಜೆಪಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಸಚಿವರು ಇಲ್ಲ, ಅಧಿಕಾರಿಗಳು ಇಲ್ಲ. ಹೀಗಾದರೆ ನಾನು ಮಾತನಾಡಲ್ಲ. ನಾವು ಹೊರಗಡೆ ಹೋಗುತ್ತೇವೆ ಎಂದರು.
ವಿರೋಧ ಪಕ್ಷಗಳ ಆಕ್ಷೇಪದ ಹಿನ್ನಲೆಯಲ್ಲಿ ಸಮಾಧಾನ ಮಾಡಿದ ಆಡಳಿತ ಪಕ್ಷದ ಮುಖ್ಯ ಸಚೇತಕ ಅಶೋಕ್ ಪಟ್ಟಣ, ಸಿಎಲ್ ಪಿ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿ ಮುಂದೆ ಹೀಗೆ ಆಗದಂತೆ ನೋಡಿಕೊಳ್ಳುತ್ತೇನೆ ಎಂದರು. ಈ ವೇಳೆ ಮಧ್ಯಪ್ರವೇಶ ಮಾಡಿದ ಸಚಿವ ಪ್ರಿಯಾಂಕ್ ಖರ್ಗೆ,ಬೆಳಗ್ಗೆ ಬೇಗ ಸದನ ಆರಂಭ ಆಗುವುದರಿಂದ ನಮಗೆ ಸಮಸ್ಯೆ ಆಗ್ತಿದೆ. ಕ್ಷೇತ್ರದ ಜನರು ಬೆಳಗ್ಗೆ ಬರುತ್ತಾರೆ. ಆ ಕಾರಣಕ್ಕಾಗಿ ಸಮಯ ಬದಲಾವಣೆ. ಅಧಿವೇಶನ ಇದ್ದಾಗ ಎಲ್ಲಾ ಸಚುವರು ಇರುತ್ತಾರೆ. ಸಮಸ್ಯೆ ಬಗೆಹರಿಸಲು ಅನುಕೂಲ ಆಗುತ್ತದೆ ಎಂದು ಜನರ ಭಾವನೆ ಎಂದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸ್ಪೀಕರ್ ಖಾದರ್, ಚುನಾವಣೆ ಸಂದರ್ಭದಲ್ಲಿ ಐದು ಗಂಟೆಗೆ ಏಳೋದಿಲ್ವಾ? ಅಧಿವೇಶನ ಸಂದರ್ಭದಲ್ಲಿ ನೀವು ಇಡೀ ರಾಜ್ಯದ ಶಾಸಕರು. ಇತರ ಸಂದರ್ಭದಲ್ಲಿ ಕ್ಷೇತ್ರದ ಶಾಸಕರು. ರಾಜ್ಯದ ನಾಯಕರಾಗಿ ನೀವು ಪ್ರತಿನಿಧಿಸುತ್ತೀರಿ ಎಂದು ಸಲಹೆ ನೀಡಿದರು.
ಸರ್ಕಾರ ಪತನವಾದರೆ ನಿಮಗೆ ಲೋಕೋಪಯೋಗಿ ಫಿಕ್ಸ್ ಎಂದೂ ಅಶೋಕ್ ವ್ಯಂಗ್ಯವಾಗಿ ರೇವಣ್ಣಗೆ ಆಫರ್ ನೀಡಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ರೇವಣ್ಣ, ಅದರ ಅದರ ಅವಶ್ಯಕತೆ ನಮಗಿಲ್ಲ ಎಂದರು.
ಇನ್ನು ಸದನದಲ್ಲಿ ಸಚಿವರ ಗೈರಿಗೆ ಬಿಜೆಪಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ, ಸದನ ಮುಂದೂಡುವಂತೆ ಸ್ಪೀಕರ್ ಗೆ ಆಗ್ರಹಿಸಿದರು. ಸದನದಲ್ಲಿ ಸಚಿವರ ಗೈರಿಗೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹಾಗೂ ಬಿಜೆಪಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಸಚಿವರು ಇಲ್ಲ, ಅಧಿಕಾರಿಗಳು ಇಲ್ಲ. ಹೀಗಾದರೆ ನಾನು ಮಾತನಾಡಲ್ಲ. ನಾವು ಹೊರಗಡೆ ಹೋಗುತ್ತೇವೆ ಎಂದರು.
ವಿರೋಧ ಪಕ್ಷಗಳ ಆಕ್ಷೇಪದ ಹಿನ್ನಲೆಯಲ್ಲಿ ಸಮಾಧಾನ ಮಾಡಿದ ಆಡಳಿತ ಪಕ್ಷದ ಮುಖ್ಯ ಸಚೇತಕ ಅಶೋಕ್ ಪಟ್ಟಣ, ಸಿಎಲ್ ಪಿ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿ ಮುಂದೆ ಹೀಗೆ ಆಗದಂತೆ ನೋಡಿಕೊಳ್ಳುತ್ತೇನೆ ಎಂದರು. ಈ ವೇಳೆ ಮಧ್ಯಪ್ರವೇಶ ಮಾಡಿದ ಸಚಿವ ಪ್ರಿಯಾಂಕ್ ಖರ್ಗೆ,ಬೆಳಗ್ಗೆ ಬೇಗ ಸದನ ಆರಂಭ ಆಗುವುದರಿಂದ ನಮಗೆ ಸಮಸ್ಯೆ ಆಗ್ತಿದೆ. ಕ್ಷೇತ್ರದ ಜನರು ಬೆಳಗ್ಗೆ ಬರುತ್ತಾರೆ. ಆ ಕಾರಣಕ್ಕಾಗಿ ಸಮಯ ಬದಲಾವಣೆ. ಅಧಿವೇಶನ ಇದ್ದಾಗ ಎಲ್ಲಾ ಸಚುವರು ಇರುತ್ತಾರೆ. ಸಮಸ್ಯೆ ಬಗೆಹರಿಸಲು ಅನುಕೂಲ ಆಗುತ್ತದೆ ಎಂದು ಜನರ ಭಾವನೆ ಎಂದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಸ್ಪೀಕರ್ ಖಾದರ್, ಚುನಾವಣೆ ಸಂದರ್ಭದಲ್ಲಿ ಐದು ಗಂಟೆಗೆ ಏಳೋದಿಲ್ವಾ? ಅಧಿವೇಶನ ಸಂದರ್ಭದಲ್ಲಿ ನೀವು ಇಡೀ ರಾಜ್ಯದ ಶಾಸಕರು. ಇತರ ಸಂದರ್ಭದಲ್ಲಿ ಕ್ಷೇತ್ರದ ಶಾಸಕರು. ರಾಜ್ಯದ ನಾಯಕರಾಗಿ ನೀವು ಪ್ರತಿನಿಧಿಸುತ್ತೀರಿ ಎಂದು ಸಲಹೆ ನೀಡಿದರು.