ಅಭಿಷೇಕ್ ಅಂಬರೀಶ್ ಸದ್ಯಕ್ಕೆ ರಾಜಕೀಯಕ್ಕೆ ಬರಲ್ಲ, ಸಿನಿಮಾ ರಂಗದಲ್ಲಿ ಇರ್ತಾರೆ: ಸುಮಲತಾ ಸ್ಪಷ್ಟನೆ
ಬೆಂಗಳೂರು ವಿಡಿಯೋಗಳಿಗೆ ಚಂದಾದಾರರಾಗಿ
ಬೆಂಗಳೂರು: ಪುತ್ರ ಅಭಿಶೇಕ್ ಅಂಬರೀಶ್ ಸದ್ಯ ರಾಜಕೀಯಕ್ಕೆ ಬರುವುದಿಲ್ಲ, ಬದಲಾಗಿ ಸಿನಿಮಾ ರಂಗದಲ್ಲೇ ಮುಂದುವರಿಯುತ್ತಾರೆ ಎಂದು ಸುಮಲತಾ ಅಂಬರೀಶ್ ಹೇಳಿದರು. ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಈಗ ನಾನು ಬಿಜೆಪಿ ಸೇರಿ ಮೊದಲ ಹೆಜ್ಜೆ ಹಾಕಿದ್ದೇನೆ. ಮುಂದೆ ವರಿಷ್ಠರು, ನಾಯಕರ ಜತೆ ಚರ್ಚೆ ಮಾಡಿ ಸಲಹೆ ಪಡೆದು ಮುಂದುವರೆಯುತ್ತೇನೆ ಎಂದರು.
ಬಿಜೆಪಿಯಲ್ಲಿ ಎಲ್ಲರೂ ಕಾರ್ಯಕರ್ತರೇ, ನನಗೆ ಯಾವ ಪಾತ್ರ ಕೊಟ್ಟಿದ್ದಾರೆ, ಕೊಡ್ತಾರೆ ಅನ್ನೋ ಪ್ರಶ್ನೆ ಬರಲ್ಲ. ನಾಯಕರು ಏನು ತೀರ್ಮಾನ ಮಾಡ್ತಾರೋ ಅದಕ್ಕೆ ಬದ್ಧ ಎಂದು ಇದೇ ಸಂದರ್ಭದಲ್ಲಿ ಹೇಳಿದರು. ನಾನು ಬಿಜೆಪಿಯಿಂದ ಮೋಸ ಹೋಗಿಲ್ಲ. ಮೋಸ ಹೋಗಿದೀನಿ ಅಂತಿದ್ರೆ ಅದೇ ಪಕ್ಷ ಯಾಕೆ ಸೇರ್ತಿದ್ದೆ? ಬಿಜೆಪಿಗೆ ಸಂಪೂರ್ಣ ಮನಸ್ಸಿಂದ, ಸಂತೋಷದಿಂದ ಸೇರಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಮಂಡ್ಯ ಅಭ್ಯರ್ಥಿ ಎಚ್ಡಿ ಕುಮಾರಸ್ವಾಮಿ ಅವರು, ಸಹಕಾರ ಕೊಡಿ ಅಂತ ಕೇಳಿದ್ದಾರೆ. ಅವರ ಪರ ಪ್ರಚಾರಕ್ಕೆ ಬನ್ನಿ ಅಂತ ಏನೂ ಕರೆದಿಲ್ಲ. ಪಕ್ಷದಿಂದ ಏನು ಸೂಚನೆ ಬರುತ್ತೋ ಅದರಂತೆ ನಡೆದುಕೊಳ್ತೇನೆ ಎಂದು ಹೇಳಿದರು. ಮಾಜಿ ಸಂಸದೆ ಅಂತ ಮಂಡ್ಯ ಇನ್ನು ಮುಂದೆ ನನ್ನ ನೋಡಲಿದೆ. ಖಂಡಿತ ಮಂಡ್ಯದಲ್ಲಿ ಬಿಜೆಪಿಗೆ ಮತ್ತಷ್ಟು ಶಕ್ತಿ ತುಂಬುವ ಅವಶ್ಯಕತೆ ಇದೆ. ಮಂಡ್ಯದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ಗುರಿ ಇದೆ. ಮೋದಿ ಅವರ ಜೊತೆ ಕೈ ಜೋಡಿಸಬೇಕು ಅಂತ ಬಂದಿದ್ದೇನೆ. ಈ ಕಾರಣಕ್ಕಾಗಿ ಬಿಜೆಪಿ ಸೇರ್ಪಡೆ ಆಗಿದ್ದೇನೆ ಎಂದರು.
ದರ್ಶನ್, ಯಶ್ ಬೆಂಬಲ ವಿಚಾರ ಈಗ ಸದ್ಯಕ್ಕೆ ಅಪ್ರಸ್ತುತ. ಮೊನ್ನೆ ನಡೆದ ಸಭೆಯಲ್ಲಿ ದರ್ಶನ್ ಬಂದಿದ್ರು. ನನ್ನ ನಿರ್ಧಾರಕ್ಕೆ ಬೆಂಬಲ ಅಂತ ಹೇಳಿದ್ದಾರೆ. ಈಗ ನಾನು ಲೋಕಸಭೆಯಲ್ಲಿ ಸ್ಪರ್ಧೆ ಮಾಡ್ತಿಲ್ಲ. ಮುಂದಿನ ಚುನಾವಣಾ ರಾಜಕೀಯ ಬಿಜೆಪಿ ನಾಯಕರು ಯಾವ ತೀರ್ಮಾನ ತಗೋತಾರೋ ನೋಡಬೇಕು. ನಾನು ಈಗ ಬಿಜೆಪಿ ಸೇರಿದ್ದು, ನಾನೊಬ್ಬಳೇ ನಿರ್ಧಾರ ಕೈಗೊಳ್ಳಲು ಆಗಲ್ಲ ಎಂದರು.
ಬಿಜೆಪಿಯಲ್ಲಿ ಎಲ್ಲರೂ ಕಾರ್ಯಕರ್ತರೇ, ನನಗೆ ಯಾವ ಪಾತ್ರ ಕೊಟ್ಟಿದ್ದಾರೆ, ಕೊಡ್ತಾರೆ ಅನ್ನೋ ಪ್ರಶ್ನೆ ಬರಲ್ಲ. ನಾಯಕರು ಏನು ತೀರ್ಮಾನ ಮಾಡ್ತಾರೋ ಅದಕ್ಕೆ ಬದ್ಧ ಎಂದು ಇದೇ ಸಂದರ್ಭದಲ್ಲಿ ಹೇಳಿದರು. ನಾನು ಬಿಜೆಪಿಯಿಂದ ಮೋಸ ಹೋಗಿಲ್ಲ. ಮೋಸ ಹೋಗಿದೀನಿ ಅಂತಿದ್ರೆ ಅದೇ ಪಕ್ಷ ಯಾಕೆ ಸೇರ್ತಿದ್ದೆ? ಬಿಜೆಪಿಗೆ ಸಂಪೂರ್ಣ ಮನಸ್ಸಿಂದ, ಸಂತೋಷದಿಂದ ಸೇರಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಮಂಡ್ಯ ಅಭ್ಯರ್ಥಿ ಎಚ್ಡಿ ಕುಮಾರಸ್ವಾಮಿ ಅವರು, ಸಹಕಾರ ಕೊಡಿ ಅಂತ ಕೇಳಿದ್ದಾರೆ. ಅವರ ಪರ ಪ್ರಚಾರಕ್ಕೆ ಬನ್ನಿ ಅಂತ ಏನೂ ಕರೆದಿಲ್ಲ. ಪಕ್ಷದಿಂದ ಏನು ಸೂಚನೆ ಬರುತ್ತೋ ಅದರಂತೆ ನಡೆದುಕೊಳ್ತೇನೆ ಎಂದು ಹೇಳಿದರು. ಮಾಜಿ ಸಂಸದೆ ಅಂತ ಮಂಡ್ಯ ಇನ್ನು ಮುಂದೆ ನನ್ನ ನೋಡಲಿದೆ. ಖಂಡಿತ ಮಂಡ್ಯದಲ್ಲಿ ಬಿಜೆಪಿಗೆ ಮತ್ತಷ್ಟು ಶಕ್ತಿ ತುಂಬುವ ಅವಶ್ಯಕತೆ ಇದೆ. ಮಂಡ್ಯದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ಗುರಿ ಇದೆ. ಮೋದಿ ಅವರ ಜೊತೆ ಕೈ ಜೋಡಿಸಬೇಕು ಅಂತ ಬಂದಿದ್ದೇನೆ. ಈ ಕಾರಣಕ್ಕಾಗಿ ಬಿಜೆಪಿ ಸೇರ್ಪಡೆ ಆಗಿದ್ದೇನೆ ಎಂದರು.
ದರ್ಶನ್, ಯಶ್ ಬೆಂಬಲ ವಿಚಾರ ಈಗ ಸದ್ಯಕ್ಕೆ ಅಪ್ರಸ್ತುತ. ಮೊನ್ನೆ ನಡೆದ ಸಭೆಯಲ್ಲಿ ದರ್ಶನ್ ಬಂದಿದ್ರು. ನನ್ನ ನಿರ್ಧಾರಕ್ಕೆ ಬೆಂಬಲ ಅಂತ ಹೇಳಿದ್ದಾರೆ. ಈಗ ನಾನು ಲೋಕಸಭೆಯಲ್ಲಿ ಸ್ಪರ್ಧೆ ಮಾಡ್ತಿಲ್ಲ. ಮುಂದಿನ ಚುನಾವಣಾ ರಾಜಕೀಯ ಬಿಜೆಪಿ ನಾಯಕರು ಯಾವ ತೀರ್ಮಾನ ತಗೋತಾರೋ ನೋಡಬೇಕು. ನಾನು ಈಗ ಬಿಜೆಪಿ ಸೇರಿದ್ದು, ನಾನೊಬ್ಬಳೇ ನಿರ್ಧಾರ ಕೈಗೊಳ್ಳಲು ಆಗಲ್ಲ ಎಂದರು.