Lok Sabha Elections ; ಚಾಮರಾಜನಗರದ ಇಂಡಿಗನತ್ತ ಗ್ರಾಮಸ್ಥರ ಆಕ್ರೋಶ, ಮತಗಟ್ಟೆ ಧ್ವಂಸ ಕಲ್ಲು ತೂರಾಟ
ಚಾಮರಾಜನಗರ ವಿಡಿಯೋಗಳಿಗೆ ಚಂದಾದಾರರಾಗಿ
ಲೋಕಸಭಾ ಚುನಾವಣೆ ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ನಡೆಯುತ್ತಿದೆ. ಇತ್ತ ಚಾಮರಾಜನಗರದ ಇಂಡಿಗನತ್ತ ಗ್ರಾಮದಲ್ಲಿ ಚುನಾವಣೆಯನ್ನು ಬಹಿಷ್ಕರಿಸಿ ಮತದಾನಕ್ಕೆ ಬಾರದ ಗ್ರಾಮಸ್ಥರನ್ನು ಮನವೊಲಿಕೆಗೆ ತಹಶೀಲ್ದಾರರು ಮುಂದಾಗಿದ್ದ ಸಮಯದಲ್ಲಿ ಸಿಟ್ಟಿಗೆದ್ದ ಇಂಡಿಗನತ್ತ ಗ್ರಾಮಸ್ಥರು ಮತಗಟ್ಟೆಯನ್ನು ಧ್ವಂಸ ಮಾಡಿದ್ದಾರೆ. ಚಾಮರಾಜನಗರ ಜಿಲ್ಲೆಯ ಮಹಾದೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರೋ ಇಂಡಗಿನತ್ತ ಗ್ರಾಮಕ್ಕೆ ಹಲವಾರು ವರ್ಷಗಳಿಂದ ಮೂಲಭೂತ ಸೌಕರ್ಯ ಇರಲಿಲ್ಲ, ಇದರಿಂದ ಮತದಾನ ಬಹಿಷ್ಕರಿಸಿದ್ದ ಗ್ರಾಮಸ್ಥರನ್ನು ತಹಶೀಲ್ದಾರ್ ಗರುಪ್ರಸಾದ್ ನೇತೃತ್ವದ ತಂಡ ಮನವೊಲಿಕೆ ಮಾಡಲು ಮುಂದಾದ ಸಮಯದಲ್ಲಿ ವಾದ ವಿವಾದಗಳು ನಡೆದವು. ಮಾತಿಗೆ ಮಾತು ಬೆಳೆದು ಆಕ್ರೋಶಗೊಂಡ ಗ್ರಾಮಸ್ಥರು ಮತಗಟ್ಟೆಗಳನ್ನು ಧ್ವಂಸ ಮಾಡಿದ್ದಾರೆ. ಅದಲ್ಲದೇ ಮತಗಟ್ಟೆಗೆ ನುಗ್ಗಿ ಪೀಠೋಪಕರಣಗಳನ್ನು ಧ್ವಂಸ ಮಾಡಿದ್ದಾರೆ. ಪೊಲೀಸರು ಲಾಠಿ ಚಾರ್ಜ್ ಮಾಡಿದ್ದು, ಕಲ್ಲು ತೂರಾಟ ಮಾಡಿದ್ದರಿಂದ ಘಟನೆಯಲ್ಲಿ ಮಹಿಳೆಯರಿಗೂ ಕೂಡ ಗಾಯಗೊಂಡಿದ್ದಾರೆ.