ಪ್ರತಿ ದಿನ 4 ತಾಸು ಮನೇಲಿ ಇರ್ತಿನಿ, ಬಂದು ಮನವಿ ಕೊಡಿ - ಪ್ರದೀಪ್ ಈಶ್ವರ್
1096 views
ಚಿಕ್ಕಬಳ್ಳಾಪುರ ವಿಡಿಯೋಗಳಿಗೆ ಚಂದಾದಾರರಾಗಿಚಿಕ್ಕಬಳ್ಳಾಪುರ: ನನ್ನನ್ನು ಜೈಲಿಗೆ ಕಳುಹಿಸಿದ್ದಕ್ಕೆ ಎಂಎಲ್ಎ ಆಗಿಬಿಟ್ಟೆ. ಐದು ವರ್ಷಗಳ ಪಟ್ಟ ಕಷ್ಟವನ್ನು ಸಹಿಸಿಕೊಂಡು, ಈಗ ಚುನಾವಣೆಯಲ್ಲಿ ಗೆದ್ದು ಸುಧಾಕರ್ ಅವರ ರಾಜಕೀಯ ಜೀವನವನ್ನು ಮುಗಿಸಿದ್ದೇನೆ. ಆದರೆ ದ್ವೇಷವನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳಲ್ಲ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.
ನಗರದ ಹರ್ಷೋದಯ ಕಲ್ಯಾಣ ಮಂಟಪದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜಕೀಯದಲ್ಲಿ ದ್ವೇಷ ಬೇಡ. ಕೇಸ್ ಹಾಕಿಸಿ ಜೈಲಿಗೆ ಕಳುಹಿಸುವುದು ಸುಲಭ. ಆದರೆ, ಸಾಕಷ್ಟು ಜನರು ಅದನ್ನೇ ಸೇಡಾಗಿ ತೆಗೆದುಕೊಳ್ಳುತ್ತಾರೆ. ಇನ್ನಷ್ಟು ಅಪರಾಧಗಳಿಗೆ ಕಾರಣವಾಗುತ್ತಾರೆ. ಆದರೆ ನಾನು ನನ್ನನ್ನು ಜೈಲಿಗೆ ಹಾಕಿಸಿದ್ದನ್ನೇ ಸವಾಲಾಗಿ ಸ್ವೀಕರಿಸಿ ಕಷ್ಟವನ್ನು ಸಹಿಸಿಕೊಂಡು ಈಗ ಶಾಸಕನಾಗಿದ್ದೇನೆ ಎಂದರು.
ನಗರದ ಹರ್ಷೋದಯ ಕಲ್ಯಾಣ ಮಂಟಪದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜಕೀಯದಲ್ಲಿ ದ್ವೇಷ ಬೇಡ. ಕೇಸ್ ಹಾಕಿಸಿ ಜೈಲಿಗೆ ಕಳುಹಿಸುವುದು ಸುಲಭ. ಆದರೆ, ಸಾಕಷ್ಟು ಜನರು ಅದನ್ನೇ ಸೇಡಾಗಿ ತೆಗೆದುಕೊಳ್ಳುತ್ತಾರೆ. ಇನ್ನಷ್ಟು ಅಪರಾಧಗಳಿಗೆ ಕಾರಣವಾಗುತ್ತಾರೆ. ಆದರೆ ನಾನು ನನ್ನನ್ನು ಜೈಲಿಗೆ ಹಾಕಿಸಿದ್ದನ್ನೇ ಸವಾಲಾಗಿ ಸ್ವೀಕರಿಸಿ ಕಷ್ಟವನ್ನು ಸಹಿಸಿಕೊಂಡು ಈಗ ಶಾಸಕನಾಗಿದ್ದೇನೆ ಎಂದರು.