ಚಿಂತಾಮಣಿ: ಕೂಲಿಯಿಂದ ಚಿನ್ನದಂಗಡಿಯ ಮಾಲೀಕನನ್ನಾಗಿ ಮಾಡಿತು ಟೊಮೆಟೊ ಬೆಳೆ
1137 views
ಚಿಕ್ಕಬಳ್ಳಾಪುರ ವಿಡಿಯೋಗಳಿಗೆ ಚಂದಾದಾರರಾಗಿಚಿಕ್ಕಬಳ್ಳಾಪುರ: ಕಳೆದ ಒಂದು ತಿಂಗಳಿನಿಂದ ಬರೀ ಟೊಮೆಟೊ ರೇಟಿನದ್ದೇ ಸದ್ದು. ಚಿಂತಾಮಣಿಯಲ್ಲಿ ರೈತನೊಬ್ಬ ಟೊಮೆಟೊ ಬೆಳೆಯಿಂದಲೇ ಚಿನ್ನದಂಗಡಿ ತೆರೆದು ಈಗಲೂ ಟೊಮೆಟೊ ಬೆಳೆದು ಲಕ್ಷ ಲಕ್ಷ ಲಾಭ ಗಳಿಸುತ್ತಿದ್ದಾನೆ. ಚಿಂತಾಮಣಿ ಬೆಳೆಯಿಂದ ಗಳಿಸಿದ ಹಣದಿಂದಲೇ ಚಿನ್ನದಂಗಡಿ ತೆರೆದ ರೈತ ಈಗಲೂ ಟೊಮೆಟೊ ಬೆಳೆದು ಲಾಭ ಗಳಿಸುತ್ತಿದ್ದಾನೆ. ಚಿನ್ನದಂಥಹ ಟೊಮೆಟೊ ಬೆಳೆದು ಚಿನ್ನದಂಗಡಿ ಮೂಲಕವೂ ಲಾಭ ಗಳಿಸಿ ಇಡೀ ಜಿಲ್ಲೆಯಲ್ಲೇ ಟೊಮೆಟೊ ಗೋಲ್ಡ್ ಮ್ಯಾನ್ ಎಂದೇ ಪ್ರಸಿದ್ಧಿಯಾಗಿದ್ದಾರೆ.
ಚಿಕ್ಕಬಳ್ಳಾಪರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಅಂಬಾಜಿದುರ್ಗ ಹೋಬಳಿಯ ನಲಮಾಚನಹಳ್ಳಿ ನಿವಾಸಿ ಚಿನ್ನದಂಗಡಿ ಮಾಲೀಕ ಚಂದ್ರಶೇಖರ್. ಎರಡು ಲಕ್ಷ ಬಂಡವಾಳ ಹಾಕಿ 50 ಲಕ್ಷ ರೂ. ಗಳಿಸಿದ್ದಾರೆ . ಹೌದು ಯಶಸ್ವಿ ಆಭರಣದ ಅಂಗಡಿಯನ್ನು ನಡೆಸುವುದರ ಜೊತೆಗೆ, ನರ್ಸರಿ, ಕೋಳಿ ಕೇಂದ್ರ, ಕೃಷಿ ಮಾಡುವುದರಲ್ಲಿ ಯಶಸ್ವಿ ರೈತರ ಜೊತೆಗೆ ಬಂಗಾರದ ಉದ್ಯಮಿಯಾಗಿ ರೂಪಗೊಂಡಿದ್ದಾರೆ.
ಮೊದಲು 2009 ರಲ್ಲಿ 10 ಎಕರೆ ಪಿತ್ರಾರ್ಜಿತ ಜಮೀನು 1.5 ಎಕರೆಯಲ್ಲಿ ಟೊಮೆಟೊ ಬೆಳೆದು ಅಲ್ಪ ಸ್ವಲ್ಪ ಲಾಭ ಪಡೆದಿದ್ದ. ನಂತರ 2014 ರಲ್ಲಿ ಬೆಳೆದ ಬೆಳೆಯಿಂದ ಸುಮಾರು 50 ಲಕ್ಷ ರೂ. ಲಾಭ ಪಡೆದು 2014ರಲ್ಲೇ ಚಿನ್ನದ ಅಂಗಡಿಯನ್ನು ಪ್ರಾರಂಭ ಮಾಡಿದ್ದಾರೆ. ಮೊದಲು ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡಿದ್ದ ಅನುಭವ ಇದ್ದ ಹಿನ್ನಲೆ ಟೊಮೆಟೋ ಬೆಳೆದು ಬಂದ ಲಾಭದಲ್ಲಿ ಚಿನ್ನದ ಅಂಗಡಿಯನ್ನು ತೆರೆದು ಯಶಸ್ವಿಯಾಗಿದ್ದಾರೆ.
ಸತತ ಐದು ವರ್ಷಗಳ ಕಾಲ ಟೊಮೇಟೋ ಬೆಳೆದು ನಷ್ಟ ಅನುಭವಿಸಿದ್ದಾರೆ. ಆದರೆ ಜೀವನ ಕೊಟ್ಟ ಟೊಮೇಟೊ ಬೆಳೆಯನ್ನು ಪ್ರತಿ ವರ್ಷ ಬೆಳೆಯುತ್ತಿದ್ದು, ಈ ವರ್ಷ ಸುಮಾರು ಇಲ್ಲಿಯವರಗೆ 50 ಲಕ್ಷ ರೂ. ಲಾಭ ಗಳಿಸಿದ್ದಾರೆ. ಚಿಂತಾಮಣಿ ನಗರದ ಅಜಾದ್ ವೃತ್ತದಲ್ಲಿ ಚಿನ್ನದ ಅಂಗಡಿಯನ್ನು ತೆರೆದು ಪ್ರತಿನಿತ್ಯ ಚಿನ್ನ ಮಾರಾಟದ ಜೊತೆಗೆ ಕೃಷಿಯನ್ನೂ ಸಹ ಮಾಡುತ್ತಿದ್ದಾರೆ.
ಟೊಮೇಟೋ ಕೃಷಿಯಿಂದಲೇ ಚಿನ್ನದ ವ್ಯಾಪಾರಿಯಾದ ಚಂದ್ರಶೇಖರ್ ಈಗಲೂ ಟೊಮೇಟೊ ಬೆಳೆದು ಭರ್ಜರಿ ಲಾಭ ಪಡೆಯತ್ತಿದ್ದಾರೆ. ಬರೀ ವ್ಯಾಪಾರ ಮಾಡಿ ಲಾಭ ಪಡೆಯುವುದಲ್ಲದೆ, ಕೃಷಿಯಲ್ಲಿಯೂ ತೊಡಗಿಸಿಕೊಂಡು ಒಂದಷ್ಟು ಜನರಿಗೆ ಕೆಲಸವನ್ನೂ ಸಹ ನೀಡಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಮಾದರಿದ್ದಾರೆ. ರೆಡ್ ಬ್ಯೂಟಿ ಹಿಂದೆ ಬಿದ್ದ ರೈತ ಈಗ ಗೋಲ್ಡನ್ ಮ್ಯಾನ್ ಆಗಿ ಹೆಸರು ಮತ್ತು ಹಣವನ್ನು ಮಾಡುತ್ತಿದ್ದಾರೆ.
ಚಿಕ್ಕಬಳ್ಳಾಪರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಅಂಬಾಜಿದುರ್ಗ ಹೋಬಳಿಯ ನಲಮಾಚನಹಳ್ಳಿ ನಿವಾಸಿ ಚಿನ್ನದಂಗಡಿ ಮಾಲೀಕ ಚಂದ್ರಶೇಖರ್. ಎರಡು ಲಕ್ಷ ಬಂಡವಾಳ ಹಾಕಿ 50 ಲಕ್ಷ ರೂ. ಗಳಿಸಿದ್ದಾರೆ . ಹೌದು ಯಶಸ್ವಿ ಆಭರಣದ ಅಂಗಡಿಯನ್ನು ನಡೆಸುವುದರ ಜೊತೆಗೆ, ನರ್ಸರಿ, ಕೋಳಿ ಕೇಂದ್ರ, ಕೃಷಿ ಮಾಡುವುದರಲ್ಲಿ ಯಶಸ್ವಿ ರೈತರ ಜೊತೆಗೆ ಬಂಗಾರದ ಉದ್ಯಮಿಯಾಗಿ ರೂಪಗೊಂಡಿದ್ದಾರೆ.
ಮೊದಲು 2009 ರಲ್ಲಿ 10 ಎಕರೆ ಪಿತ್ರಾರ್ಜಿತ ಜಮೀನು 1.5 ಎಕರೆಯಲ್ಲಿ ಟೊಮೆಟೊ ಬೆಳೆದು ಅಲ್ಪ ಸ್ವಲ್ಪ ಲಾಭ ಪಡೆದಿದ್ದ. ನಂತರ 2014 ರಲ್ಲಿ ಬೆಳೆದ ಬೆಳೆಯಿಂದ ಸುಮಾರು 50 ಲಕ್ಷ ರೂ. ಲಾಭ ಪಡೆದು 2014ರಲ್ಲೇ ಚಿನ್ನದ ಅಂಗಡಿಯನ್ನು ಪ್ರಾರಂಭ ಮಾಡಿದ್ದಾರೆ. ಮೊದಲು ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡಿದ್ದ ಅನುಭವ ಇದ್ದ ಹಿನ್ನಲೆ ಟೊಮೆಟೋ ಬೆಳೆದು ಬಂದ ಲಾಭದಲ್ಲಿ ಚಿನ್ನದ ಅಂಗಡಿಯನ್ನು ತೆರೆದು ಯಶಸ್ವಿಯಾಗಿದ್ದಾರೆ.
ಸತತ ಐದು ವರ್ಷಗಳ ಕಾಲ ಟೊಮೇಟೋ ಬೆಳೆದು ನಷ್ಟ ಅನುಭವಿಸಿದ್ದಾರೆ. ಆದರೆ ಜೀವನ ಕೊಟ್ಟ ಟೊಮೇಟೊ ಬೆಳೆಯನ್ನು ಪ್ರತಿ ವರ್ಷ ಬೆಳೆಯುತ್ತಿದ್ದು, ಈ ವರ್ಷ ಸುಮಾರು ಇಲ್ಲಿಯವರಗೆ 50 ಲಕ್ಷ ರೂ. ಲಾಭ ಗಳಿಸಿದ್ದಾರೆ. ಚಿಂತಾಮಣಿ ನಗರದ ಅಜಾದ್ ವೃತ್ತದಲ್ಲಿ ಚಿನ್ನದ ಅಂಗಡಿಯನ್ನು ತೆರೆದು ಪ್ರತಿನಿತ್ಯ ಚಿನ್ನ ಮಾರಾಟದ ಜೊತೆಗೆ ಕೃಷಿಯನ್ನೂ ಸಹ ಮಾಡುತ್ತಿದ್ದಾರೆ.
ಟೊಮೇಟೋ ಕೃಷಿಯಿಂದಲೇ ಚಿನ್ನದ ವ್ಯಾಪಾರಿಯಾದ ಚಂದ್ರಶೇಖರ್ ಈಗಲೂ ಟೊಮೇಟೊ ಬೆಳೆದು ಭರ್ಜರಿ ಲಾಭ ಪಡೆಯತ್ತಿದ್ದಾರೆ. ಬರೀ ವ್ಯಾಪಾರ ಮಾಡಿ ಲಾಭ ಪಡೆಯುವುದಲ್ಲದೆ, ಕೃಷಿಯಲ್ಲಿಯೂ ತೊಡಗಿಸಿಕೊಂಡು ಒಂದಷ್ಟು ಜನರಿಗೆ ಕೆಲಸವನ್ನೂ ಸಹ ನೀಡಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಮಾದರಿದ್ದಾರೆ. ರೆಡ್ ಬ್ಯೂಟಿ ಹಿಂದೆ ಬಿದ್ದ ರೈತ ಈಗ ಗೋಲ್ಡನ್ ಮ್ಯಾನ್ ಆಗಿ ಹೆಸರು ಮತ್ತು ಹಣವನ್ನು ಮಾಡುತ್ತಿದ್ದಾರೆ.