ST Somashekar : ಏನ್ ಮೋಡಿ ಮಾಡ್ತಾರೋ ಗೊತ್ತಿಲ್ಲ ಸುಧಾಕರ್ ಹೇಳಿದಂತೆ ಯಡಿಯೂರಪ್ಪ, ಬೊಮ್ಮಾಯಿ ಕೇಳ್ತಾರೆ: ಆರೋಗ್ಯ ಸಚಿವರನ್ನು ಹಾಡಿ ಹೊಗಳಿದ ಎಸ್ಟಿ ಸೋಮಶೇಖರ್
1002 views
ಚಿಕ್ಕಬಳ್ಳಾಪುರ ವಿಡಿಯೋಗಳಿಗೆ ಚಂದಾದಾರರಾಗಿಚಿಕ್ಕಬಳ್ಳಾಪುರ : ಸಚಿವ ಎಸ್ಟಿ ಸೋಮಶೇಖರ್ ಅವರು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಗುಣಗಾನ ಮಾಡಿದ್ರು. ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 108 ಅಡಿ ಎತ್ತರದ ಕೆಂಪೇಗೌಡ ಕಂಚಿನ ಪ್ರತಿಮೆ ನಿರ್ಮಾಣ ಮಾಡಲು ಸುದಾಕರ್ ಕಾರಣ. ಮುಖ್ಯಮಂತ್ರಿ ಬೊಮ್ಮಾಯಿ ಅವರಿಂದ ಕೋಟಿಗಟ್ಟಲೇ ಹಣ ಬಿಡುಗಡೆ ಮಾಡಿಸಿದ್ರು. ಏನ್ ಮೋಡಿ ಮಾಡ್ತಾರೋ ಗೊತ್ತಿಲ್ಲ ಸುಧಾಕರ್ ಹೇಳಿದ ಹಾಗೆ ಯಡಿಯೂರಪ್ಪ ಬೊಮ್ಮಾಯಿ ಇಬ್ಬರು ಕೇಳ್ತಾರೆ ಎಂದು ಎಸ್ಟಿ ಸೋಮಶೇಖರ್ ಸುಧಾಕರ್ ಕಾಲೆಳೆದರು. ಚಿಕ್ಕಬಳ್ಳಾಪುರದಲ್ಲಿ ತಲೆ ಎತ್ತಿದ ಹದಿನಾಲ್ಕು ಅಡಿ ಎತ್ತರದ ನಾಡಪ್ರಭು ಕಂಪೇಗೌಡರ ಕಂಚಿನ ಪ್ರತಿಮೆ ಲೋಕಾರ್ಪಣೆ ಮಾಡಿದ ಬಳಿಕ ಅವರು ಮಾತನಾಡಿದರು. ಈ ವೇಳೆ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ನಿರ್ಮಲಾನಂದ ಸ್ವಾಮೀಜಿ ಕೂಡ ಇದ್ದರು.