JP Nadda: ಸಿಟಿ ರವಿ ನಿವಾಸಕ್ಕೆ ಜೆಪಿ ನಡ್ಡಾ ಭೇಟಿ; ಲಿಂಗಾಯಿತ ಸ್ವಾಮೀಜಿಗಳ ಆಶೀರ್ವಾದ ಪಡೆದ ಬಿಜೆಪಿ ರಾಷ್ಟ್ರಾಧ್ಯಕ್ಷ
1010 views
ಚಿಕ್ಕಮಗಳೂರು ವಿಡಿಯೋಗಳಿಗೆ ಚಂದಾದಾರರಾಗಿಚಿಕ್ಕಮಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ಶಾಸಕ ಸಿಟಿ ರವಿ ಅವರ ನಿವಾಸಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಭೇಟಿ ನೀಡಿದ್ದಾರೆ. ಜೆಪಿ ನಡ್ಡಾ ಅವರಿಗೆ ಆರತಿ ಎತ್ತಿ, ದಾರಿಯಲ್ಲಿ ಹೂವನ್ನು ಹಾಕಿ ಸ್ವಾಗತ ಕೋರಲಾಯಿತು. ಇದೇ ವೇಳೆ ಜೆಪಿ ನಡ್ಡಾ ಅವರು ಹುಲಿಕೆರೆ ಮಠದ ವಿರೂಪಾಕ್ಷ ಲಿಂಗ ಸ್ವಾಮಿ, ಶಂಕರದೇವರ ಮಠ ಚಂದ್ರಶೇಖರ ಸ್ವಾಮೀಜಿ, ಬಸವ ಮಂದಿರದ ಮರುಳಸಿದ್ದ ಸ್ವಾಮಿಜಿಗಳ ಆಶೀರ್ವಾದವನ್ನು ಪಡೆದರು. ಸ್ವಾಮೀಜಿಗಳ ಕಾಲು ಮುಟ್ಟಿ ನಡ್ಡಾ ಅವರಿಗೆ ಮೂವರು ಸ್ವಾಮೀಜಿಗಳು ಸನ್ಮಾನ ಮಾಡಿದರು. ಚಿಕ್ಕಮಗಳೂರು ತಾಲೂಕಿನ ಈ ಮೂರು ಮಠಗಳು ಲಿಂಗಾಯಿತ ಸಮುದಾಯಕ್ಕೆ ಸೇರಿವೆ ಎಂಬುದು ಗಮನಾರ್ಹ. ಇದಕ್ಕೂ ಮುನ್ನ ಶೃಂಗೇರಿ ಶಾರದಾ ದೇವಸ್ಥಾನಕ್ಕೆ ಜೆಪಿ ನಡ್ಡಾ ಭೇಟಿ, ಶಾರದಾಂಬೆಯ ದರ್ಶನ ಪಡೆದರು.