ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನಲ್ಲಿ ಆನೆಗಳ ದರ್ಬಾರ್: ಭರವಸೆಯಾಗಿಯೇ ಉಳಿದ ಶಾಶ್ವತ ಪರಿಹಾರದ ಮಾತು
ಚಿಕ್ಕಮಗಳೂರು ವಿಡಿಯೋಗಳಿಗೆ ಚಂದಾದಾರರಾಗಿ
ನೋಡಿ...ನೋಡಿ.... ಮಕ್ಳು ಅಕ್ಕ-ಪಕ್ಕದ ಮನೆಯಲ್ಲಿ ಸೀಬೇಹಣ್ಣು ಕದ್ದು ಓಡೋ ರೀತಿ ಹಳ್ಳಿಯೊಳಗೆ ಕಾಡಾನೆಗಳು ಹೇಗೆ ಹೋಗ್ತಿದ್ದಾವೆ ನೋಡಿ. ಈ ಮರಿ ಆನೆ ನೋಡಿ. ದೊಡ್ಡವರ ಜೊತೆ ಊರಿಗೆ ಬಂದು ಗುಂಡಿಯಲ್ಲಿ ಎದ್ದು-ಬಿದ್ದು ಓಡ್ತಿದ್ದಾನೆ. ಇವ್ನನ್ನ ನೋಡಿ. ಏನ್ ತೋಟ ಇವರಪ್ಪಂದು ಅನ್ನಂಗೆ ಎಷ್ಟು ಸಲೀಸಾಗಿ ತೋಟದ ಒಳಗೆ ಹೋಗ್ತಿದ್ದಾನೆ. ಇದನ್ನೆಲ್ಲಾ ಕಣ್ಣಾರೆ ಕಂಡ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಜನ ಭಯದಲ್ಲಿ ಹೈರಾಣಾಗಿದ್ದಾರೆ.
ಈಗಾಗಲೇ ತಿಂಗಳಲ್ಲಿ ಇಬ್ಬರು ಕಾಡಾನೆಗೆ ಬಲಿಯಾಗಿದ್ದಾರೆ. ಜನ ಹೊಲ-ಗದ್ದೆ-ತೋಟಕ್ಕೂ ಹೋಗುವಂತಿಲ್ಲ. ಹಳ್ಳಿಯಲ್ಲೂ ಓಡಾಡುವಂತಿಲ್ಲ. ಸಕಲೇಶಪುರದಿಂದ ಬಂದಿರೋ ಐದು ಗೆಸ್ಟ್ ಕಾಡಾನೆಗಳು ಹಿಂಡು ಮೂಡಿಗೆರೆ ತಾಲೂಕಿನಾದ್ಯಂತ ಮನಸ್ಸೋ ಇಚ್ಛೆ ದಾಂಧಲೆ ಮಾಡ್ತಿವೆ. ಬಂಕೇನಹಳ್ಳಿ, ಬಿದರಹಳ್ಳಿ, ಜೇನುಬೈಲು, ಲೋಕವಳ್ಳಿ ಜನ ಆನೆ ಆತಂಕದಿಂದ ಕಂಗಾಲಾಗಿದ್ದಾರೆ. ಈ ಮಧ್ಯೆ ಲೋಕಲ್ ಕಾಡಾನೆ ಭೈರನಿಂದ ಗುತ್ತಿ ಹಾಗೂ ಕುಂದೂರು ಗ್ರಾಮದ ಜನ ಭಯಗೊಂಡಿದ್ದಾರೆ. ಜನ ಅರಣ್ಯ ಇಲಾಖೆ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ಆದ್ರೆ, ಅರಣ್ಯ ಇಲಾಖೆ ಸಿಬ್ಬಂದಿಗಳ ಜೊತೆ ಆನೆ ಚಲನವಲನಗಳ ಬಗ್ಗೆ ತಿಳಿದಿರುವಂತಹಾ ಲೋಕಲ್ ಹುಡುಗರ ಸಹಾಯದೊಂದಿಗೆ ಇನ್ನೂ ಆನೆಯನ್ನ ಓಡಿಸೋ ಪ್ರಯತ್ನದಲ್ಲೇ ಇದ್ದಾರೋ ವಿನಃ ಶಾಶ್ವತ ಪರಿಹಾರ ಕಲ್ಪಿಸಲು ಮುಂದಾಗ್ತಿಲ್ಲ.
ಮೂಡಿಗೆರೆ ತಾಲೂಕಿನಾದ್ಯಂತ ದಿನದಿಂದ ದಿನಕ್ಕೆ ಆನೆ ಹಾವಳಿ ಹೆಚ್ಚುತ್ತಿದ್ದು ಜನ ಆನೆ ಭಯದಲ್ಲೇ ಬದುಕುತ್ತಿದ್ದಾರೆ. ಹಾಗಾಗಿ, ಅರಣ್ಯ ಇಲಾಖೆ ಕೂಡ ದಸರಾ ಮುಗಿಯುವುದನ್ನೇ ಕಾಯುತ್ತಿದ್ದು ಈಗ ಒಂಟಿ ಸಲಗ ಭೈರನ ಸೆರೆ ಹಿಡಿಯಲು ದಸರಾ ಆನೆಗಳನ್ನ ಕರೆಸಿಕೊಳ್ಳೋಕೆ ಮುಂದಾಗಿದ್ದಾರೆ. ಸ್ಥಳಿಯರ ಸಹಕಾರದಲ್ಲಿ ಆನೆಗಳನ್ನ ಓಡಿಸುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿಗಳು ಹೊಲ-ಗದ್ದೆ-ತೋಟಗಳಲ್ಲಿ ಪಟಾಕಿ ಸಿಡಿಸದಂತೆ ಜನಸಾಮಾನ್ಯರಲ್ಲಿ ಮನವಿ ಮಾಡುತ್ತಿದ್ದಾರೆ. ಪಟಾಕಿ ಸಿಡಿಸಿದರೆ ಆನೆಗಳು ಗಾಬರಿಗೊಂಡು ಬೇಕಾಬಿಟ್ಟಿ ವರ್ತಿಸುತ್ತವೆ. ಇದರಿಂದ ಮತ್ತೊಂದು ಅನಾಹುತ ಸಂಭವಿಸಬಹುದು. ಹಾಗಾಗಿ, ಪಟಾಕಿ ಸಿಡಿಸದಂತೆ ಮನವಿ ಮಾಡುತ್ತಿದ್ದಾರೆ.
ಆನೆಗಳು ನಗರ ಪ್ರದೇಶದಲ್ಲೂ ಸಲೀಸಾಗಿ ಓಡಾಡುತ್ತಿರುವುದರಿಂದ ಅಧಿಕಾರಿಗಳು ಮೈಕ್ ಹಾಕಿಕೊಂಡು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಆನೆಗಳು ಬಂದ ದಾರಿಯಲ್ಲೇ ವಾಪಸ್ ಹೋಗುತ್ತವೆ. ಅವು ಮಾಡುವ ನಷ್ಟಕ್ಕೆ ಪರಿಹಾರ ಕೊಡುತ್ತೇವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಬೆಟ್ಟ-ಗುಡ್ಡದ ಪ್ರದೇಶದಲ್ಲಿ ಆನೆಗಳು ಬರದಂತೆ ಗುಂಡಿ ತೆಗೆಯುವುದು ಒಳ್ಳೆಯದ್ದಲ್ಲ. ಹಾಗಾಗಿ, ಆನೆಗಳು ಬರದಂತೆ ಕೆಂಟಕಲ್ ಮಾದರಿಯಲ್ಲಿ ಸೋಲರ್ ತಂತಿ ಅಳವಡಿಸಲು ಯೋಜನೆ ರೂಪಿಸಿದ್ದೇವೆ ಅಂತಾರೆ ಅಧಿಕಾರಿಗಳು.
ಈಗಾಗಲೇ ತಿಂಗಳಲ್ಲಿ ಇಬ್ಬರು ಕಾಡಾನೆಗೆ ಬಲಿಯಾಗಿದ್ದಾರೆ. ಜನ ಹೊಲ-ಗದ್ದೆ-ತೋಟಕ್ಕೂ ಹೋಗುವಂತಿಲ್ಲ. ಹಳ್ಳಿಯಲ್ಲೂ ಓಡಾಡುವಂತಿಲ್ಲ. ಸಕಲೇಶಪುರದಿಂದ ಬಂದಿರೋ ಐದು ಗೆಸ್ಟ್ ಕಾಡಾನೆಗಳು ಹಿಂಡು ಮೂಡಿಗೆರೆ ತಾಲೂಕಿನಾದ್ಯಂತ ಮನಸ್ಸೋ ಇಚ್ಛೆ ದಾಂಧಲೆ ಮಾಡ್ತಿವೆ. ಬಂಕೇನಹಳ್ಳಿ, ಬಿದರಹಳ್ಳಿ, ಜೇನುಬೈಲು, ಲೋಕವಳ್ಳಿ ಜನ ಆನೆ ಆತಂಕದಿಂದ ಕಂಗಾಲಾಗಿದ್ದಾರೆ. ಈ ಮಧ್ಯೆ ಲೋಕಲ್ ಕಾಡಾನೆ ಭೈರನಿಂದ ಗುತ್ತಿ ಹಾಗೂ ಕುಂದೂರು ಗ್ರಾಮದ ಜನ ಭಯಗೊಂಡಿದ್ದಾರೆ. ಜನ ಅರಣ್ಯ ಇಲಾಖೆ ವಿರುದ್ಧ ಕೆಂಡಾಮಂಡಲರಾಗಿದ್ದಾರೆ. ಆದ್ರೆ, ಅರಣ್ಯ ಇಲಾಖೆ ಸಿಬ್ಬಂದಿಗಳ ಜೊತೆ ಆನೆ ಚಲನವಲನಗಳ ಬಗ್ಗೆ ತಿಳಿದಿರುವಂತಹಾ ಲೋಕಲ್ ಹುಡುಗರ ಸಹಾಯದೊಂದಿಗೆ ಇನ್ನೂ ಆನೆಯನ್ನ ಓಡಿಸೋ ಪ್ರಯತ್ನದಲ್ಲೇ ಇದ್ದಾರೋ ವಿನಃ ಶಾಶ್ವತ ಪರಿಹಾರ ಕಲ್ಪಿಸಲು ಮುಂದಾಗ್ತಿಲ್ಲ.
ಮೂಡಿಗೆರೆ ತಾಲೂಕಿನಾದ್ಯಂತ ದಿನದಿಂದ ದಿನಕ್ಕೆ ಆನೆ ಹಾವಳಿ ಹೆಚ್ಚುತ್ತಿದ್ದು ಜನ ಆನೆ ಭಯದಲ್ಲೇ ಬದುಕುತ್ತಿದ್ದಾರೆ. ಹಾಗಾಗಿ, ಅರಣ್ಯ ಇಲಾಖೆ ಕೂಡ ದಸರಾ ಮುಗಿಯುವುದನ್ನೇ ಕಾಯುತ್ತಿದ್ದು ಈಗ ಒಂಟಿ ಸಲಗ ಭೈರನ ಸೆರೆ ಹಿಡಿಯಲು ದಸರಾ ಆನೆಗಳನ್ನ ಕರೆಸಿಕೊಳ್ಳೋಕೆ ಮುಂದಾಗಿದ್ದಾರೆ. ಸ್ಥಳಿಯರ ಸಹಕಾರದಲ್ಲಿ ಆನೆಗಳನ್ನ ಓಡಿಸುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿಗಳು ಹೊಲ-ಗದ್ದೆ-ತೋಟಗಳಲ್ಲಿ ಪಟಾಕಿ ಸಿಡಿಸದಂತೆ ಜನಸಾಮಾನ್ಯರಲ್ಲಿ ಮನವಿ ಮಾಡುತ್ತಿದ್ದಾರೆ. ಪಟಾಕಿ ಸಿಡಿಸಿದರೆ ಆನೆಗಳು ಗಾಬರಿಗೊಂಡು ಬೇಕಾಬಿಟ್ಟಿ ವರ್ತಿಸುತ್ತವೆ. ಇದರಿಂದ ಮತ್ತೊಂದು ಅನಾಹುತ ಸಂಭವಿಸಬಹುದು. ಹಾಗಾಗಿ, ಪಟಾಕಿ ಸಿಡಿಸದಂತೆ ಮನವಿ ಮಾಡುತ್ತಿದ್ದಾರೆ.
ಆನೆಗಳು ನಗರ ಪ್ರದೇಶದಲ್ಲೂ ಸಲೀಸಾಗಿ ಓಡಾಡುತ್ತಿರುವುದರಿಂದ ಅಧಿಕಾರಿಗಳು ಮೈಕ್ ಹಾಕಿಕೊಂಡು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಆನೆಗಳು ಬಂದ ದಾರಿಯಲ್ಲೇ ವಾಪಸ್ ಹೋಗುತ್ತವೆ. ಅವು ಮಾಡುವ ನಷ್ಟಕ್ಕೆ ಪರಿಹಾರ ಕೊಡುತ್ತೇವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಬೆಟ್ಟ-ಗುಡ್ಡದ ಪ್ರದೇಶದಲ್ಲಿ ಆನೆಗಳು ಬರದಂತೆ ಗುಂಡಿ ತೆಗೆಯುವುದು ಒಳ್ಳೆಯದ್ದಲ್ಲ. ಹಾಗಾಗಿ, ಆನೆಗಳು ಬರದಂತೆ ಕೆಂಟಕಲ್ ಮಾದರಿಯಲ್ಲಿ ಸೋಲರ್ ತಂತಿ ಅಳವಡಿಸಲು ಯೋಜನೆ ರೂಪಿಸಿದ್ದೇವೆ ಅಂತಾರೆ ಅಧಿಕಾರಿಗಳು.