ಕಾಡುಗೊಲ್ಲರ ಮುಳ್ಳಿನ ಜಾತ್ರೆ; ಮುಳ್ಳಿನಿಂದ ದೇವರ ಗುಡಿ, ಬರಿ ಕಾಲಲ್ಲೇ ಏರಿ ಕಳಶ ಕೀಳುವ ಈರಗಾರರು..!
1073 views
ಚಿತ್ರದುರ್ಗ ವಿಡಿಯೋಗಳಿಗೆ ಚಂದಾದಾರರಾಗಿಕಾಡುಗೊಲ್ಲರ ಈ ವಿಶಿಷ್ಟ ಜಾತ್ರೆಯನ್ನು ನೋಡುತ್ತಿದ್ದರೆ ಎಂಥವರಿಗೂ ಮೈ ನಡುಕ ಹುಟ್ಟಿಸುತ್ತೆ. ಬಟ್ಟೆ ಇಲ್ಲದೇ ಬರಿ ಮೈಯಲ್ಲಿ ಮುಳ್ಳಿನ ಮೇಲೆ ಬೀಳುವ ಈ ದೃಶ್ಯ ಎದೆ ಝೆಲ್ಲೆನಿಸುತ್ತೆ. ಹೌದು ಮಧ್ಯ ಕರ್ನಾಟಕದ ಬುಡಕಟ್ಟು ಸಮುದಾಯಗಳ ಸಾಂಸ್ಕೃತಿಕ ಕ್ಯಾತೆದೇವರ ಕಳ್ಳೆ ಮುಳ್ಳಿನ ಗುಡಿಯ ಮೇಲಿನ ಕಳಶ ಕೀಳುವ ಜಾತ್ರೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನೆರವೇರಿದೆ.
ಹೌದು.. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಪೂರ್ಲಹಳ್ಳಿಯ ವಸಲುದಿಬ್ಬದಲ್ಲಿ ಕಾಡುಗೊಲ್ಲರು ಕಳೆದ ಒಂದು ವಾರಗಳಿಂದ ವಿವಿಧ ಪೂಜಾ ಕಾರ್ಯಕ್ರಮದೊಂದಿಗೆ ಮುಳ್ಳಿನ ಗುಡಿಯನ್ನು ನಿರ್ಮಿಸುತ್ತಾರೆ, ಜಾತ್ರೆ ದಿನ ಮುಳ್ಳಿನ ಗುಡಿ ಮೇಲಿದ್ದ ಕಳಶವನ್ನು ಕಾಡುಗೊಲ್ಲ ಸಮುದಾಯದ ಈರಗಾರರು ಕೀಳಲು ತಾ ಮುಂದು, ನಾ ಮುಂದು ಎಂದು ಓಡುತ್ತಾರೆ. ಈ ಸ್ಪರ್ಧೆಯಲ್ಲಿ ಶಿರಾ ತಾಲೂಕಿನ ದ್ವಾರನಕುಂಟೆ ಗ್ರಾಮದ ರಾಘವೇಂದ್ರ ಈರಗಾರ ಮೊದಲು ಕಳಶ ಕಿತ್ತು ಸಂಭ್ರಮಿಸಿದ್ದಾರೆ.
ಕಾಡುಗೊಲ್ಲ ಬುಡಕಟ್ಟಿನ 13 ಗುಡಿಕಟ್ಟಿನವರು ನವಣೆ, ಹುರುಳಿ ಹಾಗೂ ಮನೆ ಶುದ್ಧೀಕರಿಸಿ ಆಚರಣೆ ಆರಂಭಿಸುತ್ತಾರೆ. ಜಾತ್ರೆ ಮುಗಿಯುವವರೆಗೆ ಹುರುಳಿ, ನವಣೆ ಬಳಸುವುದಾಗಲಿ, ಮುಟ್ಟುವುದಾಗಲಿ ಮತ್ತು ನವಣೆ -ಹುರುಳಿ ಬೆಳೆದ ಹೊಲದಲ್ಲಿ ಹೋಗದಂತೆ ಕಟ್ಟುನಿಟ್ಟಿನ ವ್ರತವನ್ನು ಇಂದಿಗೂ ಪಾಲಿಸಿಕೊಂಡು ಬರುತ್ತಿದ್ದಾರೆ.
ಕಾರೆ, ಬಾರೆ ಮುಳ್ಳಿನ ಗಿಡಗಳು ಹಾಗೂ ಹತ್ತಿ, ಕಳ್ಳಿ, ಮರವನ್ನು ಕಡಿದು ನೆಲಕ್ಕೆ ಮುಟ್ಟಿಸದಂತೆ ಜಾತ್ರೆ ನಡೆಯುವ ಸ್ಥಳಕ್ಕೆ ಸಾಗಿಸುತ್ತಾರೆ. ಕ್ಯಾತಪ್ಪ ದೇವರ ಮೂಲ ನೆಲೆಯಾದ ಚನ್ನಮ್ಮ ನಾಗತಿಹಳ್ಳಿ ಗ್ರಾಮದ ದೇವರ ಗುಡಿ ಸುತ್ತಲೂ ಕಳ್ಳಿಯ ಬೇಲಿ ಹಾಕುತ್ತಾರೆ. ಜಾತ್ರೆ ನಡೆಯುವ ಪೂರ್ಲಹಳ್ಳಿಯ ವಸಲುದಿಬ್ಬದಲ್ಲಿ ಬೆಳಗಿನ ಜಾವ 7 ಗಂಟೆ ಸುಮಾರಿನಲ್ಲಿ 18 ರಿಂದ 15 ಅಡಿ ಎತ್ತರದ ಮುಳ್ಳಿನಿಂದ ಗುಡಿ ನಿರ್ಮಿಸಿ ಅದರ ತುದಿಗೆ ಕಂಚಿನ ಪಂಚ ಕಳಶಗಳನ್ನು ಏರಿಸುತ್ತಾರೆ.
ಹೌದು.. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಪೂರ್ಲಹಳ್ಳಿಯ ವಸಲುದಿಬ್ಬದಲ್ಲಿ ಕಾಡುಗೊಲ್ಲರು ಕಳೆದ ಒಂದು ವಾರಗಳಿಂದ ವಿವಿಧ ಪೂಜಾ ಕಾರ್ಯಕ್ರಮದೊಂದಿಗೆ ಮುಳ್ಳಿನ ಗುಡಿಯನ್ನು ನಿರ್ಮಿಸುತ್ತಾರೆ, ಜಾತ್ರೆ ದಿನ ಮುಳ್ಳಿನ ಗುಡಿ ಮೇಲಿದ್ದ ಕಳಶವನ್ನು ಕಾಡುಗೊಲ್ಲ ಸಮುದಾಯದ ಈರಗಾರರು ಕೀಳಲು ತಾ ಮುಂದು, ನಾ ಮುಂದು ಎಂದು ಓಡುತ್ತಾರೆ. ಈ ಸ್ಪರ್ಧೆಯಲ್ಲಿ ಶಿರಾ ತಾಲೂಕಿನ ದ್ವಾರನಕುಂಟೆ ಗ್ರಾಮದ ರಾಘವೇಂದ್ರ ಈರಗಾರ ಮೊದಲು ಕಳಶ ಕಿತ್ತು ಸಂಭ್ರಮಿಸಿದ್ದಾರೆ.
ಕಾಡುಗೊಲ್ಲ ಬುಡಕಟ್ಟಿನ 13 ಗುಡಿಕಟ್ಟಿನವರು ನವಣೆ, ಹುರುಳಿ ಹಾಗೂ ಮನೆ ಶುದ್ಧೀಕರಿಸಿ ಆಚರಣೆ ಆರಂಭಿಸುತ್ತಾರೆ. ಜಾತ್ರೆ ಮುಗಿಯುವವರೆಗೆ ಹುರುಳಿ, ನವಣೆ ಬಳಸುವುದಾಗಲಿ, ಮುಟ್ಟುವುದಾಗಲಿ ಮತ್ತು ನವಣೆ -ಹುರುಳಿ ಬೆಳೆದ ಹೊಲದಲ್ಲಿ ಹೋಗದಂತೆ ಕಟ್ಟುನಿಟ್ಟಿನ ವ್ರತವನ್ನು ಇಂದಿಗೂ ಪಾಲಿಸಿಕೊಂಡು ಬರುತ್ತಿದ್ದಾರೆ.
ಕಾರೆ, ಬಾರೆ ಮುಳ್ಳಿನ ಗಿಡಗಳು ಹಾಗೂ ಹತ್ತಿ, ಕಳ್ಳಿ, ಮರವನ್ನು ಕಡಿದು ನೆಲಕ್ಕೆ ಮುಟ್ಟಿಸದಂತೆ ಜಾತ್ರೆ ನಡೆಯುವ ಸ್ಥಳಕ್ಕೆ ಸಾಗಿಸುತ್ತಾರೆ. ಕ್ಯಾತಪ್ಪ ದೇವರ ಮೂಲ ನೆಲೆಯಾದ ಚನ್ನಮ್ಮ ನಾಗತಿಹಳ್ಳಿ ಗ್ರಾಮದ ದೇವರ ಗುಡಿ ಸುತ್ತಲೂ ಕಳ್ಳಿಯ ಬೇಲಿ ಹಾಕುತ್ತಾರೆ. ಜಾತ್ರೆ ನಡೆಯುವ ಪೂರ್ಲಹಳ್ಳಿಯ ವಸಲುದಿಬ್ಬದಲ್ಲಿ ಬೆಳಗಿನ ಜಾವ 7 ಗಂಟೆ ಸುಮಾರಿನಲ್ಲಿ 18 ರಿಂದ 15 ಅಡಿ ಎತ್ತರದ ಮುಳ್ಳಿನಿಂದ ಗುಡಿ ನಿರ್ಮಿಸಿ ಅದರ ತುದಿಗೆ ಕಂಚಿನ ಪಂಚ ಕಳಶಗಳನ್ನು ಏರಿಸುತ್ತಾರೆ.