ಬರದಿಂದ ಬೆಳೆ ಸಂಪೂರ್ಣ ನಾಶ ; ಕೇಂದ್ರ ಬರ ಅಧ್ಯಯನ ತಂಡದಿಂದ ಸರ್ವೇ..!
1313 views
ಚಿತ್ರದುರ್ಗ ವಿಡಿಯೋಗಳಿಗೆ ಚಂದಾದಾರರಾಗಿಚಿತ್ರದುರ್ಗ : ರಾಜ್ಯದಲ್ಲಿ ಮಳೆಯ ಅಭಾವದ ಸಮಸ್ಯೆ ಉಂಟಾಗಿದ್ದು ಈಗಾಗಲೇ ರೈತರು ಕಂಗಾಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದ ಬರ ಬಗ್ಗೆ ಅಧ್ಯಯನ ನಡೆಸಲು ಕೇಂದ್ರ ತಂಡ ಆಗಮಿಸಿದ್ದು ಅದರಂತೆ ಕೋಟೆ ನಾಡು ಚಿತ್ರದುರ್ಗದಲ್ಲಿ ಕೇಂದ್ರ ತಂಡದಿಂದ ಬೆಳೆಗಳ ವೀಕ್ಷಣೆ ನಡೆಯುತ್ತಿದೆ.
ಕೇಂದ್ರ ಜಲಶಕ್ತಿ ಆಯೋಗದ ನಿರ್ದೇಶಕ ವಿ. ಅಶೋಕ್ ಕುಮಾರ್ ನೇತೃತ್ವದ ಪರ ಅಧ್ಯಯನ ತಂಡ ಚಿತ್ರದುರ್ಗ ತಾಲೂಕಿನ ಬಿಜಾಪುರ ಗ್ರಾಮದ ಮಲ್ಲಿಕಾರ್ಜುನಯ್ಯ ಅವರ ಮೆಕ್ಕೆಜೋಳ ಮತ್ತು ಎಸ್ಎಂ ತಿಪ್ಪೇಸ್ವಾಮಿ ಅವರ ಮೆಕ್ಕೆಜೋಳ ಹಾಗೂ ಸೌಭಾಗ್ಯಮ್ಮ ಅವರ ರಾಗಿ ಜಮೀನುಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ಮಾಡಿ ಪರಿಶೀಲನೆ ನಡೆಸಿದರು.
ಬೀರವಾರ ಗ್ರಾಮದ ಕುಮಾರ್, ವಿನಯ್, ಹರೀಶ್ ಬಾಬು, ಕುಬೇಂದ್ರ ಹಾಗೂ ಪರಮಶಿವಯ್ಯ ಎಂಬ ರೈತರ ಮೆಕ್ಕೆಜೋಳ ಹಾಗೂ ರಾಗಿ ಬೆಳೆಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಿದರು. ಈಗಾಗಲೇ ಜಿಲ್ಲೆಯ ಆರು ತಾಲೂಕುಗಳನ್ನ ಬರಪೀಡಿತ ಪ್ರದೇಶಗಳೆಂದು ಸರ್ಕಾರ ಘೋಷಿಸಿದೆ. ಚಿತ್ರದುರ್ಗ ಮತ್ತು ಚಳ್ಳಕೆರೆಯ ರೈತರ ಜಮೀನುಗಳಿಗೆ ಕೇಂದ್ರ ತಂಡ ಭೇಟಿ ಪರಿಶೀಲನೆ ನಡೆಸಲಿದ್ದಾರೆ.
ಜಿಲ್ಲೆಯಲ್ಲಿ ಆಗಸ್ಟ್ ನಿಂದ ಮಳೆಯಾಗಿಲ್ಲ. ಮಳೆ ಕೈ ಕೊಟ್ಟ ಹಿನ್ನಲೆಯಲ್ಲಿ ಮೆಕ್ಕೆಜೋಳ, ರಾಗಿ, ತೊಗರಿ, ಶೇಂಗಾ ಸೇರಿ ಎಲ್ಲ ಬೆಳೆಗಳು ನಷ್ಟ ಆಗಿವೆ. ಮೇಲ್ನೋಟಕ್ಕೆ ಬೆಳೆಗಳು ಹಸಿರು ಕಾಣುತ್ತಿವಷ್ಟೇ. ಆದರೆ ಬೆಳೆಗಳು ರೈತರ ಕೈ ಹಿಡಿಯುವುದಿಲ್ಲ ಹಸಿರು ಬರದ ಬಗ್ಗೆ ಕೇಂದ್ರ ತಂಡಕ್ಕೆ ಈ ಬೆಳೆಗಳ ಬಗ್ಗೆ ಮನವರಿಕೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ.
ಕೇಂದ್ರ ಜಲಶಕ್ತಿ ಆಯೋಗದ ನಿರ್ದೇಶಕ ವಿ. ಅಶೋಕ್ ಕುಮಾರ್ ನೇತೃತ್ವದ ಪರ ಅಧ್ಯಯನ ತಂಡ ಚಿತ್ರದುರ್ಗ ತಾಲೂಕಿನ ಬಿಜಾಪುರ ಗ್ರಾಮದ ಮಲ್ಲಿಕಾರ್ಜುನಯ್ಯ ಅವರ ಮೆಕ್ಕೆಜೋಳ ಮತ್ತು ಎಸ್ಎಂ ತಿಪ್ಪೇಸ್ವಾಮಿ ಅವರ ಮೆಕ್ಕೆಜೋಳ ಹಾಗೂ ಸೌಭಾಗ್ಯಮ್ಮ ಅವರ ರಾಗಿ ಜಮೀನುಗಳಿಗೆ ಭೇಟಿ ನೀಡಿ ಬೆಳೆ ವೀಕ್ಷಣೆ ಮಾಡಿ ಪರಿಶೀಲನೆ ನಡೆಸಿದರು.
ಬೀರವಾರ ಗ್ರಾಮದ ಕುಮಾರ್, ವಿನಯ್, ಹರೀಶ್ ಬಾಬು, ಕುಬೇಂದ್ರ ಹಾಗೂ ಪರಮಶಿವಯ್ಯ ಎಂಬ ರೈತರ ಮೆಕ್ಕೆಜೋಳ ಹಾಗೂ ರಾಗಿ ಬೆಳೆಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಿದರು. ಈಗಾಗಲೇ ಜಿಲ್ಲೆಯ ಆರು ತಾಲೂಕುಗಳನ್ನ ಬರಪೀಡಿತ ಪ್ರದೇಶಗಳೆಂದು ಸರ್ಕಾರ ಘೋಷಿಸಿದೆ. ಚಿತ್ರದುರ್ಗ ಮತ್ತು ಚಳ್ಳಕೆರೆಯ ರೈತರ ಜಮೀನುಗಳಿಗೆ ಕೇಂದ್ರ ತಂಡ ಭೇಟಿ ಪರಿಶೀಲನೆ ನಡೆಸಲಿದ್ದಾರೆ.
ಜಿಲ್ಲೆಯಲ್ಲಿ ಆಗಸ್ಟ್ ನಿಂದ ಮಳೆಯಾಗಿಲ್ಲ. ಮಳೆ ಕೈ ಕೊಟ್ಟ ಹಿನ್ನಲೆಯಲ್ಲಿ ಮೆಕ್ಕೆಜೋಳ, ರಾಗಿ, ತೊಗರಿ, ಶೇಂಗಾ ಸೇರಿ ಎಲ್ಲ ಬೆಳೆಗಳು ನಷ್ಟ ಆಗಿವೆ. ಮೇಲ್ನೋಟಕ್ಕೆ ಬೆಳೆಗಳು ಹಸಿರು ಕಾಣುತ್ತಿವಷ್ಟೇ. ಆದರೆ ಬೆಳೆಗಳು ರೈತರ ಕೈ ಹಿಡಿಯುವುದಿಲ್ಲ ಹಸಿರು ಬರದ ಬಗ್ಗೆ ಕೇಂದ್ರ ತಂಡಕ್ಕೆ ಈ ಬೆಳೆಗಳ ಬಗ್ಗೆ ಮನವರಿಕೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದ್ದಾರೆ.