Video: ಕಾಂಗ್ರೆಸ್ ಪಕ್ಷ ಸಮುದ್ರ ಇದ್ದಂತೆ ; ಯಾರು ಬೇಕಾದರೂ ಬರಬಹುದು ; ಕೆಎಚ್ ಮುನಿಯಪ್ಪ
1304 views
chitradurga ವಿಡಿಯೋಗಳಿಗೆ ಚಂದಾದಾರರಾಗಿಚಿತ್ರದುರ್ಗ :ಬಿಎಲ್ ಸಂತೋಷ್ ಹತಾಶರಾಗಿದ್ದಾರೆ, ಅವರ ನೇತೃತ್ವದಲ್ಲಿ ಬಿಜೆಪಿ ಪಕ್ಷ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರಿಂದ ಸಂತೋಷ್ ಹತಾಶರಾಗಿದ್ದಾರೆ ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು.
ನಮ್ಮ ಶಾಸಕರೆಲ್ಲರು ಒಗ್ಗಟ್ಟಾಗಿದ್ದಾರೆ, ನಮ್ಮಲ್ಲಿ ಯಾವುದೇ ಸಮಸ್ಯೆ ಇಲ್ಲ, ಅವರ ಪಕ್ಷದವರು ಬೇರೆ ಪಕ್ಷಕ್ಕೆ ಹೋಗದಂತೆ ಬಂದೋಬಸ್ತ್ ಮಾಡುವುದಕ್ಕೆ ಈ ತಂತ್ರ ಮಾಡುತ್ತಿದ್ದಾರೆ. ಮಾಧ್ಯಮಗಳನ್ನು ಸಮಾಧಾನ ಮಾಡಲು ಈ ತಂತ್ರ ರೂಪಿಸಿದ್ದಾರೆ ಎಂದು ತಿಳಿಸಿದರು. ಬಿಜೆಪಿ ಯಾವ ಶಾಸಕರೂ ನನ್ನ ಸಂಪರ್ಕದಲ್ಲಿ ಇಲ್ಲ, ಕಾಂಗ್ರೆಸ್ ಪಕ್ಷ ಒಂದು ಸಮುದ್ರ ಇದ್ದಂತೆ. ಯಾರು ಬೇಕಾದರೂ ಪಕ್ಷಕ್ಕೆ ಬರಬಹುದು, ನಾವು ಸ್ವಾಗತ ಮಾಡುತ್ತೇವೆ ಎಂದರು.
ಚಿತ್ರದುರ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಮೇಲೆ ಚಾರ್ಜ್ ಶೀಟ್ ಹಾಕೋಕೆ ಬಿಜೆಪಿಯವರಿಗೇನು ಅಧಿಕಾರ ಇದೆ ಎಂದು ಪ್ರಶ್ನೆ ಮಾಡಿದ್ದಾರೆ. ನಮಗೆ ಅಭಿವೃದ್ಧಿ ಮಾಡೋದೂ ಗೊತ್ತಿದೆ. ಹಿಂದೆ ಮುಖ್ಯಮಂತ್ರಿಗಳು ಅಭಿವೃದ್ಧಿ ಮಾಡಿದ ಗುರುತುಗಳಿವೆ. ಎತ್ತಿನ ಹೊಳೆ, ಕೆ.ಸಿ ವ್ಯಾಲಿ, ಕೆಎನ್ ವ್ಯಾಲಿ ಸೇರಿ ಭದ್ರಾ ಮೇಲ್ದಂಡೆ ಯೋಜನೆಗೆ ಚಾಲನೆ ನೀಡಿ ಉದಾಹರಣೆಗಳು ಇದ್ದು, ಸುಮಾರು 50 ಸಾವಿರ ಕೋಟಿ ರೂಪಾಯಿಯಷ್ಟು ಯೋಜನೆ ಕೊಟಿದ್ದು ದೇಶದಲ್ಲೇ ಮೊದಲು, ಇದು ಸಿದ್ದರಯ್ಯನವರ ಸರಕಾರದಲ್ಲಿ ಆಗಿದ್ದು ಎಂದು ಹೇಳಿದರು.
ಉತ್ತರ ಭಾಗದ ಅಭಿವೃದ್ಧಿಗೆ ಕೇಳಿದ ಯೋಜನೆ ನೀಡಿದ್ದಾರೆ ಎಂದು ಹೇಳಿದರು. ನಾವು ಕೊಟ್ಟ ಭರವಸೆಗಳನ್ನು 100 ದಿನಗಳಲ್ಲಿ ನಮ್ಮ ಸರಕಾರ ಈಡೇರಿಸಿದೆ. ನಮ್ಮ ಸರಕಾರದ ಉತ್ತಮ ಆಡಳಿತ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯುತ್ತಿದೆ ಎಂದು ತಿಳಿಸಿದರು. ಇನ್ನು ಲೋಕಸಭಾ ಚುನಾವಣೆಯಲ್ಲಿ ತಮ್ಮ ಸ್ಥಾನಕ್ಕೆ ಯಾರು ಅಭ್ಯರ್ಥಿ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು ಹೈಕಮಾಂಡ್ ಯಾರಿಗೆ ಟಿಕೆಟ್ ನೀಡುತ್ತದೆ ಅವರು ಕೆಲಸ ಮಾಡ್ತಾರೆ ಎಂದು ತಿಳಿಸಿದರು.
ಇತ್ತ ಕಾವೇರಿ ನದಿ ನೀರು ಹಂಚಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವರು ಕಾವೇರಿ ನೀರು ವಿಚಾರವಾಗಿ ನಮ್ಮ ಜವಾಬ್ದಾರಿ ಬದ್ಧತೆ ಸ್ಪಷ್ಟವಾಗಿದೆ ರಾಜ್ಯದಲ್ಲಿ ಮಳೆ ಕಡಿಮೆ ಆದ್ದರಿಂದ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಕಾವೇರಿ ನದಿ ತುಂಬಿ ಹರಿಯಬೇಕಿತ್ತು, ಮಳೆ ಬಾರದ ಹಿನ್ನೆಲೆಯಲ್ಲಿ ಈ ಪರಿಸ್ಥಿತಿ ಉಂಟಾಗಿದೆ ನೆನ್ನೆಯಿಂದ ರಾಜ್ಯದಲ್ಲಿ ಮಳೆ ಆಗ್ತಾ ಇದ್ದು ಮುಂದೆ ಈ ಸಮಸ್ಯೆ ಬಗೆಯುವ ವಾತಾವರಣವಿದೆ ಎಂದು ಸಚಿವರು ಉತ್ತರಿಸಿದರು.
ನಮ್ಮ ಶಾಸಕರೆಲ್ಲರು ಒಗ್ಗಟ್ಟಾಗಿದ್ದಾರೆ, ನಮ್ಮಲ್ಲಿ ಯಾವುದೇ ಸಮಸ್ಯೆ ಇಲ್ಲ, ಅವರ ಪಕ್ಷದವರು ಬೇರೆ ಪಕ್ಷಕ್ಕೆ ಹೋಗದಂತೆ ಬಂದೋಬಸ್ತ್ ಮಾಡುವುದಕ್ಕೆ ಈ ತಂತ್ರ ಮಾಡುತ್ತಿದ್ದಾರೆ. ಮಾಧ್ಯಮಗಳನ್ನು ಸಮಾಧಾನ ಮಾಡಲು ಈ ತಂತ್ರ ರೂಪಿಸಿದ್ದಾರೆ ಎಂದು ತಿಳಿಸಿದರು. ಬಿಜೆಪಿ ಯಾವ ಶಾಸಕರೂ ನನ್ನ ಸಂಪರ್ಕದಲ್ಲಿ ಇಲ್ಲ, ಕಾಂಗ್ರೆಸ್ ಪಕ್ಷ ಒಂದು ಸಮುದ್ರ ಇದ್ದಂತೆ. ಯಾರು ಬೇಕಾದರೂ ಪಕ್ಷಕ್ಕೆ ಬರಬಹುದು, ನಾವು ಸ್ವಾಗತ ಮಾಡುತ್ತೇವೆ ಎಂದರು.
ಚಿತ್ರದುರ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಮೇಲೆ ಚಾರ್ಜ್ ಶೀಟ್ ಹಾಕೋಕೆ ಬಿಜೆಪಿಯವರಿಗೇನು ಅಧಿಕಾರ ಇದೆ ಎಂದು ಪ್ರಶ್ನೆ ಮಾಡಿದ್ದಾರೆ. ನಮಗೆ ಅಭಿವೃದ್ಧಿ ಮಾಡೋದೂ ಗೊತ್ತಿದೆ. ಹಿಂದೆ ಮುಖ್ಯಮಂತ್ರಿಗಳು ಅಭಿವೃದ್ಧಿ ಮಾಡಿದ ಗುರುತುಗಳಿವೆ. ಎತ್ತಿನ ಹೊಳೆ, ಕೆ.ಸಿ ವ್ಯಾಲಿ, ಕೆಎನ್ ವ್ಯಾಲಿ ಸೇರಿ ಭದ್ರಾ ಮೇಲ್ದಂಡೆ ಯೋಜನೆಗೆ ಚಾಲನೆ ನೀಡಿ ಉದಾಹರಣೆಗಳು ಇದ್ದು, ಸುಮಾರು 50 ಸಾವಿರ ಕೋಟಿ ರೂಪಾಯಿಯಷ್ಟು ಯೋಜನೆ ಕೊಟಿದ್ದು ದೇಶದಲ್ಲೇ ಮೊದಲು, ಇದು ಸಿದ್ದರಯ್ಯನವರ ಸರಕಾರದಲ್ಲಿ ಆಗಿದ್ದು ಎಂದು ಹೇಳಿದರು.
ಉತ್ತರ ಭಾಗದ ಅಭಿವೃದ್ಧಿಗೆ ಕೇಳಿದ ಯೋಜನೆ ನೀಡಿದ್ದಾರೆ ಎಂದು ಹೇಳಿದರು. ನಾವು ಕೊಟ್ಟ ಭರವಸೆಗಳನ್ನು 100 ದಿನಗಳಲ್ಲಿ ನಮ್ಮ ಸರಕಾರ ಈಡೇರಿಸಿದೆ. ನಮ್ಮ ಸರಕಾರದ ಉತ್ತಮ ಆಡಳಿತ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆಯುತ್ತಿದೆ ಎಂದು ತಿಳಿಸಿದರು. ಇನ್ನು ಲೋಕಸಭಾ ಚುನಾವಣೆಯಲ್ಲಿ ತಮ್ಮ ಸ್ಥಾನಕ್ಕೆ ಯಾರು ಅಭ್ಯರ್ಥಿ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು ಹೈಕಮಾಂಡ್ ಯಾರಿಗೆ ಟಿಕೆಟ್ ನೀಡುತ್ತದೆ ಅವರು ಕೆಲಸ ಮಾಡ್ತಾರೆ ಎಂದು ತಿಳಿಸಿದರು.
ಇತ್ತ ಕಾವೇರಿ ನದಿ ನೀರು ಹಂಚಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವರು ಕಾವೇರಿ ನೀರು ವಿಚಾರವಾಗಿ ನಮ್ಮ ಜವಾಬ್ದಾರಿ ಬದ್ಧತೆ ಸ್ಪಷ್ಟವಾಗಿದೆ ರಾಜ್ಯದಲ್ಲಿ ಮಳೆ ಕಡಿಮೆ ಆದ್ದರಿಂದ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಕಾವೇರಿ ನದಿ ತುಂಬಿ ಹರಿಯಬೇಕಿತ್ತು, ಮಳೆ ಬಾರದ ಹಿನ್ನೆಲೆಯಲ್ಲಿ ಈ ಪರಿಸ್ಥಿತಿ ಉಂಟಾಗಿದೆ ನೆನ್ನೆಯಿಂದ ರಾಜ್ಯದಲ್ಲಿ ಮಳೆ ಆಗ್ತಾ ಇದ್ದು ಮುಂದೆ ಈ ಸಮಸ್ಯೆ ಬಗೆಯುವ ವಾತಾವರಣವಿದೆ ಎಂದು ಸಚಿವರು ಉತ್ತರಿಸಿದರು.