ಜೂನ್ನಲ್ಲಿ ಗ್ಯಾರಂಟಿಗಳು ಜಾರಿಯಾಗ್ತವೆ, ಬಿಜೆಪಿ-ಜೆಡಿಎಸ್ಗೆ ತಾಳ್ಮೆಯಿರಲಿ: ಶಿವರಾಜ್ ತಂಗಡಗಿ
1057 views
ಚಿತ್ರದುರ್ಗ ವಿಡಿಯೋಗಳಿಗೆ ಚಂದಾದಾರರಾಗಿಚಿತ್ರದುರ್ಗ: ಶ್ರೀಮಂತರಿಗೆ ಸರ್ಕಾರದ ಯೋಜನೆಗಳು ಇಲ್ಲ ಬಡವರಿಗೆ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಕೊಡಲಾಗುತ್ತದೆ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದರು. ಚಿತ್ರದುರ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಘೋಷಿಸಿರುವ ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿ ನಾಯಕರಿಗೆ ಟೆನ್ಶನ್ ತಗೊಂಡಿದ್ದಾರೆ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದರು.
ನಮ್ಮ ಸರ್ಕಾರ ಬಂದು 15 ದಿನ ಆಗಿಲ್ಲ, ಇತ್ತ ಬಿಜೆಪಿ ಮತ್ತು ಜೆಡಿಎಸ್ನವರು ಸರ್ಕಾರದ ವಿರುದ್ದ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಸರ್ಕಾರ ಬಂದ ತಕ್ಷಣವೇ ಅಂದರೆ, ಜೂನ್ 1ನೇ ತಾರೀಕಿಗೆ ಅಂತ ಹೇಳಿದ್ದೇವೆ. ಆ ಹೇಳಿದ ದಿನಾಂಕ ಬರುವವರೆಗೂ ಬಿಜೆಪಿ ಪಕ್ಷಕ್ಕೆ ತಡೆದುಕೊಳ್ಳುವ ಶಕ್ತಿ ಇಲ್ಲ ಎಂದರು. ನಮ್ಮ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರು ಜೂನ್ 1ರ ಬಳಿಕ ಗ್ಯಾರಂಟಿ ಯೋಜನೆ ಮಾಡುತ್ತೇವೆ ಎಂದು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಇದರ ಜೊತೆಗೆ ನಮ್ಮ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಸೋನಿಯಾ ಗಾಂಧಿ ಕೂಡಾ ಮೊದಲ ಆದ್ಯತೆ ನೀಡಿ ಜನರಿಗೆ ಯೋಜನೆಗಳನ್ನು ತಲುಪಿಸಲಾಗುತ್ತದೆ ಎಂದಿದ್ದಾರೆ. ಆದರೆ ಯಾಕೆ ಬಿಜೆಪಿ ನಾಯಕರು ಇಷ್ಟು ಟೆನ್ಷನ್ ಆಗಿದ್ದಾರೆ ಗೊತ್ತಿಲ್ಲ ಎಂದು ಶಿವರಾಜ್ ತಂಗಡಗಿ ಪ್ರತಿಕ್ರಿಯಿಸಿದರು.
ನಮ್ಮ ಸರ್ಕಾರ ಬಂದು 15 ದಿನ ಆಗಿಲ್ಲ, ಇತ್ತ ಬಿಜೆಪಿ ಮತ್ತು ಜೆಡಿಎಸ್ನವರು ಸರ್ಕಾರದ ವಿರುದ್ದ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಸರ್ಕಾರ ಬಂದ ತಕ್ಷಣವೇ ಅಂದರೆ, ಜೂನ್ 1ನೇ ತಾರೀಕಿಗೆ ಅಂತ ಹೇಳಿದ್ದೇವೆ. ಆ ಹೇಳಿದ ದಿನಾಂಕ ಬರುವವರೆಗೂ ಬಿಜೆಪಿ ಪಕ್ಷಕ್ಕೆ ತಡೆದುಕೊಳ್ಳುವ ಶಕ್ತಿ ಇಲ್ಲ ಎಂದರು. ನಮ್ಮ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರು ಜೂನ್ 1ರ ಬಳಿಕ ಗ್ಯಾರಂಟಿ ಯೋಜನೆ ಮಾಡುತ್ತೇವೆ ಎಂದು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಇದರ ಜೊತೆಗೆ ನಮ್ಮ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಸೋನಿಯಾ ಗಾಂಧಿ ಕೂಡಾ ಮೊದಲ ಆದ್ಯತೆ ನೀಡಿ ಜನರಿಗೆ ಯೋಜನೆಗಳನ್ನು ತಲುಪಿಸಲಾಗುತ್ತದೆ ಎಂದಿದ್ದಾರೆ. ಆದರೆ ಯಾಕೆ ಬಿಜೆಪಿ ನಾಯಕರು ಇಷ್ಟು ಟೆನ್ಷನ್ ಆಗಿದ್ದಾರೆ ಗೊತ್ತಿಲ್ಲ ಎಂದು ಶಿವರಾಜ್ ತಂಗಡಗಿ ಪ್ರತಿಕ್ರಿಯಿಸಿದರು.