ಚಿತ್ರದುರ್ಗ: 3 ವಿಶೇಷ ತಳಿಗಳ ಸೀತಾಫಲ ಬೆಳೆ, ಏಳು ದಿನ ಕೆಡುವುದಿಲ್ಲ ಈ ಹಣ್ಣು!
1141 views
ಚಿತ್ರದುರ್ಗ ವಿಡಿಯೋಗಳಿಗೆ ಚಂದಾದಾರರಾಗಿಚಿತ್ರದುರ್ಗ: ಇಲ್ಲೊಂದು ರೈತ ಕುಟುಂಬ ಐಐಎಚ್ಆರ್ ವಿಜ್ಞಾನಿಗಳು ಅಭಿವೃದ್ಧಿಪಡಿಸಿರುವ ವಿಶೇಷ 'ಸೀತಾಫಲ' ತಳಿ ಬೆಳೆದು ವಾಣಿಜ್ಯ ಬೆಳೆಯನ್ನಾಗಿ ಬೆಳೆಯುವ ಮೂಲಕ ಹೆಚ್ಚು ಆದಾಯ ಗಳಿಸುತ್ತಿದ್ದಾರೆ.
ಚಿತ್ರದುರ್ಗ ತಾಲೂಕಿನ ಹಳವುದರ ಗ್ರಾಮದ ಟಿ.ನಿಂಗಾನಾಯ್ಕ ಹಾಗೂ ಮಂಜುಳಾಬಾಯಿ ದಂಪತಿ ನೈಸರ್ಗಿಕ ವಿಧಾನದಲ್ಲಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಕೃಷಿ, ತೋಟಗಾರಿಕೆಯಲ್ಲಿ ಹಲವು ಪ್ರಯೋಗಗಳನ್ನು ನಡೆಸಿ ಯಶಸ್ವಿಯಾಗಿದ್ದಾರೆ. ತಮ್ಮ 3.50 ಎಕರೆಯಲ್ಲಿ 3 ವಿಶೇಷ ತಳಿಗಳ ಸುಮಾರು 750 ಸೀತಾಫಲ ಗಿಡಗಳನ್ನು ನಾಟಿ ಮಾಡಿದ್ದು ಉತ್ತಮ ಇಳುವರಿ ಪಡೆದುಕೊಂಡಿದ್ದಾರೆ.
ಬೆಟ್ಟ ಗುಡ್ಡಗಳಲ್ಲಿ ಯಾವುದೇ ನಿರ್ವಹಣೆ ಇಲ್ಲದೆ ಸಹಜವಾಗಿ ಬೆಳೆಯುವ ಬೆಳೆ ಎಂದರೆ ಸೀತಾಫಲ. ಈ ಜಿಲ್ಲೆಯ ಹವಾಗುಣಕ್ಕೆ ಹೊಂದಿಕೊಂಡಿರುವ ಸೀತಾಫಲ ಮೊಳಕಾಲ್ಮೂರು ಭಾಗದಲ್ಲಿ ಹೆಚ್ಚಾಗಿ ಲಭಿಸುತ್ತದೆ. ಐಐಎಚ್ಆರ್ ವಿಜ್ಞಾನಿಗಳು ಅಭಿವದ್ಧಿಪಡಿಸಿರುವ ವಿಶೇಷ ತಳಿಯ ಅರ್ಕ ಸಹನದಲ್ಲಿ ಕಡಿಮೆ ಹಾಗೂ ಚಿಕ್ಕ ಬೀಜಗಳಿದ್ದು, ತಿರುಳು ಜಾಸ್ತಿಯಿರುವ ಮತ್ತು ಗಾತ್ರದಲ್ಲಿ ದೊಡ್ಡದಿರುವ ಕಾರಣ ಹೆಚ್ಚು ಬೇಡಿಕೆಯಿದೆ. ಅಷ್ಟೇ ಅಲ್ಲದೇ ಸಾಮಾನ್ಯ ತಳಿಯ ಸೀತಾಫಲ ಹಣ್ಣಾದ ಮೇಲೆ 3-4 ದಿನಗಳಿಗಿಂತ ಹೆಚ್ಚು ಕಾಲ ಉಳಿಯುವುದಿಲ್ಲ, ಆದರೆ ಅರ್ಕ ಸಹನ ಹಣ್ಣು 7 ರಿಂದ 8 ದಿನಗಳ ಕಾಲ ಕೆಡದೆ ಇದರ ವಿಶೇಷ ಗುಣ. ನಮ್ಮ ಮೂರುವರೆ ಎಕರೆಯಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿ ಪದ್ಧತಿ ಹಾಗೂ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಸಹಾಯಧನ ಪಡೆದು ಪ್ಯಾಕ್ ಹೌಸ್ ಮಾಡಿಕೊಂಡಿದ್ದು ಇದಕ್ಕೆ ಮಳೆ ನೀರು ಕೊಯ್ಲು ವಿಧಾನ ಅಳವಡಿಸಿದ್ದೇವೆ.
ಚಿತ್ರದುರ್ಗ ತಾಲೂಕಿನ ಹಳವುದರ ಗ್ರಾಮದ ಟಿ.ನಿಂಗಾನಾಯ್ಕ ಹಾಗೂ ಮಂಜುಳಾಬಾಯಿ ದಂಪತಿ ನೈಸರ್ಗಿಕ ವಿಧಾನದಲ್ಲಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಕೃಷಿ, ತೋಟಗಾರಿಕೆಯಲ್ಲಿ ಹಲವು ಪ್ರಯೋಗಗಳನ್ನು ನಡೆಸಿ ಯಶಸ್ವಿಯಾಗಿದ್ದಾರೆ. ತಮ್ಮ 3.50 ಎಕರೆಯಲ್ಲಿ 3 ವಿಶೇಷ ತಳಿಗಳ ಸುಮಾರು 750 ಸೀತಾಫಲ ಗಿಡಗಳನ್ನು ನಾಟಿ ಮಾಡಿದ್ದು ಉತ್ತಮ ಇಳುವರಿ ಪಡೆದುಕೊಂಡಿದ್ದಾರೆ.
ಬೆಟ್ಟ ಗುಡ್ಡಗಳಲ್ಲಿ ಯಾವುದೇ ನಿರ್ವಹಣೆ ಇಲ್ಲದೆ ಸಹಜವಾಗಿ ಬೆಳೆಯುವ ಬೆಳೆ ಎಂದರೆ ಸೀತಾಫಲ. ಈ ಜಿಲ್ಲೆಯ ಹವಾಗುಣಕ್ಕೆ ಹೊಂದಿಕೊಂಡಿರುವ ಸೀತಾಫಲ ಮೊಳಕಾಲ್ಮೂರು ಭಾಗದಲ್ಲಿ ಹೆಚ್ಚಾಗಿ ಲಭಿಸುತ್ತದೆ. ಐಐಎಚ್ಆರ್ ವಿಜ್ಞಾನಿಗಳು ಅಭಿವದ್ಧಿಪಡಿಸಿರುವ ವಿಶೇಷ ತಳಿಯ ಅರ್ಕ ಸಹನದಲ್ಲಿ ಕಡಿಮೆ ಹಾಗೂ ಚಿಕ್ಕ ಬೀಜಗಳಿದ್ದು, ತಿರುಳು ಜಾಸ್ತಿಯಿರುವ ಮತ್ತು ಗಾತ್ರದಲ್ಲಿ ದೊಡ್ಡದಿರುವ ಕಾರಣ ಹೆಚ್ಚು ಬೇಡಿಕೆಯಿದೆ. ಅಷ್ಟೇ ಅಲ್ಲದೇ ಸಾಮಾನ್ಯ ತಳಿಯ ಸೀತಾಫಲ ಹಣ್ಣಾದ ಮೇಲೆ 3-4 ದಿನಗಳಿಗಿಂತ ಹೆಚ್ಚು ಕಾಲ ಉಳಿಯುವುದಿಲ್ಲ, ಆದರೆ ಅರ್ಕ ಸಹನ ಹಣ್ಣು 7 ರಿಂದ 8 ದಿನಗಳ ಕಾಲ ಕೆಡದೆ ಇದರ ವಿಶೇಷ ಗುಣ. ನಮ್ಮ ಮೂರುವರೆ ಎಕರೆಯಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿ ಪದ್ಧತಿ ಹಾಗೂ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಸಹಾಯಧನ ಪಡೆದು ಪ್ಯಾಕ್ ಹೌಸ್ ಮಾಡಿಕೊಂಡಿದ್ದು ಇದಕ್ಕೆ ಮಳೆ ನೀರು ಕೊಯ್ಲು ವಿಧಾನ ಅಳವಡಿಸಿದ್ದೇವೆ.