Ramya: ದಾವಣಗೆರೆ ಬೆಣ್ಣೆ ದೋಸೆಗೆ ರಮ್ಯಾ ಫಿದಾ! ದೋಸೆ ತಿಂದ ಬಳಿಕ ಸ್ಯಾಂಡಲ್ವುಡ್ ಕ್ವೀನ್ ಹೇಳಿದ್ದೇನು?
ದಾವಣಗೆರೆ ವಿಡಿಯೋಗಳಿಗೆ ಚಂದಾದಾರರಾಗಿ
ದಾವಣಗೆರೆ: ಇದು ನಮ್ಮ ಊಟ, ನಮ್ಮ ಕಲ್ಚರ್ ಎಷ್ಟು ಬೆಳೆಸಿದರೆ, ಅಷ್ಟು ಒಳ್ಳೆಯದು. ಇಲ್ಲಿಗೆ ಬಂದು ಬೆಣ್ಣೆ ದೋಸೆ ತಿಂದಿದ್ದಕ್ಕೆ ತುಂಬಾ ತೃಪ್ತಿಯಾಯ್ತು ಎಂದು ನಟಿ ರಮ್ಯಾ ಹೇಳಿದ್ದಾರೆ. ದಾವಣಗೆರೆಯ ಗುರು ಕೊಟ್ಟುರೇಶ್ವರ ಹೋಟೆಲ್ನಲ್ಲಿ ಬೆಣ್ಣೆ ದೋಸೆ ತಿಂದ ಬಳಿಕ ಮಾತನಾಡಿದ ಅವರು, ಬೆಣ್ಣೆ ದೋಸೆ ತುಂಬಾ ಟೇಸ್ಟಿಯಾಗಿತ್ತು. ಪಾರ್ಸಲ್ ತಿಂದ್ರೆ ಅಷ್ಟು ಚೆನ್ನಾಗಿರೋಲ್ಲ. ಸೋ ಅದಕ್ಕೆ ಹೋಟೆಲ್ಗೆ ಬಂದು ಒಂದು ಬೆಣ್ಣೆ ದೋಸೆ ಒಂದು ಖಾಲಿ ದೋಸೆ ತಿಂದೆ ಎಂದರು.
ತುಂಬಾ ಚೆನ್ನಾಗಿದೆ. ದಾವಣಗೆರೆ ಜನತೆಗೆ ಥ್ಯಾಂಕ್ಸ್ ಹೇಳಬೇಕು. ಅವರು ಹೇಳಿದ್ದಕ್ಕೆ ಇಲ್ಲಿಗೆ ಬಂದು ತಿಂದೆ. ಜನರೇ ಈ ಹೋಟೆಲ್ ಅನ್ನು ಸಜೆಸ್ಟ್ ಮಾಡಿದ್ದರು. ಅದಕ್ಕೆ ಗುರು ಕೊಟ್ಟೂರೇಶ್ವರ ಹೋಟೆಲ್ಗೆ ಬಂದು ಬೆಣ್ಣೆ ದೋಸೆ ತಿಂದೆ. ನಮ್ಮ ಊಟ ನಮ್ಮ ಕಲ್ಚರ್ ಎಷ್ಟು ಬೆಳೆಸಿದ್ರು ಅಷ್ಟೇ ಒಳ್ಳೆಯದು ಎಂದು ರಮ್ಯಾ ಹೇಳಿದ್ರು.
ತುಂಬಾ ಚೆನ್ನಾಗಿದೆ. ದಾವಣಗೆರೆ ಜನತೆಗೆ ಥ್ಯಾಂಕ್ಸ್ ಹೇಳಬೇಕು. ಅವರು ಹೇಳಿದ್ದಕ್ಕೆ ಇಲ್ಲಿಗೆ ಬಂದು ತಿಂದೆ. ಜನರೇ ಈ ಹೋಟೆಲ್ ಅನ್ನು ಸಜೆಸ್ಟ್ ಮಾಡಿದ್ದರು. ಅದಕ್ಕೆ ಗುರು ಕೊಟ್ಟೂರೇಶ್ವರ ಹೋಟೆಲ್ಗೆ ಬಂದು ಬೆಣ್ಣೆ ದೋಸೆ ತಿಂದೆ. ನಮ್ಮ ಊಟ ನಮ್ಮ ಕಲ್ಚರ್ ಎಷ್ಟು ಬೆಳೆಸಿದ್ರು ಅಷ್ಟೇ ಒಳ್ಳೆಯದು ಎಂದು ರಮ್ಯಾ ಹೇಳಿದ್ರು.