ಇವರಿಗೆ ಯಾವಾಗಲೂ ಅಧಿಕಾರದಲ್ಲಿರಬೇಕು ಆಗ ಎಲ್ಲವೂ ಚೆನ್ನಾಗಿರುತ್ತೆ : ಎಸ್ಟಿ ಸೋಮಶೇಖರ್ಗೆ ಸಿಟಿರವಿ ತಿರುಗೇಟು
ದಾವಣಗೆರೆ ವಿಡಿಯೋಗಳಿಗೆ ಚಂದಾದಾರರಾಗಿ
ದಾವಣಗೆರೆ : ಅಧಿಕಾರ ಇಲ್ಲವೆಂದರೆ ಕೆಲವರಿಗೆ ಉಸಿರು ಕಟ್ಟುತ್ತೆ, ಎಸಿ ರೂಮ್ನಲ್ಲಿದ್ದರೆ ವಾತಾವರಣ ಚೆನ್ನಾಗಿರುತ್ತದೆ ಎಂದು ಮಾಜಿ ಶಾಸಕ ಸಿಟಿ ರವಿ ಹೇಳಿದ್ದಾರೆ. ಈ ಮೂಲಕ ಬಿಜೆಪಿಯಲ್ಲಿ ಉಸಿರುಗಟ್ಟಿಸುವ ವಾತಾವರಣವಿದೆ ಎಂಬ ಮಾಜಿ ಸಚಿವ ಎಸ್ಟಿ ಸೋಮಶೇಖರ್ ಹೇಳಿಕೆಗೆ ಸಿಟಿ ರವಿ ತಿರುಗೇಟು ನೀಡಿದರು.
ದಾವಣಗೆರೆಯಲ್ಲಿ ಮಾತನಾಡಿದ ಅವರು, ಇವರಿಗೆ ಯಾವಾಗಲೂ ಅಧಿಕಾರದಲ್ಲಿರಬೇಕು ಆಗ ಎಲ್ಲವೂ ಚೆನ್ನಾಗಿರುತ್ತದೆ ಎಂದರು. ಇದರ ಜೊತೆ ರಾಜ್ಯಾಧ್ಯಕ್ಷರ ಸ್ಥಾನದ ಬಗ್ಗೆ ನಾನು ಹೇಳಿದರೆ ಸರಿಯಲ್ಲ, ನಾನು ಹೇಳಲುಬಾರದು ಎಂದು ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ವಿಚಾರಕ್ಕೆ ಪ್ರತಿಕ್ರಿಯಿಸಿದರು.
ಬಿಜೆಪಿ ನಕಲಿ ಹಿಂದೂಗಳು ಎಂಬ ಹೇಳಿಕೆಗೆ ಸಿಟಿ ರವಿ ಕಿಡಿಕಾರಿದ್ದು, ಹೌದು, ನಾವು ನಕಲಿ ಹಿಂದೂಗಳು ಅದಕ್ಕೆ ತಿಲಕ ಇಟ್ಟುಕೊಳ್ಳುತ್ತೇವೆ. ಕೇಸರಿ ಪೇಟ ತೊಟ್ಟುಕೊಳ್ಳುತ್ತೇವೆ. ಅಸಲಿ ಹಿಂದೂಗಳು ತಿಲಕ ಮತ್ತು ಪೇಟ ಧರಿಸಲು ಹಿಂಜರಿಯುತ್ತಾರೆ. ಟೋಪಿಯಾದರೆ ಇಷ್ಟಪಟ್ಟು ಹಾಕಿಕೊಳ್ಳುತ್ತಾರೆ. ಕೇಸರಿ ಅಂದ್ರೆ ಇವರಿಗೆ ಆಗಲ್ಲ ಎಂದರು.
ಶಿವಮೊಗ್ಗದ ರಾಗಿಗುಡ್ಡ ಘಟನೆ ಬಿಜೆಪಿ ಕೃತ್ಯ ಎಂಬ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆಗೆ ಕಿಡಿಕಾರಿದ ಸಿಟಿ ರವಿ, ತಲೆಕೆಟ್ಟವರು ಕೂಡ ಹೀಗೆ ಮಾತಾಡಲ್ಲ, ಅವರು ಹಿರಿಯರು ತಲೆಕಟ್ಟವರಂತೆ ಮಾತಾಡಬಾರದು. ರಾಗಿಗುಡ್ಡ ಘಟನೆಯಲ್ಲಿ ಸರ್ಕಾರ ಮಾರ್ಜಾಲ ನ್ಯಾಯ ರೀತಿ ವರ್ತನೆ ಮಾಡುತ್ತಿದೆ. ಬೆಕ್ಕಿಗೆ ಪಂಚಾಯತಿ ಒಪ್ಪಿಸಿದ್ರೆ ಏನು ಮಾಡಿತ್ತೊ ಅದೇ ರೀತಿ ಮಾಡುತ್ತಿದೆ ಎಂದು ಕಿಡಿಕಾರಿದರು.
ಮತಾಂಧರಂತೆ ವರ್ತನೆ ಮಾಡುವವರ ಮೇಲೆ ಕ್ರಮ ಕೈಗೊಳ್ಳಬೇಕಿತ್ತು. ದೌರ್ಜನ್ಯಕ್ಕೊಳಗಾದವರ ಮೇಲೆ ಕೇಸ್ ಹಾಕಿದೆ. ಈ ಮೂಲಕ ಇಬ್ಬರ ಮೇಲು ಕೇಸ್ ಹಾಕಿದ್ದೇವೆ ಎನ್ನುತ್ತಿದೆ. ಇದರಿಂದ ಮತಾಂಧತೆಗೆ ಕಾಂಗ್ರೆಸ್ ಕುಮ್ಮಕ್ಕು ನೀಡುತ್ತಿದೆ. ಔರಂಗಜೇಬ್ ಮತ್ತು ಟಿಪ್ಪು ಪೋಟೋ ಹಾಕಿ ವೈಭವೀಕರಣ ಮಾಡಲಾಗಿದೆ. ಇದೇ ಗಲಭೆಗೆ ಕಾರಣವಾಗಿದೆ ಎಂದರು.
ದಾವಣಗೆರೆಯಲ್ಲಿ ಮಾತನಾಡಿದ ಅವರು, ಇವರಿಗೆ ಯಾವಾಗಲೂ ಅಧಿಕಾರದಲ್ಲಿರಬೇಕು ಆಗ ಎಲ್ಲವೂ ಚೆನ್ನಾಗಿರುತ್ತದೆ ಎಂದರು. ಇದರ ಜೊತೆ ರಾಜ್ಯಾಧ್ಯಕ್ಷರ ಸ್ಥಾನದ ಬಗ್ಗೆ ನಾನು ಹೇಳಿದರೆ ಸರಿಯಲ್ಲ, ನಾನು ಹೇಳಲುಬಾರದು ಎಂದು ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ವಿಚಾರಕ್ಕೆ ಪ್ರತಿಕ್ರಿಯಿಸಿದರು.
ಬಿಜೆಪಿ ನಕಲಿ ಹಿಂದೂಗಳು ಎಂಬ ಹೇಳಿಕೆಗೆ ಸಿಟಿ ರವಿ ಕಿಡಿಕಾರಿದ್ದು, ಹೌದು, ನಾವು ನಕಲಿ ಹಿಂದೂಗಳು ಅದಕ್ಕೆ ತಿಲಕ ಇಟ್ಟುಕೊಳ್ಳುತ್ತೇವೆ. ಕೇಸರಿ ಪೇಟ ತೊಟ್ಟುಕೊಳ್ಳುತ್ತೇವೆ. ಅಸಲಿ ಹಿಂದೂಗಳು ತಿಲಕ ಮತ್ತು ಪೇಟ ಧರಿಸಲು ಹಿಂಜರಿಯುತ್ತಾರೆ. ಟೋಪಿಯಾದರೆ ಇಷ್ಟಪಟ್ಟು ಹಾಕಿಕೊಳ್ಳುತ್ತಾರೆ. ಕೇಸರಿ ಅಂದ್ರೆ ಇವರಿಗೆ ಆಗಲ್ಲ ಎಂದರು.
ಶಿವಮೊಗ್ಗದ ರಾಗಿಗುಡ್ಡ ಘಟನೆ ಬಿಜೆಪಿ ಕೃತ್ಯ ಎಂಬ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿಕೆಗೆ ಕಿಡಿಕಾರಿದ ಸಿಟಿ ರವಿ, ತಲೆಕೆಟ್ಟವರು ಕೂಡ ಹೀಗೆ ಮಾತಾಡಲ್ಲ, ಅವರು ಹಿರಿಯರು ತಲೆಕಟ್ಟವರಂತೆ ಮಾತಾಡಬಾರದು. ರಾಗಿಗುಡ್ಡ ಘಟನೆಯಲ್ಲಿ ಸರ್ಕಾರ ಮಾರ್ಜಾಲ ನ್ಯಾಯ ರೀತಿ ವರ್ತನೆ ಮಾಡುತ್ತಿದೆ. ಬೆಕ್ಕಿಗೆ ಪಂಚಾಯತಿ ಒಪ್ಪಿಸಿದ್ರೆ ಏನು ಮಾಡಿತ್ತೊ ಅದೇ ರೀತಿ ಮಾಡುತ್ತಿದೆ ಎಂದು ಕಿಡಿಕಾರಿದರು.
ಮತಾಂಧರಂತೆ ವರ್ತನೆ ಮಾಡುವವರ ಮೇಲೆ ಕ್ರಮ ಕೈಗೊಳ್ಳಬೇಕಿತ್ತು. ದೌರ್ಜನ್ಯಕ್ಕೊಳಗಾದವರ ಮೇಲೆ ಕೇಸ್ ಹಾಕಿದೆ. ಈ ಮೂಲಕ ಇಬ್ಬರ ಮೇಲು ಕೇಸ್ ಹಾಕಿದ್ದೇವೆ ಎನ್ನುತ್ತಿದೆ. ಇದರಿಂದ ಮತಾಂಧತೆಗೆ ಕಾಂಗ್ರೆಸ್ ಕುಮ್ಮಕ್ಕು ನೀಡುತ್ತಿದೆ. ಔರಂಗಜೇಬ್ ಮತ್ತು ಟಿಪ್ಪು ಪೋಟೋ ಹಾಕಿ ವೈಭವೀಕರಣ ಮಾಡಲಾಗಿದೆ. ಇದೇ ಗಲಭೆಗೆ ಕಾರಣವಾಗಿದೆ ಎಂದರು.