ಹಿಜಾಬ್ ನಿಷೇಧ ವಾಪಸ್ ಪಡೆದಿದ್ದೆ ಆದ್ರೆ, ಕೇಸರಿ ಟವೆಲ್ಗೆ ಕರೆ ಕೊಡುತ್ತೇವೆ: ರೇಣುಕಾಚಾರ್ಯ
1266 views
ದಾವಣಗೆರೆ ವಿಡಿಯೋಗಳಿಗೆ ಚಂದಾದಾರರಾಗಿದಾವಣಗೆರೆ: ಸಿಎಂ ಸಿದ್ದರಾಮಯ್ಯ ಹಿಜಾಬ್ ಆದೇಶ ವಾಪಸ್ ಪಡೆಯುತ್ತೇವೆ ಎಂದಿದ್ದಕ್ಕೆ ಮಾಜಿ ಶಾಸಕ ರೇಣುಕಾಚಾರ್ಯ ಕಿಡಿಕಾರಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವಿಲ್ಲ. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವುದು ಟಿಪ್ಪು ಸುಲ್ತಾನ್ ಸರ್ಕಾರ ಎಂದು ಟೀಕೆಯನ್ನ ಮಾಡಿದ್ದಾರೆ.
ಹಿಜಾಬ್ ವಾಪಸ್ ಪಡೆದಿದ್ದಕ್ಕೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ರೇಣುಕಾಚಾರ್ಯ, ಕಾನೂನು ತಿಳಿದವರಾಗಿರುವ ಸಿಎಂ ಸಿದ್ದರಾಮಯ್ಯ ಹಿಜಾಬ್ ಆದೇಶ ವಾಪಸ್ ಪಡೆದಿದ್ದಾರೆ. ಇದು ಒಂದು ಕೋಮಿನ ಜನರನ್ನಓಲೈಕೆ ಮಾಡಲು ಈ ಆದೇಶ ಮಾಡಿದ್ಧಾರೆ ಎಂದು ಸಿಎಂ ನಡೆಯನ್ನ ಖಂಡಿಸಿದ್ದಾರೆ. ಊಟ ಮತ್ತು ಬಟ್ಟೆ ನಮ್ಮ ಹಕ್ಕು ಎಂದು ಸಿಎಂ ಹೇಳುತ್ತಾರೆ. ಪಂಚೆ, ಚಡ್ಡಿ, ಟವೆಲ್ ಹಾಕುವುದು ಅವರವರ ಹಕ್ಕು. ಹಿಂದೆ ಉಡುಪಿ ಶಾಲೆಯಲ್ಲಿ ಹೊತ್ತಿದ ಕಿಡಿ ರಾಜ್ಯಾದ್ಯಂತ ಸದ್ದು ಮಾಡಿತ್ತು. ಆದ್ರೆ, ಶಾಲೆ ಕಾಲೇಜಿನಲ್ಲಿ ಹಿಂದೂ ಯುವಕರು ಕೇಸರಿ ಟವೆಲ್ ಹಾಕಿದ ನಂತರ ಗಲಾಟೆಗಳು ನಡೆದವು ಎಂದರು.
2022ರಲ್ಲಿ ನಮ್ಮ ಸರ್ಕಾರ ಕಡ್ಡಾಯ ಸಮವಸ್ತ್ರಕ್ಕೆ ಆದೇಶ ಮಾಡಿತ್ತು. ಇದನ್ನ ವಿರೋಧಿಸಿ ಕೆಲವು ಸಂಘಟನೆಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಹಿಜಾಬ್ ವಿಚಾರ ಇನ್ನು ಸುಪ್ರೀಂ ಕೋರ್ಟ್ ನಲ್ಲಿದೆ. ಸಿದ್ದರಾಮಯ್ಯನವರು ಕಾನೂನು ತಜ್ಞರಾಗಿ ಈ ಆದೇಶ ಮಾಡಿದ್ದಾರೆ. ವಿಷಯಾಂತರ ಮಾಡಲು ಈಗ ಹಿಜಾಬ್ ವಿಚಾರ ತಂದಿದ್ದಾರೆ. ಸಿದ್ದರಾಮಯ್ಯರದ್ದು ಒಂದು ವರ್ಗದ ಸರ್ಕಾರವಲ್ಲ. ನೀವು ಹಿಜಾಬ್ ಹಿಂಪಡೆದಿದ್ದೇ ಆದರೆ ನಮ್ಮವರು ಕೇಸರಿ ಟವೆಲ್ ಹಾಕಿಕೊಂಡು ಬರುತ್ತಾರೆ. ಇದು ಶತಃ ಸಿದ್ದ. ಇದರಲ್ಲಿ ತಪ್ಪೇನಿದೆ ಎಂದು ಹೇಳಿದರು.
ದುಷ್ಟ ಶಕ್ತಿಗಳು, ದೇಶ ದ್ರೋಹಿಗಳನ್ನ ನಾವು ಖಂಡಿಸುತ್ತೇವೆ. ಭಾರತ ಮಾತಾ ಕೀ ಜೈ ಎನ್ನುವವರನ್ನ ನಾವು ಸ್ವಾಗತ ಮಾಡುತ್ತೇವೆ. ನೀವು ಹಿಜಾಬ್ ಆದೇಶ ಹಿಂಪಡೆದರೆ ಎಲ್ಲವು ಕೇಸರಿಮಯ ಆಗತ್ತೆ. ಅದಕ್ಕೆ ನಾವು ಕರೆ ಕೊಡುತ್ತೇವೆ. ಇಲ್ಲಿ ಸಂಘರ್ಷ ಆದ್ರೆ ಸಂಘಟನೆಗಳು, ವಿದ್ಯಾರ್ಥಿಗಳು ಕಾರಣರಲ್ಲ. ಇದಕ್ಕೆ ನೇರವಾಗಿ ಮುಖ್ಯಮಂತ್ರಿಗಳೇ ಹೊಣೆಯಾಗುತ್ತಾರೆ. ಹಿಜಾಬ್ ವಾಪಸ್ ಪಡೆದದ್ದೆ ಆದ್ರೆ ಕೇಸರಿ ಟವೆಲ್ ಹಾಕೋಕೆ ಸರ್ಕಾರಿ ಆದೇಶ ಮಾಡಬೇಕು. ರಾಜ್ಯದಲ್ಲಿ ಸಂಘರ್ಷಗಳಾದರೆ ಸರ್ಕಾರದ ವೈಫಲ್ಯಗಳೇ ಕಾರಣ. ರಾಜ್ಯದಲ್ಲಿ ಬರ, ಪರಿಹಾರ ಹಣ ಬಿಡುಗಡೆ ಬಗ್ಗೆ ಸರ್ಕಾರ ಗಮನ ಹರಿಸುತ್ತಿಲ್ಲ. ವಿಷಯಾಂತರ ಮಾಡಲು ಹಿಜಾಬ್ ವಿವಾದ ಎಳೆದು ತಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಚಿವ ಜಮೀರ್ ಅಹ್ಮದ್ ಟೀಕೆ ಮಾಡಿರುವ ರೇಣುಕಾಚಾರ್ಯ, ಸಿಎಂ ಜಮೀರ್ನನ್ನ ಎಲ್ಲಿಯವರೆಗೆ ಹತ್ತಿರ ಇಟ್ಕೋಂಡಿರ್ತಾರೆ ಅಲ್ಲಿವರೆಗೂ ಸರ್ಕಾರಕ್ಕೆ ಕೆಟ್ಟ ಹೆಸರು. ಮುಂದೆ ಜಮೀರ್ ಅಹ್ಮದ್ ರಂತ ಮತಾಂಧರಿಂದ ಸರ್ಕಾರ ಪತನವಾಗಬಹುದು. ಸಿಎಂ ದೆಹಲಿಗೆ ಖಾಸಗಿ ಪ್ಲೈಟ್ ನಲ್ಲಿ ಹೋಗುತ್ತಾರೆ. ಖಾಸಗಿ ಪ್ಲೈಟ್ ನ್ನ ತುರ್ತು ಸಂದರ್ಭದಲ್ಲಿ ಮಾತ್ರ ಬಳಸಬೇಕು. ಇವರಿಗೆ ಬರಗಾಲಕ್ಕೆ ಕೊಡಲು ಹಣವಿಲ್ಲ, ಆದ್ರೆ ಮೋಜು ಮಸ್ತಿಗಿದೆ. ಜಮೀರ್ ಅಹ್ಮದ್ ಖಳನಟನಂತೆ ನಟಿಸಿ ವಿಡಿಯೋ ವೈರಲ್ ಮಾಡಿದ್ದಾರೆ. ಇದರಿಂದ ಜನ ರೊಚ್ಚಿಗೆದ್ದು ಜನರೇ ಸರ್ಕಾರ ತೆಗೆಯುತ್ತಾರೆ ಎಂದು ಹೇಳಿದರು.
ಹಿಜಾಬ್ ವಾಪಸ್ ಪಡೆದಿದ್ದಕ್ಕೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ರೇಣುಕಾಚಾರ್ಯ, ಕಾನೂನು ತಿಳಿದವರಾಗಿರುವ ಸಿಎಂ ಸಿದ್ದರಾಮಯ್ಯ ಹಿಜಾಬ್ ಆದೇಶ ವಾಪಸ್ ಪಡೆದಿದ್ದಾರೆ. ಇದು ಒಂದು ಕೋಮಿನ ಜನರನ್ನಓಲೈಕೆ ಮಾಡಲು ಈ ಆದೇಶ ಮಾಡಿದ್ಧಾರೆ ಎಂದು ಸಿಎಂ ನಡೆಯನ್ನ ಖಂಡಿಸಿದ್ದಾರೆ. ಊಟ ಮತ್ತು ಬಟ್ಟೆ ನಮ್ಮ ಹಕ್ಕು ಎಂದು ಸಿಎಂ ಹೇಳುತ್ತಾರೆ. ಪಂಚೆ, ಚಡ್ಡಿ, ಟವೆಲ್ ಹಾಕುವುದು ಅವರವರ ಹಕ್ಕು. ಹಿಂದೆ ಉಡುಪಿ ಶಾಲೆಯಲ್ಲಿ ಹೊತ್ತಿದ ಕಿಡಿ ರಾಜ್ಯಾದ್ಯಂತ ಸದ್ದು ಮಾಡಿತ್ತು. ಆದ್ರೆ, ಶಾಲೆ ಕಾಲೇಜಿನಲ್ಲಿ ಹಿಂದೂ ಯುವಕರು ಕೇಸರಿ ಟವೆಲ್ ಹಾಕಿದ ನಂತರ ಗಲಾಟೆಗಳು ನಡೆದವು ಎಂದರು.
2022ರಲ್ಲಿ ನಮ್ಮ ಸರ್ಕಾರ ಕಡ್ಡಾಯ ಸಮವಸ್ತ್ರಕ್ಕೆ ಆದೇಶ ಮಾಡಿತ್ತು. ಇದನ್ನ ವಿರೋಧಿಸಿ ಕೆಲವು ಸಂಘಟನೆಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಹಿಜಾಬ್ ವಿಚಾರ ಇನ್ನು ಸುಪ್ರೀಂ ಕೋರ್ಟ್ ನಲ್ಲಿದೆ. ಸಿದ್ದರಾಮಯ್ಯನವರು ಕಾನೂನು ತಜ್ಞರಾಗಿ ಈ ಆದೇಶ ಮಾಡಿದ್ದಾರೆ. ವಿಷಯಾಂತರ ಮಾಡಲು ಈಗ ಹಿಜಾಬ್ ವಿಚಾರ ತಂದಿದ್ದಾರೆ. ಸಿದ್ದರಾಮಯ್ಯರದ್ದು ಒಂದು ವರ್ಗದ ಸರ್ಕಾರವಲ್ಲ. ನೀವು ಹಿಜಾಬ್ ಹಿಂಪಡೆದಿದ್ದೇ ಆದರೆ ನಮ್ಮವರು ಕೇಸರಿ ಟವೆಲ್ ಹಾಕಿಕೊಂಡು ಬರುತ್ತಾರೆ. ಇದು ಶತಃ ಸಿದ್ದ. ಇದರಲ್ಲಿ ತಪ್ಪೇನಿದೆ ಎಂದು ಹೇಳಿದರು.
ದುಷ್ಟ ಶಕ್ತಿಗಳು, ದೇಶ ದ್ರೋಹಿಗಳನ್ನ ನಾವು ಖಂಡಿಸುತ್ತೇವೆ. ಭಾರತ ಮಾತಾ ಕೀ ಜೈ ಎನ್ನುವವರನ್ನ ನಾವು ಸ್ವಾಗತ ಮಾಡುತ್ತೇವೆ. ನೀವು ಹಿಜಾಬ್ ಆದೇಶ ಹಿಂಪಡೆದರೆ ಎಲ್ಲವು ಕೇಸರಿಮಯ ಆಗತ್ತೆ. ಅದಕ್ಕೆ ನಾವು ಕರೆ ಕೊಡುತ್ತೇವೆ. ಇಲ್ಲಿ ಸಂಘರ್ಷ ಆದ್ರೆ ಸಂಘಟನೆಗಳು, ವಿದ್ಯಾರ್ಥಿಗಳು ಕಾರಣರಲ್ಲ. ಇದಕ್ಕೆ ನೇರವಾಗಿ ಮುಖ್ಯಮಂತ್ರಿಗಳೇ ಹೊಣೆಯಾಗುತ್ತಾರೆ. ಹಿಜಾಬ್ ವಾಪಸ್ ಪಡೆದದ್ದೆ ಆದ್ರೆ ಕೇಸರಿ ಟವೆಲ್ ಹಾಕೋಕೆ ಸರ್ಕಾರಿ ಆದೇಶ ಮಾಡಬೇಕು. ರಾಜ್ಯದಲ್ಲಿ ಸಂಘರ್ಷಗಳಾದರೆ ಸರ್ಕಾರದ ವೈಫಲ್ಯಗಳೇ ಕಾರಣ. ರಾಜ್ಯದಲ್ಲಿ ಬರ, ಪರಿಹಾರ ಹಣ ಬಿಡುಗಡೆ ಬಗ್ಗೆ ಸರ್ಕಾರ ಗಮನ ಹರಿಸುತ್ತಿಲ್ಲ. ವಿಷಯಾಂತರ ಮಾಡಲು ಹಿಜಾಬ್ ವಿವಾದ ಎಳೆದು ತಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಚಿವ ಜಮೀರ್ ಅಹ್ಮದ್ ಟೀಕೆ ಮಾಡಿರುವ ರೇಣುಕಾಚಾರ್ಯ, ಸಿಎಂ ಜಮೀರ್ನನ್ನ ಎಲ್ಲಿಯವರೆಗೆ ಹತ್ತಿರ ಇಟ್ಕೋಂಡಿರ್ತಾರೆ ಅಲ್ಲಿವರೆಗೂ ಸರ್ಕಾರಕ್ಕೆ ಕೆಟ್ಟ ಹೆಸರು. ಮುಂದೆ ಜಮೀರ್ ಅಹ್ಮದ್ ರಂತ ಮತಾಂಧರಿಂದ ಸರ್ಕಾರ ಪತನವಾಗಬಹುದು. ಸಿಎಂ ದೆಹಲಿಗೆ ಖಾಸಗಿ ಪ್ಲೈಟ್ ನಲ್ಲಿ ಹೋಗುತ್ತಾರೆ. ಖಾಸಗಿ ಪ್ಲೈಟ್ ನ್ನ ತುರ್ತು ಸಂದರ್ಭದಲ್ಲಿ ಮಾತ್ರ ಬಳಸಬೇಕು. ಇವರಿಗೆ ಬರಗಾಲಕ್ಕೆ ಕೊಡಲು ಹಣವಿಲ್ಲ, ಆದ್ರೆ ಮೋಜು ಮಸ್ತಿಗಿದೆ. ಜಮೀರ್ ಅಹ್ಮದ್ ಖಳನಟನಂತೆ ನಟಿಸಿ ವಿಡಿಯೋ ವೈರಲ್ ಮಾಡಿದ್ದಾರೆ. ಇದರಿಂದ ಜನ ರೊಚ್ಚಿಗೆದ್ದು ಜನರೇ ಸರ್ಕಾರ ತೆಗೆಯುತ್ತಾರೆ ಎಂದು ಹೇಳಿದರು.