ಒರಿಜಿನಲ್ ಚಿನ್ನ ಎಂದು ನಂಬಿಸಿ, ನಕಲಿ ಬಂಗಾರ ನೀಡಿ 40 ಲಕ್ಷ ರೂ. ವಂಚನೆ!
ದಾವಣಗೆರೆ ವಿಡಿಯೋಗಳಿಗೆ ಚಂದಾದಾರರಾಗಿ
ದಾವಣಗೆರೆ: ಅಸಲಿ ಬಂಗಾರ ಎಂದು ನಕಲಿ ಬಂಗಾರ ನೀಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವ್ಯಕ್ತಿಯೊಬ್ಬರಿಗೆ 40 ಲಕ್ಷ ರೂಪಾಯಿ ಮೋಸ ಮಾಡಿದ್ದ ಇಬ್ಬರು ಅಂತರ್ ಜಿಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ.
ಹರಪನಹಳ್ಳಿ ತಾಲ್ಲೂಕಿನ ಪಾವನಪುರದ ಸಂದೀಪ, ಮತ್ತು ಇದೇ ತಾಲೂಕಿನ ಈಶ್ವರಪ್ಪ ಬಂಧಿತ ಆರೋಪಿಗಳು. ದೇವನಹಳ್ಳಿ ತಾಲ್ಲೂಕಿನ ಗೋವರ್ಧನ್ ಎನ್ನುವವರಿಗೆ ಅಸಲಿ ಬಂಗಾರ ಎಂದು ನಂಬಿಸಿ ನಕಲಿ ಬಂಗಾರ ನೀಡಿ 40 ಲಕ್ಷ ರೂ ಕಿತ್ತುಕೊಂಡು ತಲೆ ಮರೆಸಿಕೊಂಡಿದ್ದ ಆರೋಪಿಗಳ ಪತ್ತೆಗಾಗಿ ಹೆಚ್ಚುವರಿ ಎಸ್ಪಿ ಬಸರಗಿ ಅವರ, ಚನ್ನಗಿರಿ ಉಪ ವಿಭಾಗದ ಉಪಾಧೀಕ್ಷಕ ಪ್ರಶಾಂತ್ ಮುನ್ನೋಳಿ ಅವರ ಮಾರ್ಗದರ್ಶನದಲ್ಲಿ ಚನ್ನಗಿರಿ ಪಿಎಸ್ಐ ನಿರಂಜನ್ ನೇತೃತ್ವದ ತಂಡ ಸಂದೀಪ ಮತ್ತು ಈಶ್ವರಪ್ಪ ಅವರನ್ನು ಬಂಧಿಸಿ ಮೋಸ ಮಾಡಿದ್ದ 40 ಲಕ್ಷ ರೂಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳನ್ನು ಬಂಧಿಸುವಲ್ಲಿ ಪಿಎಸ್ಐ ಗುರುಶಾಂತಯ್ಯ, ಎಎಸ್ಐ ಶಶಿಧರ್, ಸಂತೆಬೆನ್ನೂರು ವೃತ್ತ ಕಚೇರಿಯ ಹೆಡ್ ಕಾನ್ಸಟೇಬಲ್ ರುದ್ರೇಶ್, ಸಿಬ್ಬಂದಿಗಳಾದ ಬೀರೇಶ್ವರ,ನರೇಂದ್ರಸ್ವಾಮಿ, ಚಂದ್ರಚಾರಿ ಅವರ ತಂಡ ಭಾಗಿಯಾಗಿತ್ತು. ಈ ಪೊಲೀಸ್ ತಂಡವನ್ನು ಜಿಲ್ಲಾ ಎಸ್ಪಿ ಉಮಾಪ್ರಶಾಂತ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಹರಪನಹಳ್ಳಿ ತಾಲ್ಲೂಕಿನ ಪಾವನಪುರದ ಸಂದೀಪ, ಮತ್ತು ಇದೇ ತಾಲೂಕಿನ ಈಶ್ವರಪ್ಪ ಬಂಧಿತ ಆರೋಪಿಗಳು. ದೇವನಹಳ್ಳಿ ತಾಲ್ಲೂಕಿನ ಗೋವರ್ಧನ್ ಎನ್ನುವವರಿಗೆ ಅಸಲಿ ಬಂಗಾರ ಎಂದು ನಂಬಿಸಿ ನಕಲಿ ಬಂಗಾರ ನೀಡಿ 40 ಲಕ್ಷ ರೂ ಕಿತ್ತುಕೊಂಡು ತಲೆ ಮರೆಸಿಕೊಂಡಿದ್ದ ಆರೋಪಿಗಳ ಪತ್ತೆಗಾಗಿ ಹೆಚ್ಚುವರಿ ಎಸ್ಪಿ ಬಸರಗಿ ಅವರ, ಚನ್ನಗಿರಿ ಉಪ ವಿಭಾಗದ ಉಪಾಧೀಕ್ಷಕ ಪ್ರಶಾಂತ್ ಮುನ್ನೋಳಿ ಅವರ ಮಾರ್ಗದರ್ಶನದಲ್ಲಿ ಚನ್ನಗಿರಿ ಪಿಎಸ್ಐ ನಿರಂಜನ್ ನೇತೃತ್ವದ ತಂಡ ಸಂದೀಪ ಮತ್ತು ಈಶ್ವರಪ್ಪ ಅವರನ್ನು ಬಂಧಿಸಿ ಮೋಸ ಮಾಡಿದ್ದ 40 ಲಕ್ಷ ರೂಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳನ್ನು ಬಂಧಿಸುವಲ್ಲಿ ಪಿಎಸ್ಐ ಗುರುಶಾಂತಯ್ಯ, ಎಎಸ್ಐ ಶಶಿಧರ್, ಸಂತೆಬೆನ್ನೂರು ವೃತ್ತ ಕಚೇರಿಯ ಹೆಡ್ ಕಾನ್ಸಟೇಬಲ್ ರುದ್ರೇಶ್, ಸಿಬ್ಬಂದಿಗಳಾದ ಬೀರೇಶ್ವರ,ನರೇಂದ್ರಸ್ವಾಮಿ, ಚಂದ್ರಚಾರಿ ಅವರ ತಂಡ ಭಾಗಿಯಾಗಿತ್ತು. ಈ ಪೊಲೀಸ್ ತಂಡವನ್ನು ಜಿಲ್ಲಾ ಎಸ್ಪಿ ಉಮಾಪ್ರಶಾಂತ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.