ಜಾತಿ ಆಧಾರದ ಮೇಲೆ ವರ್ಗಾವಣೆ ಮಾಡಲು ಸಾಧ್ಯವಿಲ್ಲ ; ಶಾಸಕ ಶಿವಗಂಗಾ ಬಸವರಾಜ್
1075 views
ದಾವಣಗೆರೆ ವಿಡಿಯೋಗಳಿಗೆ ಚಂದಾದಾರರಾಗಿದಾವಣಗೆರೆ ; ಕಾಂಗ್ರೆಸ್ನಲ್ಲಿ ಲಿಂಗಾಯತರ ಕಡೆಗಣನೆ ಎಂಬ ಶಾಮನೂರು ಹೇಳಿಕೆಯನ್ನು ಚನ್ನಗಿರಿ ಕ್ಷೇತ್ರದ ಕಾಂಗ್ರೇಸ್ ಶಾಸಕ ಶಿವಗಂಗಾ ಬಸವರಾಜ್ ತಳ್ಳಿ ಹಾಕಿದ್ದಾರೆ. ಅವರು ಹಿರಿಯರು ಇದ್ದಾರೆ, ಯಾವ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೆ ಎಂದು ಗೊತ್ತಿಲ್ಲ. ಎಲ್ಲಾ ಅಧಿಕಾರಿಗಳು ಸೂಕ್ತ ಸ್ಥಳದಲ್ಲಿ ನೇಮಕವಾಗಿದ್ದಾರೆ. ಎಲ್ಲಾ ಕಡೆ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.
ಶಾಮನೂರು ಶಿವಶಂಕರಪ್ಪ ನವರು ಯಾವ ಆರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ.ನಮ್ಮ ನಾಯಕರು ಈಗಾಗಲೇ ಸರಿಯಾಗಿ ಉತ್ತರಿಸಿದ್ದಾರೆ, ಖುಷಿ ಆಯ್ತು ನಾನು ಕೂಡ ವೀರಶೈವ ಸಮಾಜದವರು ಇರಬಹುದು ಆದರೆ ನಮ್ಮಹಿರಿಯ ನಾಯಕರು ಸರಿಯಾಗಿ ಹೇಳಿದ್ದಾರೆ, ಜಾತಿ ಆಧಾರದ, ರಿಜರ್ವೇಶನ್ ಮೇಲೆ ಕೇವಲ ನೇಮಕಾತಿಗಳು ಆಗುತ್ತವೆ. ಟ್ರಾನ್ಸಪರ್ ಗಳನ್ನು ಜಾತಿ ಅಧಾರದ ಮೇಲೆ ಮಾಡಲು ಸಾಧ್ಯವಿಲ್ಲ ಎಂದರು.
24ನೇ ಮಹಾ ಅಧಿವೇಶನ ಲಿಂಗಾಯತ ಸಮುದಾಯದ ಶಕ್ತಿ ಪ್ರದರ್ಶನವಲ್ಲ.ಕಾಗೆ ಕೂರುವುದಕ್ಕೂ ಟೆಂಗೆ ಮುರಿಯುವುದಕ್ಕೂ ಸರಿಯಾಗಿದೆ.ಕಳೆದ ವರ್ಷ ಮಾಡಬೇಕಿದ್ದ ಕಾರ್ಯಕ್ರಮ ಚುನಾವಣೆ ಹಿನ್ನಲೆ ಮುಂದೂಡಿದ್ದರು.ಈಗ ಅದೇ ಗ್ರೌಂಡ್ ನಲ್ಲಿ ಸಮಾವೇಶ ನಡೆಸಲು ಮುಂದಾಗಿದ್ದೇವೆ. ಅದರೆ ಈಗ ಶಾಮನೂರು ಶಿವಶಂಕರಪ್ಪ ರವರ ಹೇಳಿಕೆಯಿಂದ ಇದಕ್ಕೆ ಮಹತ್ವ ಪಡೆದಿದೆ ಎಂದು ಕೊಳ್ಳುತ್ತಿದ್ದಾರೆ ಅದಕ್ಕೂ ಇದಕ್ಕೆ ಯಾವುದೇ ಸಂಬಂಧ ಇಲ್ಲ ಯಥಾವತ್ತಾಗಿ ಸಮಾವೇಶ ಮಾಡಬೇಕಿತ್ತು ಮಾಡುತ್ತೇವೆ ಎಂದು ಹೇಳಿದರು.
ಶಾಮನೂರು ಶಿವಶಂಕರಪ್ಪ ನವರು ಯಾವ ಆರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ.ನಮ್ಮ ನಾಯಕರು ಈಗಾಗಲೇ ಸರಿಯಾಗಿ ಉತ್ತರಿಸಿದ್ದಾರೆ, ಖುಷಿ ಆಯ್ತು ನಾನು ಕೂಡ ವೀರಶೈವ ಸಮಾಜದವರು ಇರಬಹುದು ಆದರೆ ನಮ್ಮಹಿರಿಯ ನಾಯಕರು ಸರಿಯಾಗಿ ಹೇಳಿದ್ದಾರೆ, ಜಾತಿ ಆಧಾರದ, ರಿಜರ್ವೇಶನ್ ಮೇಲೆ ಕೇವಲ ನೇಮಕಾತಿಗಳು ಆಗುತ್ತವೆ. ಟ್ರಾನ್ಸಪರ್ ಗಳನ್ನು ಜಾತಿ ಅಧಾರದ ಮೇಲೆ ಮಾಡಲು ಸಾಧ್ಯವಿಲ್ಲ ಎಂದರು.
24ನೇ ಮಹಾ ಅಧಿವೇಶನ ಲಿಂಗಾಯತ ಸಮುದಾಯದ ಶಕ್ತಿ ಪ್ರದರ್ಶನವಲ್ಲ.ಕಾಗೆ ಕೂರುವುದಕ್ಕೂ ಟೆಂಗೆ ಮುರಿಯುವುದಕ್ಕೂ ಸರಿಯಾಗಿದೆ.ಕಳೆದ ವರ್ಷ ಮಾಡಬೇಕಿದ್ದ ಕಾರ್ಯಕ್ರಮ ಚುನಾವಣೆ ಹಿನ್ನಲೆ ಮುಂದೂಡಿದ್ದರು.ಈಗ ಅದೇ ಗ್ರೌಂಡ್ ನಲ್ಲಿ ಸಮಾವೇಶ ನಡೆಸಲು ಮುಂದಾಗಿದ್ದೇವೆ. ಅದರೆ ಈಗ ಶಾಮನೂರು ಶಿವಶಂಕರಪ್ಪ ರವರ ಹೇಳಿಕೆಯಿಂದ ಇದಕ್ಕೆ ಮಹತ್ವ ಪಡೆದಿದೆ ಎಂದು ಕೊಳ್ಳುತ್ತಿದ್ದಾರೆ ಅದಕ್ಕೂ ಇದಕ್ಕೆ ಯಾವುದೇ ಸಂಬಂಧ ಇಲ್ಲ ಯಥಾವತ್ತಾಗಿ ಸಮಾವೇಶ ಮಾಡಬೇಕಿತ್ತು ಮಾಡುತ್ತೇವೆ ಎಂದು ಹೇಳಿದರು.