M P Renukacharya : ತಾಕತ್ ಇದ್ರೆ ಆರ್ಎಸ್ಎಸ್, ಬಜರಂಗದಳ ಬ್ಯಾನ್ ಮಾಡಿ; ಕಾಂಗ್ರೆಸ್ ನಾಯಕರಿಗೆ ಎಂಪಿ ರೇಣುಕಾಚಾರ್ಯ ಸವಾಲು!
1042 views
ದಾವಣಗೆರೆ ವಿಡಿಯೋಗಳಿಗೆ ಚಂದಾದಾರರಾಗಿದಾವಣಗೆರೆ : ಚುನಾವಣೆ ಪೂರ್ವ ಹಾಗೂ ಚುನಾವಣೆ ಮುಗಿದ ಬಳಿಕವೂ ಕಾಂಗ್ರೆಸ್ನವರು ಮಾತೆತ್ತಿದರೆ, ಆರ್ಎಸ್ಎಸ್ ಹಾಗೂ ಬಜರಂಗದಳ ಬ್ಯಾನ್ ಮಾಡುತ್ತೇವೆ ಎನ್ನುತ್ತಿದ್ದಾರೆ. ತಾಕತ್ ಇದ್ರೆ ಹಿಂದೂ ಸಂಘಟನೆಗಳನ್ನು ಬ್ಯಾನ್ ಮಾಡುವಂತೆ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಸವಾಲು ಹಾಕಿದ್ದಾರೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬೆಳಗುತ್ತಿಯಲ್ಲಿ ಸರ್ಕಾರ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಹರಿಹಾಯ್ದಿರುವ ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯ, ನಿಮಗೆ ತಾಕತ್ತಿದ್ರೆ ಆರ್ಎಸ್ಎಸ್, ಬಜರಂಗದಳ, ವಿಶ್ವ ಹಿಂದೂ ಪರಿಷತ್ ಬ್ಯಾನ್ ಮಾಡಬೇಕು ಎಂದು ಖಡಕ್ ಸವಾಲನ್ನು ಹಾಕಿದ್ದಾರೆ. ಚುನಾವಣೆ ಪೂರ್ವ ಮತ್ತು ಈಗಲೂ ಅದನ್ನೇ ಹೇಳಿದ್ದೀರಿ. ಕೇಸರಿ ಬಗ್ಗೆ ಹಗುರವಾಗಿ ಮಾತನಾಡಿದರೆ ನಾವು ಸಹಿಸಲ್ಲ. ಈ ದೇಶದಲ್ಲಿ ಹಿಂದುತ್ವ ಮತ್ತು ಕೇಸರೀಕರಣ ಇದೆ. ಅದರಲ್ಲಿ ತಪ್ಪೇನು? ಭಾರತ ಬಿಟ್ಟು ಪಾಕಿಸ್ತಾನದಲ್ಲಿ ನಾವು ಕೇಸರಿಕರಣ ಮಾಡುವುದಕ್ಕಾಗುತ್ತಾ ಎಂದು ರೇಣುಕಾಚಾರ್ಯ ಪ್ರಶ್ನಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಬೆಳಗುತ್ತಿಯಲ್ಲಿ ಸರ್ಕಾರ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಹರಿಹಾಯ್ದಿರುವ ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯ, ನಿಮಗೆ ತಾಕತ್ತಿದ್ರೆ ಆರ್ಎಸ್ಎಸ್, ಬಜರಂಗದಳ, ವಿಶ್ವ ಹಿಂದೂ ಪರಿಷತ್ ಬ್ಯಾನ್ ಮಾಡಬೇಕು ಎಂದು ಖಡಕ್ ಸವಾಲನ್ನು ಹಾಕಿದ್ದಾರೆ. ಚುನಾವಣೆ ಪೂರ್ವ ಮತ್ತು ಈಗಲೂ ಅದನ್ನೇ ಹೇಳಿದ್ದೀರಿ. ಕೇಸರಿ ಬಗ್ಗೆ ಹಗುರವಾಗಿ ಮಾತನಾಡಿದರೆ ನಾವು ಸಹಿಸಲ್ಲ. ಈ ದೇಶದಲ್ಲಿ ಹಿಂದುತ್ವ ಮತ್ತು ಕೇಸರೀಕರಣ ಇದೆ. ಅದರಲ್ಲಿ ತಪ್ಪೇನು? ಭಾರತ ಬಿಟ್ಟು ಪಾಕಿಸ್ತಾನದಲ್ಲಿ ನಾವು ಕೇಸರಿಕರಣ ಮಾಡುವುದಕ್ಕಾಗುತ್ತಾ ಎಂದು ರೇಣುಕಾಚಾರ್ಯ ಪ್ರಶ್ನಿಸಿದ್ದಾರೆ.