ಕರ್ನಾಟಕದಲ್ಲಿ ತಾಲೀಬಾನ್ ಸರಕಾರವಿದೆ, ಬಾಬರ್ ತುಘಲಕ್ಗಳು ಆಡಳಿತದಲ್ಲಿದ್ದಾರೆ: ಎಂಪಿ ರೇಣುಕಾಚಾರ್ಯ
1130 views
ದಾವಣಗೆರೆ ವಿಡಿಯೋಗಳಿಗೆ ಚಂದಾದಾರರಾಗಿದಾವಣಗೆರೆ: ಕರ ಸೇವಕರು ಕ್ರಿಮಿನಲ್ಸ್ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಯ ವಿರುದ್ದ ಬಿಜೆಪಿ ನಾಯಕ ಎಂಪಿ ರೇಣುಕಾಚಾರ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಕರ ಸೇವಕರು ಕ್ರಮಿನಲ್ಗಳಾ ? ನಿಮ್ಮ ಬ್ರದರ್ಸ್, ಭಯೋತ್ಪಾದಕರು, ದೇಶದ್ರೋಹಿಗಳು, ಬಾಂಬ್ ಬ್ಲಾಸ್ಟ್ ಮಾಡುವವರು ಅಮಾಯಕರಾ? ಈ ರಾಜ್ಯದಲ್ಲಿ ಸಿರಿಯಾ ಕಾನೂನು ಅಳವಡಿಸಲು ಹೊರಟಿದ್ದೀರಾ? ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಪ್ರಶ್ನೆ ಮಾಡಿದ್ದಾರೆ.
ದಾವಣಗೆರೆಯಲ್ಲಿ ಈ ಬಗ್ಗೆ ಮಾತನಾಡಿರುವ ರೇಣುಕಾಚಾರ್ಯ, ಕಾಂಗ್ರೆಸ್ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರದ ನಡೆಯ ವಿರುದ್ಧ ದೊಡ್ಡ ಹೋರಾಟ ಮಾಡುತ್ತೇವೆ. ಮುಂದೆ ನಿಮಗೆ ಜನರು ಪಾಠ ಕಲಿಸುತ್ತಾರೆ. ಅಲ್ಲದೇ, ಕಾಂಗ್ರೆಸ್ ನವರು ಸ್ವಯಂಕೃತ ಅಪರಾಧ ಮುಚ್ಚಿಕೊಳ್ಳಲು ವಿಷಯಾಂತರ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇಲ್ಲ. ತಾಲಿಬಾನ್, ಬಾಬರ್, ತುಘಲಕ್ ಸರ್ಕಾರ ನಡೆಯುತ್ತಿದೆ. ಕರ ಸೇವರಕನ್ನ ಬಂಧಿಸುತ್ತೀರಾ..? ಶ್ರೀಕಾಂತ್ ಪೂಜಾರಿ ಮೇಲಿನ 16 ಕೇಸ್ ಗಳಲ್ಲಿ ,15 ಖುಲಾಸೆಯಾಗಿದ್ದು, ಒಂದು ಕೇಸ್ ಇಟ್ಟುಕೊಂಡು ಬಂಧಿಸಲಾಗಿದೆ. 30 ವರ್ಷದ ಹಿಂದಿನ ಕೇಸ್ ಗೆ ಈಗ ಮರುಜೀವ ಕೊಟ್ಟು ಬಂಧಿಸಿದ್ದು, ತನ್ನ ವೈಫಲ್ಯಗಳನ್ನ ಮುಚ್ಚಿಕೊಳ್ಳಲು ಸರ್ಕಾರ ಈ ರೀತಿ ಮಾಡುತ್ತಿದೆ. ಒಂದು ಕಡೆ ಕರಸೇವಕರನ್ನ ಬಂಧಿಸಿದ್ದಾರೆ, ಮತ್ತೊಂದು ಕಡೆ ದತ್ತ ಪೀಠ ಮಾಲಾಧಾರಿಗಳ ಮೇಲೆ ಕೇಸ್ ಹಾಕಿದ್ದಾರೆ. ಸರ್ಕಾರವೇ ಹಿಂದುಗಳನ್ನ ಟಾರ್ಗೆಟ್ ಮಾಡುತ್ತಿದೆ ಎಂದಿದ್ದಾರೆ.
ಸಿದ್ದರಾಮಯ್ಯರನ್ನ ಇಳಿಸಲು ಕೆಲವರು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದು, ಸಿದ್ದರಾಮಯ್ಯನವರಿಗೆ ಒಳ ಹೊಡೆತ ನೀಡಲು ಒಂದು ಗುಂಪು ರೆಡಿಯಾಗಿದೆ. ಬಿಕೆ ಹರಿಪ್ರಸಾದ್ ಗೋಧ್ರಾ ಗಲಭೆಯಾಗುತ್ತೆ ಅಂತಾರೆ. ಗೋಧ್ರಾ ಗಲಭೆಗೆ ನರೇಂದ್ರ ಮೋದಿ ಕಾರಣವಲ್ಲ. ಮಾಜಿ ಸಚಿವ ಆಂಜನೇಯ ಅಲ್ಲಿಯಾಕೆ ಹೋಗಿ ರಾಮನಿಗೆ ಪೂಜೆ ಮಾಡಬೇಕು ಅಂತಾರೆ. ಆಂಜನೇಯ ಆತನ ಹೆಸರಿಗೆ ತದ್ವಿರುದ್ದ ಇದ್ದಾರೆ. ಮತ್ತೊಂದು ಕಡೆ ಸಿದ್ದರಾಮಯ್ಯ ಪುತ್ರ ಯತೀಂದ್ರ ಭಾರತ ಹಿಂದೂ ರಾಷ್ಟ್ರ ಆಗಲ್ಲ ಅಂತಾರೆ. ಇದನ್ನೇನು ಪಾಕಿಸ್ತಾನ ಮಾಡಿಕೊಂಡಿದ್ದೀರಾ..? ಒಟ್ಟಿನಲ್ಲಿ ರಾಜ್ಯದಲ್ಲಿ ಹಿಂದು ವಿರೋಧಿ ಸರ್ಕಾರ ಆಡಳಿತ ನಡೆಸುತ್ತಿದ್ದು, ತಮಗೆ ತಾಕತ್ ಇದ್ರೆ ಅಷ್ಟೂ ಕರಸೇವಕರನ್ನು ಬಂಧಿಸಿ. ದತ್ತಪೀಠ ಮಾಲಾಧಾರಿಗಳನ್ನು ಬಂಧಿಸಿ. ಎಷ್ಟು ಜೈಲು ಸಾಕಾಗತ್ತೆ, ನಾವು ನೋಡುತ್ತೇವೆ ಎಂದು ಸರ್ಕಾರಕ್ಕೆ ರೇಣುಕಾಚಾರ್ಯ ಸವಾಲು ಹಾಕಿದ್ದಾರೆ.
ದಾವಣಗೆರೆಯಲ್ಲಿ ಈ ಬಗ್ಗೆ ಮಾತನಾಡಿರುವ ರೇಣುಕಾಚಾರ್ಯ, ಕಾಂಗ್ರೆಸ್ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಸರ್ಕಾರದ ನಡೆಯ ವಿರುದ್ಧ ದೊಡ್ಡ ಹೋರಾಟ ಮಾಡುತ್ತೇವೆ. ಮುಂದೆ ನಿಮಗೆ ಜನರು ಪಾಠ ಕಲಿಸುತ್ತಾರೆ. ಅಲ್ಲದೇ, ಕಾಂಗ್ರೆಸ್ ನವರು ಸ್ವಯಂಕೃತ ಅಪರಾಧ ಮುಚ್ಚಿಕೊಳ್ಳಲು ವಿಷಯಾಂತರ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇಲ್ಲ. ತಾಲಿಬಾನ್, ಬಾಬರ್, ತುಘಲಕ್ ಸರ್ಕಾರ ನಡೆಯುತ್ತಿದೆ. ಕರ ಸೇವರಕನ್ನ ಬಂಧಿಸುತ್ತೀರಾ..? ಶ್ರೀಕಾಂತ್ ಪೂಜಾರಿ ಮೇಲಿನ 16 ಕೇಸ್ ಗಳಲ್ಲಿ ,15 ಖುಲಾಸೆಯಾಗಿದ್ದು, ಒಂದು ಕೇಸ್ ಇಟ್ಟುಕೊಂಡು ಬಂಧಿಸಲಾಗಿದೆ. 30 ವರ್ಷದ ಹಿಂದಿನ ಕೇಸ್ ಗೆ ಈಗ ಮರುಜೀವ ಕೊಟ್ಟು ಬಂಧಿಸಿದ್ದು, ತನ್ನ ವೈಫಲ್ಯಗಳನ್ನ ಮುಚ್ಚಿಕೊಳ್ಳಲು ಸರ್ಕಾರ ಈ ರೀತಿ ಮಾಡುತ್ತಿದೆ. ಒಂದು ಕಡೆ ಕರಸೇವಕರನ್ನ ಬಂಧಿಸಿದ್ದಾರೆ, ಮತ್ತೊಂದು ಕಡೆ ದತ್ತ ಪೀಠ ಮಾಲಾಧಾರಿಗಳ ಮೇಲೆ ಕೇಸ್ ಹಾಕಿದ್ದಾರೆ. ಸರ್ಕಾರವೇ ಹಿಂದುಗಳನ್ನ ಟಾರ್ಗೆಟ್ ಮಾಡುತ್ತಿದೆ ಎಂದಿದ್ದಾರೆ.
ಸಿದ್ದರಾಮಯ್ಯರನ್ನ ಇಳಿಸಲು ಕೆಲವರು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದು, ಸಿದ್ದರಾಮಯ್ಯನವರಿಗೆ ಒಳ ಹೊಡೆತ ನೀಡಲು ಒಂದು ಗುಂಪು ರೆಡಿಯಾಗಿದೆ. ಬಿಕೆ ಹರಿಪ್ರಸಾದ್ ಗೋಧ್ರಾ ಗಲಭೆಯಾಗುತ್ತೆ ಅಂತಾರೆ. ಗೋಧ್ರಾ ಗಲಭೆಗೆ ನರೇಂದ್ರ ಮೋದಿ ಕಾರಣವಲ್ಲ. ಮಾಜಿ ಸಚಿವ ಆಂಜನೇಯ ಅಲ್ಲಿಯಾಕೆ ಹೋಗಿ ರಾಮನಿಗೆ ಪೂಜೆ ಮಾಡಬೇಕು ಅಂತಾರೆ. ಆಂಜನೇಯ ಆತನ ಹೆಸರಿಗೆ ತದ್ವಿರುದ್ದ ಇದ್ದಾರೆ. ಮತ್ತೊಂದು ಕಡೆ ಸಿದ್ದರಾಮಯ್ಯ ಪುತ್ರ ಯತೀಂದ್ರ ಭಾರತ ಹಿಂದೂ ರಾಷ್ಟ್ರ ಆಗಲ್ಲ ಅಂತಾರೆ. ಇದನ್ನೇನು ಪಾಕಿಸ್ತಾನ ಮಾಡಿಕೊಂಡಿದ್ದೀರಾ..? ಒಟ್ಟಿನಲ್ಲಿ ರಾಜ್ಯದಲ್ಲಿ ಹಿಂದು ವಿರೋಧಿ ಸರ್ಕಾರ ಆಡಳಿತ ನಡೆಸುತ್ತಿದ್ದು, ತಮಗೆ ತಾಕತ್ ಇದ್ರೆ ಅಷ್ಟೂ ಕರಸೇವಕರನ್ನು ಬಂಧಿಸಿ. ದತ್ತಪೀಠ ಮಾಲಾಧಾರಿಗಳನ್ನು ಬಂಧಿಸಿ. ಎಷ್ಟು ಜೈಲು ಸಾಕಾಗತ್ತೆ, ನಾವು ನೋಡುತ್ತೇವೆ ಎಂದು ಸರ್ಕಾರಕ್ಕೆ ರೇಣುಕಾಚಾರ್ಯ ಸವಾಲು ಹಾಕಿದ್ದಾರೆ.