ಯಾರೂ ಕರೆಂಟ್ ಬಿಲ್ ಕಟ್ಟಬೇಡಿ, ಬಿಲ್ ಕೇಳಲು ಬಂದ್ರೆ ವಾಪಸ್ ಕಳಿಸಿ: ಎಂಪಿ ರೇಣುಕಾಚಾರ್ಯ
ದಾವಣಗೆರೆ: ಸರ್ಕಾರ ನೀಡಿರುವ ಭರವಸೆಯಂತೆ ಯಾರೂ ಕೂಡ ವಿದ್ಯುತ್ ಬಿಲ್ ಕಟ್ಟಬೇಡಿ, ಬಿಲ್ ಕಟ್ಟಿಸಿಕೊಳ್ಳಲು ಬಂದರೆ ವಾಪಸ್ ಕಳಿಸಿ ಎಂದು ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಜನರಿಗೆ ಸಲಹೆಯನ್ನ ನೀಡಿದ್ದಾರೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಮುಕ್ತೇನಹಳ್ಳಿಯಲ್ಲಿ ಈ ಬಗ್ಗೆ ಮಾತನಾಡಿರುವ ಎಂಪಿ ರೇಣುಕಾಚಾರ್ಯ, ಚುನಾವಣೆ ಸಮಯದಲ್ಲಿ ಕೊಟ್ಟಿರುವ ಭರವಸೆಗಳನ್ನ ಈಡೇರಿಸಿ, ಇಲ್ಲದಿದ್ದರೆ ವಚನಭ್ರಷ್ಟರಾಗುತ್ತೀರಿ ಎಂದು ನೂತನ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಚುನಾವಣೆ ಸಮಯದಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನನಗೂ 200 ಯೂನಿಟ್ ವಿದ್ಯುತ್ ಫ್ರೀ, ಮಹದೇವಪ್ಪಗೂ 200 ಯೂನಿಟ್ ವಿದ್ಯುತ್, ಎಲ್ಲಿರಿಗೂ ವಿದ್ಯುತ್ ಫ್ರೀ ಎಂದು ಭಾಷಣ ಮಾಡಿದ್ದಾರೆ. ಅಲ್ಲದೆ, ಸರ್ಕಾರ ಬಂದ ಒಂದೇ ಗಂಟೆಯಲ್ಲಿ ಯೋಜನೆ ಜಾರಿ ಮಾಡುವುದಾಗಿ 5 ಭರವಸೆಗಳನ್ನ ನೀಡಿದೆ. ಆದರೆ ಇದೂವರೆಗೂ ಅದು ಕಾರ್ಯಗತವಾಗಿಲ್ಲ. ಚುನಾವಣೆ ಹಾಗೂ ಅಧಿಕಾರಕ್ಕಾಗಿ ಇವರು ಸುಳ್ಳು ಹೇಳಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಅಂದ್ರು..
ಈಗಾಗಲೇ ಉಚಿತ ಪ್ರಯಾಣಕ್ಕಾಗಿ ಬಸ್ ಗಳಲ್ಲಿ ಮಹಿಳೆಯರು ಜಗಳ ಮಾಡುತ್ತಿದ್ದಾರೆ. ಇತ್ತ ವಿದ್ಯುತ್ ಬಿಲ್ ಕಟ್ಟಿಸಿಕೊಳ್ಳಲು ಬಂದಾಗ ಗಲಾಟೆಗಳು ನಡೆಯುತ್ತಿವೆ. ಹೀಗಾಗಿ, ಸರ್ಕಾರ ಕೂಡಲೇ ಭರವಸೆ ನೀಡಿದಂತೆ ಜಾರಿ ಮಾಡಬೇಕು. ಇಲ್ಲದಿದ್ದರೆ, ಇನ್ನು ಸ್ವಲ್ಪ ದಿನ ನಾವು ಕಾದು ನೋಡುತ್ತೇವೆ, ಬಳಿಕ ಹೋರಾಟ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
davanagereTimesXP KannadaUpdated: 26 May 2023, 8:19 pm