ಕೊಟ್ಟ ಗ್ಯಾರಂಟಿಗಳಿಗೆ, ಜನಪರ ಕಾರ್ಯಗಳಿಗೆ ಕಾಂಗ್ರೆಸ್ ಸರಕಾರ ರಿವರ್ಸ್: ಬಸವರಾಜ ಬೊಮ್ಮಾಯಿ
1040 views
ಧಾರವಾಡ ವಿಡಿಯೋಗಳಿಗೆ ಚಂದಾದಾರರಾಗಿಹುಬ್ಬಳ್ಳಿ: ಅಧಿಕಾರ ಬಂದಾಗ ಸ್ವೇಚ್ಛಾಚಾರವಾಗಿ ಬದಲಾವಣೆ ಮಾಡುತ್ತೇವೆ ಎನ್ನುವುದು ದುರಹಂಕಾರದ ಮಾತು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿಕಾರಿದರು. ನಗರದ ಆದರ್ಶನಗರದಲ್ಲಿನ ತಮ್ಮ ನಿವಾಸದಲ್ಲಿ ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು.
ಚುನಾವಣಾ ಸಂದರ್ಭದಲ್ಲಿ ಸಹ ನಾವು ಹೇಳಿದ್ದೆವು, ಇದೊಂದು ರಿವರ್ಸ್ ಸರ್ಕಾರ ಅಂತಾ, ಅದು ನಿಜವಾಗಿದೆ. ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ನವರು ಕೊಟ್ಟ ಗ್ಯಾರಂಟಿಗಳಲ್ಲಿ ಹಾಗೂ ನಾವು ಮಾಡಿದ ಜನಪರ ಕಾರ್ಯಗಳಲ್ಲಿ ಸಹ ರಿವರ್ಸ್ ಹೋಗತಾ ಇದ್ದಾರೆ. ಖಂಡಿತವಾಗಿಯೂ ಇದೊಂದು ಉಲ್ಟಾ ಹೊಡೆಯಲಿರುವ ಸರಕಾರ ಎಂದರು.
ಚುನಾವಣಾ ಸಂದರ್ಭದಲ್ಲಿ ಸಹ ನಾವು ಹೇಳಿದ್ದೆವು, ಇದೊಂದು ರಿವರ್ಸ್ ಸರ್ಕಾರ ಅಂತಾ, ಅದು ನಿಜವಾಗಿದೆ. ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ನವರು ಕೊಟ್ಟ ಗ್ಯಾರಂಟಿಗಳಲ್ಲಿ ಹಾಗೂ ನಾವು ಮಾಡಿದ ಜನಪರ ಕಾರ್ಯಗಳಲ್ಲಿ ಸಹ ರಿವರ್ಸ್ ಹೋಗತಾ ಇದ್ದಾರೆ. ಖಂಡಿತವಾಗಿಯೂ ಇದೊಂದು ಉಲ್ಟಾ ಹೊಡೆಯಲಿರುವ ಸರಕಾರ ಎಂದರು.