ನಾಸೀರ್ ಹುಸೇನ್ ಟೀಮ್ ಪಾಕ್ ಪರ ಘೋಷಣೆ ಕೂಗಿದ್ದು ಸಾಬೀತಾಗಿದೆ; ಮಹೇಶ್ ಟೆಂಗಿನಕಾಯಿ
1071 views
ಧಾರವಾಡ ವಿಡಿಯೋಗಳಿಗೆ ಚಂದಾದಾರರಾಗಿಹುಬ್ಬಳ್ಳಿ: ಪಾಕ್ ಪರ ಘೋಷಣೆ ಪ್ರಕರಣದ ಎಫ್ಐಆರ್ ನಲ್ಲಿ ನೂತನ ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್ ಹೆಸರು ಸೇರಿಸಬೇಕು. ಮೊದಲು ಕಾಂಗ್ರೆಸ್ ಅಲ್ಲೆಗಳೆಯುವ ಕೆಲಸ ಮಾಡಿತು ಈಗ ಮೂವರನ್ನು ಬಂಧನ ಆಗಿದೆ ಎಂದು ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಹೇಳಿದರು.
ನಾಸೀರ್ ಹುಸೇನ್ ಟೀಮ್ ಘೋಷಣೆ ಕೂಗಿರೋದು ಖಾತ್ರಿಯಾಗಿದೆ. ಆರೋಪಿಗೆ ಬೆಂಬಲ ಮಾಡುವುದೂ ಆರೋಪವೇ ಎಫ್ ಐ ಆರ್ ನಲ್ಲಿ ನಾಸಿರ್ ಹೆಸರು ಸೇರಿಸಬೇಕು ಎಂದು ಶಾಸಕ ಮಹೇಶ ಟೆಂಗಿನಕಾಯಿ ಒತ್ತಾಯಿಸಿದರು.
ನಗರದಲ್ಲಿಂದು ಮಾತನಾಡಿದ ಅವರು, ನಾಸೀರ್ ಹುಸೇನ್ ಅವರಿಗೆ ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕಾರಕ್ಕೆ ಅವಕಾಶ ಮಾಡಿಕೊಡಬಾರದು. ರಾಜ್ಯಸಭಾ ಸಭಾಪತಿಗಳಿಗೆ ದೂರು ನೀಡುವ ಕುರಿತು ಸಮಾಲೋಚಿಸುತ್ತೇವೆ. ರಾಜ್ಯಾಧ್ಯಕ್ಷರು, ಕೋರ್ ಕಮಿಟಿ ಸದಸ್ಯರು ಈ ಕುರಿತು ತೀರ್ಮಾನಿಸ್ತಾರೆ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಇಂತಹ ಘಟನೆ ನಡೆಯುತ್ತಿವೆ. ಅಭಿವೃದ್ಧಿಯ ಇನ್ನೊಂದೆ ಹೆಸರೇ ಬಿಜೆಪಿ. ನಮಗೆ ಪಾಕಿಸ್ತಾನ, ಅಫಘಾನಿಸ್ತಾನ್ ಹೆಸರು ಬೇಕಿಲ್ಲ. ಮಂಡ್ಯದಲ್ಲಿ ಎರಡು ವರ್ಷದ ಹಿಂದೆ ನಡೆದ ಘಟನೆಗೆ ಈಗ ಕೇಸ್ ಹಾಕುತ್ತಿದ್ದಾರೆ. ಬಿಜೆಪಿಯವರು ತಪ್ಪು ಮಾಡಿದ್ದರು ಕೇಸ್ ಹಾಕಿ, ಕ್ರಮ ಕೈಗೊಳ್ಳಿ. ನಿಮ್ಮದೇ ಸರ್ಕಾರವಿದೆ, ತನಿಖೆ ಮಾಡಿ,ಯಾರೇ ಮಾಡಿದ್ರು ತಪ್ಪು. ನಿಜವಾದ ಅಪರಾಧಿಗಳನ್ನು ಬಂಧಿಸೋ ತಾಕತ್ತು ಇಲ್ಲ. ದೇಶ ಪ್ರೇಮಿ ಯಾರು ಅಂತಾ ಇಡೀ ದೇಶಕ್ಕೆ ಗೊತ್ತಿದೆ ಎಂದರು.
ಟಿಕೆಟ್ ಗೆ ದುಡ್ಡು ಕೊಡಬೇಕೆಂಬ ರವೀಂದ್ರ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈ ಬಗ್ಗೆ ಕಾಂಗ್ರೆಸ್ ಪಕ್ಷದ ನಾಯಕರೇ ಉತ್ತರಿಸಬೇಕು. ಲೋಕಸಭೆ ಟಿಕೆಟ್ ವಿಳಂಬವಾಗಿಲ್ಲ. ಆಯಾ ರಾಜ್ಯಗಳಲ್ಲಿ ಅಭ್ಯರ್ಥಿಗಳ ಕುರಿತು ಚರ್ಚೆಯಾಗುತ್ತಿದೆ. ಎರಡು ಮೂರು ದಿನದಲ್ಲಿ ಬಿಜೆಪಿ ಪಟ್ಟಿ ಬಿಡುಗಡೆಯಾಗುತ್ತದೆ ಎಂದರು.
ಸೋಮಶೇಖರ್, ಹೆಬ್ಬಾರ್ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ನ ಹಲವಾರು ನಾಯಕರು ಬಿಜೆಪಿ ಕದ ತಟ್ಟುತ್ತಿದ್ದಾರೆ. ಕಾಂಗ್ರೆಸ್ ಮನೆಯೊಂದು ಮೂರು ಬಾಗಿಲು ಆಗಿದೆ. ತಮ್ಮ ಡ್ಯಾಮೇಜ್ ಕಂಟ್ರೋಲ್ ಗೆ ಹೀಗೆ ಹೇಳುತ್ತಿದ್ದಾರೆ ಎಂದರು.
ನಾಸೀರ್ ಹುಸೇನ್ ಟೀಮ್ ಘೋಷಣೆ ಕೂಗಿರೋದು ಖಾತ್ರಿಯಾಗಿದೆ. ಆರೋಪಿಗೆ ಬೆಂಬಲ ಮಾಡುವುದೂ ಆರೋಪವೇ ಎಫ್ ಐ ಆರ್ ನಲ್ಲಿ ನಾಸಿರ್ ಹೆಸರು ಸೇರಿಸಬೇಕು ಎಂದು ಶಾಸಕ ಮಹೇಶ ಟೆಂಗಿನಕಾಯಿ ಒತ್ತಾಯಿಸಿದರು.
ನಗರದಲ್ಲಿಂದು ಮಾತನಾಡಿದ ಅವರು, ನಾಸೀರ್ ಹುಸೇನ್ ಅವರಿಗೆ ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕಾರಕ್ಕೆ ಅವಕಾಶ ಮಾಡಿಕೊಡಬಾರದು. ರಾಜ್ಯಸಭಾ ಸಭಾಪತಿಗಳಿಗೆ ದೂರು ನೀಡುವ ಕುರಿತು ಸಮಾಲೋಚಿಸುತ್ತೇವೆ. ರಾಜ್ಯಾಧ್ಯಕ್ಷರು, ಕೋರ್ ಕಮಿಟಿ ಸದಸ್ಯರು ಈ ಕುರಿತು ತೀರ್ಮಾನಿಸ್ತಾರೆ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಇಂತಹ ಘಟನೆ ನಡೆಯುತ್ತಿವೆ. ಅಭಿವೃದ್ಧಿಯ ಇನ್ನೊಂದೆ ಹೆಸರೇ ಬಿಜೆಪಿ. ನಮಗೆ ಪಾಕಿಸ್ತಾನ, ಅಫಘಾನಿಸ್ತಾನ್ ಹೆಸರು ಬೇಕಿಲ್ಲ. ಮಂಡ್ಯದಲ್ಲಿ ಎರಡು ವರ್ಷದ ಹಿಂದೆ ನಡೆದ ಘಟನೆಗೆ ಈಗ ಕೇಸ್ ಹಾಕುತ್ತಿದ್ದಾರೆ. ಬಿಜೆಪಿಯವರು ತಪ್ಪು ಮಾಡಿದ್ದರು ಕೇಸ್ ಹಾಕಿ, ಕ್ರಮ ಕೈಗೊಳ್ಳಿ. ನಿಮ್ಮದೇ ಸರ್ಕಾರವಿದೆ, ತನಿಖೆ ಮಾಡಿ,ಯಾರೇ ಮಾಡಿದ್ರು ತಪ್ಪು. ನಿಜವಾದ ಅಪರಾಧಿಗಳನ್ನು ಬಂಧಿಸೋ ತಾಕತ್ತು ಇಲ್ಲ. ದೇಶ ಪ್ರೇಮಿ ಯಾರು ಅಂತಾ ಇಡೀ ದೇಶಕ್ಕೆ ಗೊತ್ತಿದೆ ಎಂದರು.
ಟಿಕೆಟ್ ಗೆ ದುಡ್ಡು ಕೊಡಬೇಕೆಂಬ ರವೀಂದ್ರ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈ ಬಗ್ಗೆ ಕಾಂಗ್ರೆಸ್ ಪಕ್ಷದ ನಾಯಕರೇ ಉತ್ತರಿಸಬೇಕು. ಲೋಕಸಭೆ ಟಿಕೆಟ್ ವಿಳಂಬವಾಗಿಲ್ಲ. ಆಯಾ ರಾಜ್ಯಗಳಲ್ಲಿ ಅಭ್ಯರ್ಥಿಗಳ ಕುರಿತು ಚರ್ಚೆಯಾಗುತ್ತಿದೆ. ಎರಡು ಮೂರು ದಿನದಲ್ಲಿ ಬಿಜೆಪಿ ಪಟ್ಟಿ ಬಿಡುಗಡೆಯಾಗುತ್ತದೆ ಎಂದರು.
ಸೋಮಶೇಖರ್, ಹೆಬ್ಬಾರ್ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ ನ ಹಲವಾರು ನಾಯಕರು ಬಿಜೆಪಿ ಕದ ತಟ್ಟುತ್ತಿದ್ದಾರೆ. ಕಾಂಗ್ರೆಸ್ ಮನೆಯೊಂದು ಮೂರು ಬಾಗಿಲು ಆಗಿದೆ. ತಮ್ಮ ಡ್ಯಾಮೇಜ್ ಕಂಟ್ರೋಲ್ ಗೆ ಹೀಗೆ ಹೇಳುತ್ತಿದ್ದಾರೆ ಎಂದರು.