ಹುಬ್ಬಳ್ಳಿ ಗಲಭೆಯಲ್ಲಿ ನಾನು ಭಾಗವಹಿಸಿದ್ದೆ, ನನ್ನ ಬಂಧಿಸಿ ನೋಡೋಣ ; ಆರ್ ಅಶೋಕ್ ಚಾಲೆಂಜ್
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಶಹರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಮೇಲೆ ಕ್ರಮ ಆಗಬೇಕು, ರಾಮಭಕ್ತರನ್ನ ಬಂಧಿಸಿರುವುದನ್ನ ಖಂಡಿಸುತ್ತೇನೆ, ರಾಮ ಭಕ್ತರನ್ನ ಬಂಧನ ಮಾಡೋ ಹುನ್ನಾರ ಕಾಂಗ್ರೆಸ್ ಮಾಡುತ್ತಿದೆ, ಶಹರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ಮಾಡುತ್ತೇವೆ, ಸುಮಾರು 56,000 ಪೆಂಡಿಂಗ್ ಕೇಸ್ಗಳು ಇವೆ, ಆದರೆ ಅವೆಲ್ಲವನ್ನ ಬಿಟ್ಟು ಹುಬ್ಬಳ್ಳಿ ಕಡೆ ಬಂದಿರೋದು ಯಾಕೆ?, ಅದು ಕರಸೇವೆಕರನ್ನ ಹುಡುಕಿ ಬಂಧನ ಮಾಡಿದ್ದು ನ್ಯಾಯಾನಾ..? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ಗೆ ರಾಮನ ಮೇಲೆ ಯಾಕೆ ಕೋಪಾ..?, ಕಾಂಗ್ರೆಸ್ ನಾಯಕನೊಬ್ಬ ಕೇಳಿದ್ದ ರಾಮ ಹುಟ್ಟಿದ್ದಕ್ಕೆ ಬರ್ತ್ ಸರ್ಟಿಪಿಕೇಟ್ ಇದೆನಾ ಅಂತ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೇಲೆ ಚೀಟಿಂಗ್ ಕೇಸ್ ಇಲ್ವಾ?, ಎಲ್ಲವನ್ನೂ ಬಿಡುಗಡೆ ಮಾಡಲಿ, ನ್ಯಾಯಾಲಯ ಶಿಕ್ಷೆ ಕೊಡಬೇಕು, ರಾಹುಲ್ ಬಂಧನವಾದಾಗ ದೇಶದಲ್ಲಿ ಪ್ರತಿಭಟನೆಗಳು ಆದವೂ, ಆಟೋ ಚಾಲಕನ ಮೇಲೆ ಯಾಕೆ ಇಂತಾ ದರ್ಪ ರಾಹುಲ್ ಗಾಂಧಿನೂ ಅಪರಾಧಿನೆ ಹಾಗಿದ್ರೆ ಎಂದು ಹೇಳಿದರು.
ಕರಸೇವೆಯಲ್ಲಿ ಬಂಧನವಾದ ಹಿಂದೂ ಕಾರ್ಯಕರ್ತನನ್ನ ಬಿಡುಗಡೆ ಗೊಳಿಸಬೇಕು, ಹಿಂದೂ ಕಾರ್ಯಕರ್ತರನ್ನ ಹಡುಕಿ ಹುಡುಕಿ ಕೇಸ್ ಹಾಕ್ತಾ ಇದ್ದಾರೆ, ಮೂವರು ಸತ್ತೋಗಿದ್ದಾರೆ. ಐವರು ಪ್ರಕರಣದಲ್ಲಿ ಖುಲಾಸೆಯಾಗಿದ್ದಾರೆ, ಒಟ್ಟು69,000 ಸಾವಿರ ಎಲ್ ಪಿಎಸ್ ಕೇಸ್ಗಳು ಇವೆ, ಆದರೆ ಹಿಂದೂ ಕಾರ್ಯಕರ್ತನ ಮೆಲೆ ಮಾಡಿದ್ದು ಸರಿ ಅಲ್ಲ, ಕೂಡಲೇ ಅವರನ್ನ ಬಂಧನದಿಂದ ಕೈ ಬಿಡಬೇಕು ಕಾಂಗ್ರೆಸ್ ಪಕ್ಷ ದ್ವಷೇದ ರಾಜಕಾರಣ ಮಾಡುತ್ತಿದೆ, ಅಯೋಧ್ಯೆಯಲ್ಲಿ ಯಾವುದು ಸರಿಯಾಗಿ ನಡೆಯಬಾರದು ಎಂದು ಪ್ಲಾನ್ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ನನ್ನ ಮೇಲೂ ಕೇಸ್ ಇದೆ ಬಂಧಿಸಿ ನೋಡೋಣ, ಕಾಂಗ್ರೆಸ್ ಪಕ್ಷಕ್ಕೆ ಹುಚ್ಚು ಹಿಡಿದಿದೆ ಸೋಲಿನ ಭಯದಿಂದ ಹೀಗೆ ಮಾಡ್ತಿದ್ದಾರೆ. ಮುಸ್ಲಿಂ ಸಮುದಾಯವನ್ನ ಓಲೈಕೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.