ಮುತ್ತಿನ ಗುರಿ ಮುಟ್ಟಿತು, ಬೆಳ್ಳಿ ತೊಟ್ಟಿಲು ಕಟ್ಟಿತು ಪರಾಕ್: ಧಾರವಾಡದ ಬೊಕೊಪ್ಪ ಮೈಲಾರ ಕಾರ್ಣಿಕದ ವಿಶೇಷ ಏನು?
ಧಾರವಾಡ ವಿಡಿಯೋಗಳಿಗೆ ಚಂದಾದಾರರಾಗಿ
ಧಾರವಾಡ : ಸಿರಿನಾಡಿಗೆ ಬಂಗಾರದ ಗಿಳಿ ಬಂದು ಕುಳಿತೇಲೆ ಪರಾಕ್, ಮುತ್ತಿನ ಗುರಿ ಮುಟ್ಟಿತು ಬೆಳ್ಳಿ ತೊಟ್ಟಿಲು ಕಟ್ಟಿತು ಪರಾಕ್.. ಕಷ್ಟ ಪಟ್ಟ ಮನುಷ್ಯನಿಗೆ ಮುತ್ತಿನ ದಾರಿ ಸಿಕ್ಕಿತ್ತಲೇ ಪರಾಕ್.. ಇವು ಧಾರವಾಡ ಜಿಲ್ಲೆಯ ಬೊಕೊಪ್ಪ ಮೈಲಾರ ಜಾತ್ರೆಯಲ್ಲಿ ಗೊರವಯ್ಯರು ನುಡಿದ ಕಾರ್ಣಿಕ ವಾಣಿಗಳು. ಹೌದು, ಧಾರವಾಡ ಜಿಲ್ಲೆಯ ಬೊಕೊಪ್ಪ ಮೈಲಾರದ ಮೈಲಾರಲಿಂಗೇಶ್ವರ ಜಾತ್ರೆ ಅದ್ಧೂರಿಯಾಗಿ ಜರುಗಿತು.
ಭರತ ಹುಣ್ಣಿಮೆಗೂ ಮುನ್ನವೇ ಮೈಲಾರಲಿಂಗ ಸ್ವಾಮೀಜಿಯ ಜಾತ್ರೆ ಜರುಗುತ್ತದೆ. ಈ ಜಾತ್ರೆಗೆ ರಾಜ್ಯ ಸೇರಿ ಬೇರೆ ರಾಜ್ಯಗಳಿಂದಲೂ ಭಕ್ತರು ಆಗಮಿಸಿದ್ದರು. ಇನ್ನು, ಇಲ್ಲಿ ಮೂರು ಗೊರವಯ್ಯರು ಕಾರ್ಣಿಕ ನುಡಿಯುವುದು ವಿಶೇಷವಾಗಿದ್ದು, ಸುಮಾರು 17 ಅಡಿ ಎತ್ತರದ ಕಬ್ಬಿಣದ ಬಿಲ್ಲನ್ನೇರಿ ಭವಿಷ್ಯವಾಣಿಯನ್ನು ನುಡಿದರು. ಮೈಲಾರ ಕ್ಷೇತ್ರದ ಸುತ್ತಮುತ್ತಲಿನ ಗ್ರಾಮದವರಷ್ಟೇ ಅಲ್ಲದೇ ನೂರಾರು ಕಿಮೀ ದೂರದಿಂದಲೂ ರೈತರು ಬಂಡಿಯಲ್ಲೇ ಕುಟುಂಬ ಸಮೇತ ಬಂದಿದ್ದರು. ಸಾಮಾನ್ಯವಾಗಿ ಪ್ರತಿ ಎತ್ತಿನ ಗಾಡಿ ಜೊತೆ ಒಬ್ಬರು ಕಾಲ್ನಡಿಗೆಯಲ್ಲಿ ಮೈಲಾರಕ್ಕೆ ಬರುವ ರೂಢಿ ಇದೆ.
ಭರತ ಹುಣ್ಣಿಮೆಗೂ ಮುನ್ನವೇ ಮೈಲಾರಲಿಂಗ ಸ್ವಾಮೀಜಿಯ ಜಾತ್ರೆ ಜರುಗುತ್ತದೆ. ಈ ಜಾತ್ರೆಗೆ ರಾಜ್ಯ ಸೇರಿ ಬೇರೆ ರಾಜ್ಯಗಳಿಂದಲೂ ಭಕ್ತರು ಆಗಮಿಸಿದ್ದರು. ಇನ್ನು, ಇಲ್ಲಿ ಮೂರು ಗೊರವಯ್ಯರು ಕಾರ್ಣಿಕ ನುಡಿಯುವುದು ವಿಶೇಷವಾಗಿದ್ದು, ಸುಮಾರು 17 ಅಡಿ ಎತ್ತರದ ಕಬ್ಬಿಣದ ಬಿಲ್ಲನ್ನೇರಿ ಭವಿಷ್ಯವಾಣಿಯನ್ನು ನುಡಿದರು. ಮೈಲಾರ ಕ್ಷೇತ್ರದ ಸುತ್ತಮುತ್ತಲಿನ ಗ್ರಾಮದವರಷ್ಟೇ ಅಲ್ಲದೇ ನೂರಾರು ಕಿಮೀ ದೂರದಿಂದಲೂ ರೈತರು ಬಂಡಿಯಲ್ಲೇ ಕುಟುಂಬ ಸಮೇತ ಬಂದಿದ್ದರು. ಸಾಮಾನ್ಯವಾಗಿ ಪ್ರತಿ ಎತ್ತಿನ ಗಾಡಿ ಜೊತೆ ಒಬ್ಬರು ಕಾಲ್ನಡಿಗೆಯಲ್ಲಿ ಮೈಲಾರಕ್ಕೆ ಬರುವ ರೂಢಿ ಇದೆ.