ಧಾರವಾಡ: 'ದೇವ್ರು ನನ್ನ ಹೊಲಕ್ಕೆ ನೀರು ಕೊಟ್ಟಾನ್ರೀ, ಪ್ರಾಣಿ-ಪಕ್ಷಿಗಳು ಕುಡಿಯಾಕಂತ ನೀರು ಹರಿಸ್ತಿದ್ದೀನ್ರೀ'
1057 views
ಧಾರವಾಡ ವಿಡಿಯೋಗಳಿಗೆ ಚಂದಾದಾರರಾಗಿಧಾರವಾಡ: ಈಗ ಎಲ್ಲಾ ಕಡೆ ಹನಿ ನೀರಿಗೂ ಹಾಹಾಕಾರ, ಕುಡಿಯೋಕೆ, ಬೆಳೆ ಬೆಳೆಯೋಕೆ ನೀರಿಲ್ಲದ ಸ್ಥಿತಿಯಲ್ಲಿ ಪ್ರಾಣಿ ಪಕ್ಷಿಗಳ ಪಾಡು ಕೇಳುವವರು ಯಾರು? ಮೂಕ ಪ್ರಾಣಿಗಳ ಕಷ್ಟ ನೋಡಲಾಗದೇ ಇಲ್ಲೊಬ್ಬ ರೈತರು ತಮ್ಮ ಹೊಲದ ಬೋರ್ವೆಲ್ ನೀರನ್ನು ಬತ್ತಿ ಹೋಗಿರುವ ಹಳ್ಳಕ್ಕೆ ಹರಿಸುತ್ತಿದ್ದಾರೆ. ಇಲ್ಲಿ ಬರುವ ಪ್ರಾಣಿ ಪಕ್ಷಿಗಳು ದಾಹ ತೀರಿಸಿಕೊಳ್ಳುತ್ತಿವೆ.
ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಮಸಳಿಕಟ್ಟಿ ಗ್ರಾಮದ ರೈತ ಗೋವಿಂದ ಗುಂಡಕಲ್ ಅವರು ಹಳ್ಳಕ್ಕೆ ನೀರು ಹರಿಸಿ ನಿಸ್ವಾರ್ಥ ಸೇವೆ ಮಾಡುತ್ತಿದ್ದಾರೆ. ತಮ್ಮ ಜಮೀನಿನಲ್ಲಿರುವ ಬೋರ್ವೆಲ್ನಲ್ಲಿ ''ದೇವ್ರು ನನ್ನ ಹೊಲಕ್ಕೆ ನೀರು ಕೊಟ್ಟಾನ್ರೀ, ಪ್ರಾಣಿಪಕ್ಷಿಗಳು ಕುಡಿಯಾಕಂತ ನೀರು ಹರಿಸ್ತಿದ್ದೀನ್ರೀ '' ಅಂತಾರೆ. ಬೆಳೆಗೆ ಸ್ವಲ್ಪ ನೀರು ಕಡಿಮೆಯಾದ್ರೂ ಪರವಾಗಿಲ್ಲ ಮೂಕ ಪ್ರಾಣಿಗಳಿಗೆ ನೀರು ಸಿಗಲಿ ಅಂತಿದ್ದಾರೆ. ರಣ ಬಿಸಿಲಿನಲ್ಲಿ ಬಾಯಾರಿ ಬರುವ ಜಾನುವಾರುಗಳಿಗೆ ಈ ಹಳ್ಳದಲ್ಲಿ ನೀರು ಕುಡಿಯುತ್ತಿವೆ.
ಕಾಡಂಚಿನಲ್ಲಿರುವ ಜಮೀನಿನಿಂದ ನಿತ್ಯವೂ ಹಳ್ಳಕ್ಕೆ ನೀರು ಹರಿಸುವುದು ನಡೆದಿದೆ. ಹಳ್ಳದಿಂದ ಸುಮಾರು ಇನ್ನೂರು ಮುನ್ನೂರು ಮೀಟರ್ ದೂರದಲ್ಲಿರುವ ಜಮೀನಿನಿಂದ ಪೈಪ್ಗಳನ್ನು ಜೋಡಿಸಿ ನೀರು ಹರಿಸುತ್ತಿದ್ದಾರೆ. ರೈತ ಗೋವಿಂದ ಗುಂಡಕಲ್ ಕಾರ್ಯಕ್ಕೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಮಸಳಿಕಟ್ಟಿ ಗ್ರಾಮದ ರೈತ ಗೋವಿಂದ ಗುಂಡಕಲ್ ಅವರು ಹಳ್ಳಕ್ಕೆ ನೀರು ಹರಿಸಿ ನಿಸ್ವಾರ್ಥ ಸೇವೆ ಮಾಡುತ್ತಿದ್ದಾರೆ. ತಮ್ಮ ಜಮೀನಿನಲ್ಲಿರುವ ಬೋರ್ವೆಲ್ನಲ್ಲಿ ''ದೇವ್ರು ನನ್ನ ಹೊಲಕ್ಕೆ ನೀರು ಕೊಟ್ಟಾನ್ರೀ, ಪ್ರಾಣಿಪಕ್ಷಿಗಳು ಕುಡಿಯಾಕಂತ ನೀರು ಹರಿಸ್ತಿದ್ದೀನ್ರೀ '' ಅಂತಾರೆ. ಬೆಳೆಗೆ ಸ್ವಲ್ಪ ನೀರು ಕಡಿಮೆಯಾದ್ರೂ ಪರವಾಗಿಲ್ಲ ಮೂಕ ಪ್ರಾಣಿಗಳಿಗೆ ನೀರು ಸಿಗಲಿ ಅಂತಿದ್ದಾರೆ. ರಣ ಬಿಸಿಲಿನಲ್ಲಿ ಬಾಯಾರಿ ಬರುವ ಜಾನುವಾರುಗಳಿಗೆ ಈ ಹಳ್ಳದಲ್ಲಿ ನೀರು ಕುಡಿಯುತ್ತಿವೆ.
ಕಾಡಂಚಿನಲ್ಲಿರುವ ಜಮೀನಿನಿಂದ ನಿತ್ಯವೂ ಹಳ್ಳಕ್ಕೆ ನೀರು ಹರಿಸುವುದು ನಡೆದಿದೆ. ಹಳ್ಳದಿಂದ ಸುಮಾರು ಇನ್ನೂರು ಮುನ್ನೂರು ಮೀಟರ್ ದೂರದಲ್ಲಿರುವ ಜಮೀನಿನಿಂದ ಪೈಪ್ಗಳನ್ನು ಜೋಡಿಸಿ ನೀರು ಹರಿಸುತ್ತಿದ್ದಾರೆ. ರೈತ ಗೋವಿಂದ ಗುಂಡಕಲ್ ಕಾರ್ಯಕ್ಕೆ ಸ್ಥಳೀಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.